Advertisment

CM ಸ್ಥಾನಕ್ಕಾಗಿ RAC ಟಿಕೆಟ್, ಟ್ರಾಫಿಕ್ ಜಾಮ್ ಆದ್ರೆ ನಂಗೂ ಸಿಗಬಹುದು- ದೆಹಲಿ ಭೇಟಿ ಬೆನ್ನಲ್ಲೇ ಸತೀಶ್ ನಿಗೂಢ ಹೇಳಿಕೆ

author-image
Ganesh
Updated On
CM ಸ್ಥಾನಕ್ಕಾಗಿ RAC ಟಿಕೆಟ್, ಟ್ರಾಫಿಕ್ ಜಾಮ್ ಆದ್ರೆ ನಂಗೂ ಸಿಗಬಹುದು- ದೆಹಲಿ ಭೇಟಿ ಬೆನ್ನಲ್ಲೇ ಸತೀಶ್ ನಿಗೂಢ ಹೇಳಿಕೆ
Advertisment
  • ಸಿಎಂ ರೇಸ್​ ಬಗ್ಗೆ ಸತೀಶ್ ಜಾರಕಿಹೊಳಿ ಏನಂದ್ರು?
  • ಸಿಎಂ ಸ್ಥಾನದ ಬಗ್ಗೆ ಮಾರ್ಮಿಕ ಹೇಳಿಕೆ ಕೊಟ್ಟ ಸಚಿವ
  • ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಜಾರಕಿಹೊಳಿ

ಬೆಂಗಳೂರು: ಎಲ್ಲರೂ RAC ಟಿಕೆಟ್ ಇಟ್ಕೊಂಡು ಸಿಎಂ ಹುದ್ದೆಗೆ ಕಾಯ್ತಿದ್ದಾರೆ. ಟ್ರಾಫಿಕ್ ಜಾಮ್ ಆದರೆ ನನಗೆ ಸಿಕ್ಕರೂ ಸಿಗಬಹುದು ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Advertisment

ದೆಹಲಿ ಪ್ರವಾಸ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು.. ಡಿಸಿಎಂ ಸುರೇಶ್ ಕೂಡ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿತಾರೆ ಎಂದಿದ್ದಾರೆ. ಕ್ಲೈಂ ಮಾಡೋರೇ ಸಿಎಂ ಹುದ್ದೆಯ ಬಗ್ಗೆ ಹೇಳಿದ್ದಾರೆ. ಸಿಎಂ ವಿಚಾರದ ಬಗ್ಗೆ ಕ್ಲೖಮ್ ಮಾಡಲು ಎಲ್ಲರಿಗೂ ಅವಕಾಶ ಇದೆ. ಎಲ್ಲರೂ RAC ಟಿಕೆಟ್ ಇಟ್ಕೊಂಡು ಸಿಎಂ ಹುದ್ದೆಗೆ ಕಾಯ್ತಿದ್ದಾರೆ. 2028ರಲ್ಲೂ RAC ಆಗಬಹುದು, ನಮ್ಮಕಡೆನೂ RAC ಇದೆ.
RACಯಲ್ಲಿ ಟಿಕೆಟ್ ಸಿಗುತ್ತೆ ಅನ್ನೋದು ಕನ್ಫರ್ಮ್ ಇಲ್ಲ. ಟ್ರಾಫಿಕ್ ಜಾಮ್​ನಲ್ಲಿ ಮೆಜೆಸ್ಟಿಕ್​ನಲ್ಲಿ ಕೂತರೆ ಸ್ಟೇಷನ್​​ಗೆ ಬರೋದು ಲೇಟ್ ಆಗುತ್ತೆ. ಜಾಮ್ ಆದರೆ ನಮಗೆ ಚಾನ್ಸ್​ ಸಿಕ್ಕರೂ ಸಿಗಬಹುದು, ಹೇಳೋಕೆ ಆಗಲ್ಲ. ಆದರೆ ನನಗೆ ಬೇಗ ಸಿಗಬಹುದು ಅಂತಾ ಮಾರ್ಮಿಕವಾಗಿ ಮಾತನಾಡಿದ್ದಾರೆ.

ವರಿಷ್ಠರ ಭೇಟಿಯ ಸಂದರ್ಭದಲ್ಲಿ ಕೆಪಿಸಿಸಿ ಆಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಿಲ್ಲ. ನಾನು ದೆಹಲಿಗೆ ಹೋದೆ ಎಂದು ಶಿವಕುಮಾರ್ ದೆಹಲಿಗೆ ಬಂದಿಲ್ಲ. ಸಚಿವ ಎಂ.ಬಿ. ಪಾಟೀಲ್ ನನ್ನನ್ನು ಭೇಟಿಯಾಗಿದ್ದು, ಅಭಿವೃದ್ಧಿ ಸಂಬಂಧ, ಬದಲಾವಣೆ ಬಗ್ಗೆ ನಮ್ಮ ನಮ್ಮ ಕಡೆ ಇಲ್ಲ, ವರಿಷ್ಠರನ್ನ ಕೇಳಬೇಕು ಎಂದರು. ಇದೇ ವೇಳೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಬೆಲೆ ಏರಿಕೆ ಎಲ್ಲಾ ಸರ್ಕಾರದಲ್ಲೂ ಇರುತ್ತೆ. 10-20 ವರ್ಷದ ದೂರದೃಷ್ಟಿ ಇಟ್ಟು ಸರ್ಕಾರ ನಿರ್ಧಾರ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಬ್ಯಾಕಾಂಕ್​ನಲ್ಲಿ ಪ್ರಬಲ ಭೂಕಂಪ; ಬೃಹತ್​ ಕಟ್ಟಡ ಧರೆಗುರುಳಿದ ಭಯಾನಕ ದೃಶ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment
Advertisment