newsfirstkannada.com

ಐಷಾರಾಮಿ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಅಪ್ರಾಪ್ತ.. ಸ್ಥಳದಲ್ಲೇ ಇಬ್ಬರು ಸಾವು

Share :

Published May 19, 2024 at 5:20pm

Update May 19, 2024 at 5:10pm

    ಅಪ್ರಾಪ್ತ ಮಾಡಿದ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ಇಬ್ಬರು

    ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸವಾರರಿಗೆ ಮಸಣ ತೋರಿಸಿದ

    ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳು​

ಮುಂಬೈ: ಅಪ್ರಾಪ್ತ ಬಾಲಕನೊಬ್ಬ ಐಷಾರಾಮಿ ಪೋರ್ಶ್ ಟೈಕಾನ್​ ಕಾರನ್ನು ವೇಗವಾಗಿ ಡ್ರೈವ್​ ಮಾಡಿಕೊಂಡು ಬಂದು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯ ಕಲ್ಯಾಣ ನಗರದಲ್ಲಿ ನಡೆದಿದೆ.

ಮೃತರನ್ನು ಅನೀಶ್ ಅವಾಡಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ. ಐಷಾರಾಮಿ ಫೋರ್ಶ್ ಕಾರನ್ನು ಅಪ್ರಾಪ್ತ ವೇದಾಂತ್ ಅಗರ್ವಾಲ್ (17) ಚಾಲನೆ ಮಾಡಿದ್ದಾನೆ. ಮೃತಪಟ್ಟಿರುವ ಇಬ್ಬರು ಪಾರ್ಟಿಯನ್ನು ಮುಗಿಸಿಕೊಂಡು ಬೈಕ್​ನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಲ್ಯಾಣ ನಗರದ ಜಂಕ್ಷನ್​ ಬಳಿ ಪೋರ್ಶ್​ ಟೈಕಾನ್ ಕಾರಿನಲ್ಲಿ ಅತಿ ವೇಗವಾಗಿ ಬಂದು ಬೈಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

 

ಪರಿಣಾಮ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ ಹಾರಿಕೊಂಡು ಹೋಗಿ ಇನ್ನೊಂದು ಕಾರಿನಡಿ ಬಿದ್ದಿದ್ದಾರೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕಾರು ಆಕ್ಸಿಡೆಂಟ್​​ ಆಗುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದು ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಯರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಷಾರಾಮಿ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಅಪ್ರಾಪ್ತ.. ಸ್ಥಳದಲ್ಲೇ ಇಬ್ಬರು ಸಾವು

https://newsfirstlive.com/wp-content/uploads/2024/05/PUNE_CAR.jpg

    ಅಪ್ರಾಪ್ತ ಮಾಡಿದ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ಇಬ್ಬರು

    ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸವಾರರಿಗೆ ಮಸಣ ತೋರಿಸಿದ

    ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳು​

ಮುಂಬೈ: ಅಪ್ರಾಪ್ತ ಬಾಲಕನೊಬ್ಬ ಐಷಾರಾಮಿ ಪೋರ್ಶ್ ಟೈಕಾನ್​ ಕಾರನ್ನು ವೇಗವಾಗಿ ಡ್ರೈವ್​ ಮಾಡಿಕೊಂಡು ಬಂದು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯ ಕಲ್ಯಾಣ ನಗರದಲ್ಲಿ ನಡೆದಿದೆ.

ಮೃತರನ್ನು ಅನೀಶ್ ಅವಾಡಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ. ಐಷಾರಾಮಿ ಫೋರ್ಶ್ ಕಾರನ್ನು ಅಪ್ರಾಪ್ತ ವೇದಾಂತ್ ಅಗರ್ವಾಲ್ (17) ಚಾಲನೆ ಮಾಡಿದ್ದಾನೆ. ಮೃತಪಟ್ಟಿರುವ ಇಬ್ಬರು ಪಾರ್ಟಿಯನ್ನು ಮುಗಿಸಿಕೊಂಡು ಬೈಕ್​ನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಲ್ಯಾಣ ನಗರದ ಜಂಕ್ಷನ್​ ಬಳಿ ಪೋರ್ಶ್​ ಟೈಕಾನ್ ಕಾರಿನಲ್ಲಿ ಅತಿ ವೇಗವಾಗಿ ಬಂದು ಬೈಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

 

ಪರಿಣಾಮ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ ಹಾರಿಕೊಂಡು ಹೋಗಿ ಇನ್ನೊಂದು ಕಾರಿನಡಿ ಬಿದ್ದಿದ್ದಾರೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕಾರು ಆಕ್ಸಿಡೆಂಟ್​​ ಆಗುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದು ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಯರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More