newsfirstkannada.com

Video- ಸ್ವಕ್ಷೇತ್ರದಲ್ಲಿ ಸಚಿವೆ ಪ್ರವಾಸ.. ಲಕ್ಷ್ಮಿ ಹೆಬ್ಬಾಳ್ಕರ್ ಕೆನ್ನೆ ಸವರಿದ ವೃದ್ಧೆ

Share :

Published March 3, 2024 at 2:38pm

Update March 3, 2024 at 2:40pm

    ಮೊಮ್ಮಕ್ಕಳು, ನಾವು ಹೊಟ್ಟೆ ತುಂಬಾ ಊಟ ಮಾಡ್ತಿದ್ದೀವಿ

    ಗ್ಯಾರಂಟಿ ಕುರಿತು ಪ್ರಶ್ನೆ ಕೇಳಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್..!

    ವೃದ್ಧೆ ಕೆನ್ನೆ ಸವರಿದ್ದಕ್ಕೆ ಸುತ್ತಲಿದ್ದ ಜನರೆಲ್ಲ ಜೋರಾಗಿ ನಕ್ಕರು

ಬೆಳಗಾವಿ: ತಮ್ಮ ಸ್ವಕ್ಷೇತ್ರದ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕೆನ್ನೆ ಸವರಿ ಆಗೈತೆಯವ್ವ ನನ್ನ ಬಂಗಾರ ಗಿಂಡೆ ಎಂದು ಹೇಳಿ ವೃದ್ಧೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಪ್ರವಾಸದಲ್ಲಿದ್ದರು. ಈ ವೇಳೆ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳಿಂದ ಅನುಕೂಲ ಆಗಿದೆಯಾ, ಇಲ್ವಾ ಎಂದು ವೃದ್ಧೆಯ ಭುಜದ ಮೇಲೆ ಕೈ ಹಾಕಿ ಸಲುಗೆಯಿಂದ ಸಚಿವೆ ಕೇಳುತ್ತಿರುತ್ತಾರೆ.

ಈ ವೇಳೆ ವೃದ್ಧೆ, ಮಕ್ಕಳು-ಮರಿ ಎಲ್ಲ ಈಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೀವಿ. ಮೊಮ್ಮಕ್ಕಳಿಗೂ ಕೊಡುತ್ತಿದ್ದೇವೆ. ಗ್ಯಾರಂಟಿಗಳಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಹಾಗೇ ಮಾತನಾಡುತ್ತ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲ್ಲವನ್ನು ಸವರಿ ಆಗೈತೆಯವ್ವ ನನ್ನ ಬಂಗಾರ ಗಿಂಡೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು. ಇನ್ನು ಸಚಿವೆ ಕೂಡ ವೃದ್ಧೆಯ ಮಾತುಗಳಿಂದ ಫುಲ್ ಖುಷಿ ವ್ಯಕ್ತಪಡಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಇಲಾಖೆಯ ವ್ಯಾಪ್ತಿಯ ಗ್ಯಾರಂಟಿ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಮತ್ತು ವಿಶೇಷವಾಗಿ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿಗಳು ಜನರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- ಸ್ವಕ್ಷೇತ್ರದಲ್ಲಿ ಸಚಿವೆ ಪ್ರವಾಸ.. ಲಕ್ಷ್ಮಿ ಹೆಬ್ಬಾಳ್ಕರ್ ಕೆನ್ನೆ ಸವರಿದ ವೃದ್ಧೆ

https://newsfirstlive.com/wp-content/uploads/2024/03/BGM_LAXMI_HEBBALKAR.jpg

    ಮೊಮ್ಮಕ್ಕಳು, ನಾವು ಹೊಟ್ಟೆ ತುಂಬಾ ಊಟ ಮಾಡ್ತಿದ್ದೀವಿ

    ಗ್ಯಾರಂಟಿ ಕುರಿತು ಪ್ರಶ್ನೆ ಕೇಳಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್..!

    ವೃದ್ಧೆ ಕೆನ್ನೆ ಸವರಿದ್ದಕ್ಕೆ ಸುತ್ತಲಿದ್ದ ಜನರೆಲ್ಲ ಜೋರಾಗಿ ನಕ್ಕರು

ಬೆಳಗಾವಿ: ತಮ್ಮ ಸ್ವಕ್ಷೇತ್ರದ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕೆನ್ನೆ ಸವರಿ ಆಗೈತೆಯವ್ವ ನನ್ನ ಬಂಗಾರ ಗಿಂಡೆ ಎಂದು ಹೇಳಿ ವೃದ್ಧೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಪ್ರವಾಸದಲ್ಲಿದ್ದರು. ಈ ವೇಳೆ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಗಳಿಂದ ಅನುಕೂಲ ಆಗಿದೆಯಾ, ಇಲ್ವಾ ಎಂದು ವೃದ್ಧೆಯ ಭುಜದ ಮೇಲೆ ಕೈ ಹಾಕಿ ಸಲುಗೆಯಿಂದ ಸಚಿವೆ ಕೇಳುತ್ತಿರುತ್ತಾರೆ.

ಈ ವೇಳೆ ವೃದ್ಧೆ, ಮಕ್ಕಳು-ಮರಿ ಎಲ್ಲ ಈಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೀವಿ. ಮೊಮ್ಮಕ್ಕಳಿಗೂ ಕೊಡುತ್ತಿದ್ದೇವೆ. ಗ್ಯಾರಂಟಿಗಳಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಹಾಗೇ ಮಾತನಾಡುತ್ತ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲ್ಲವನ್ನು ಸವರಿ ಆಗೈತೆಯವ್ವ ನನ್ನ ಬಂಗಾರ ಗಿಂಡೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು. ಇನ್ನು ಸಚಿವೆ ಕೂಡ ವೃದ್ಧೆಯ ಮಾತುಗಳಿಂದ ಫುಲ್ ಖುಷಿ ವ್ಯಕ್ತಪಡಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಇಲಾಖೆಯ ವ್ಯಾಪ್ತಿಯ ಗ್ಯಾರಂಟಿ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಮತ್ತು ವಿಶೇಷವಾಗಿ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿಗಳು ಜನರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More