newsfirstkannada.com

ದೊಡ್ಡಪ್ಪನ ಮಗಳನ್ನು ಪ್ರೀತಿಸಿದಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published July 16, 2023 at 3:15pm

Update July 16, 2023 at 3:42pm

    ಇನ್ನೊವಾದಲ್ಲಿ ಬಂದು ಯುವಕನನ್ನು ಕಿಡ್ನಾಪ್​ ಮಾಡಿದ ಕಿರಾತಕರು

    ಶಶಾಂಕ್​ನನ್ನು ಕೈ-ಕಾಲು ಕಟ್ಟಿ ಹೊತ್ತೊಯ್ದು ಪೆಟ್ರೋಲ್​​ ಸುರಿದರು

    ಬಸ್​ಗೆ ಕಾಯುತ್ತಿದ್ದವನನ್ನ ಕಿಡ್ನಾಪ್​ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ದೊಡ್ಡಪ್ಪನ ಮಗಳನ್ನು ಪ್ರೀತಿಸಿದ ಕಾರಣಕ್ಕೆ ಶಶಾಂಕ್ ಎಂಬ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆ ಆರ್.ಆರ್​ ನಗರದಲ್ಲಿ ನಡೆದಿದೆ. ಆದರೀಗ ಈ ಘಟನೆಗೆ ಸಾಕ್ಷಿಯಾಗಿರುವ ಮಹತ್ವದ ಸಿಸಿಟಿವಿ ವಿಡಿಯೋ ಬಯಲಾಗಿದೆ.

ಕಾಲೇಜಿಗೆ ತೆರಳುತಿದ್ದ ವೇಳೆ ಇನ್ನೊವಾ ಕಾರಿನಲ್ಲಿ ಬಂದ ಕಿರಾತಕರು ಶಶಾಂಕ್​ನನ್ನು ಕಿಡ್ನಾಪ್ ಮಾಡಿ ಕೃತ್ಯವೆಸಗಿದ್ದಾರೆ. ಬಳಿಕ ಶಶಾಂಕ್​ನನ್ನು ಕೈ-ಕಾಲು ಕಟ್ಟಿ ಹೊತ್ತೊಯ್ದು ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಯುವತಿ

ಆರ್ ಆರ್‌ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್​ ಮೇಲೆ ಕಿರಾತಕರು ಪೆಟ್ರೋಲ್​ ಸುರಿದು ಬೆಂಕಿ ಹಾಕಿದ್ದಾರೆ. ಶಶಾಂಕ್ ತನ್ನ ದೊಡ್ಡಪ್ಪನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಸೋಮವಾರದಂದು ಮೈಸೂರಿನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು.

ಶಶಾಂಕ್ ಮನೆಗೆ ನುಗ್ಗಿ ಹಲ್ಲೆ

ತನ್ನನ್ನು ನಂಬಿ ಬೆಂಗಳೂರಿಗೆ ಬಂದ ಯುವತಿಯ‌ನ್ನು ಶಶಾಂಕ್ ಮನೆಗೆ ಕರೆದೊಯ್ದಿದ್ದನು. ಈ ವೇಳೆ ಯುವತಿಯ ಪೋಷಕರು ಶಶಾಂಕ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಯುವತಿ ಸಹವಾಸಕ್ಕೆ ಹೋಗಲ್ಲ ಎಂದು ಹೇಳಿ ಶಶಾಂಕ್ ತನ್ನ ಪಾಡಿಗೆ ಕಾಲೇಜಿಗೆ ಹೋಗಿದ್ದಾನೆ.

ನಿನ್ನೆ ಬೆಳಗ್ಗ ತಂದೆ ರಂಗನಾಥ ಶಶಾಂಕ್​​ನನ್ನು ಕಾಲೇಜಿಗೆ ಡ್ರಾಪ್ ಮಾಡಿದ್ದಾರೆ.ಈ ವೇಳೆ ಬಸ್ ನಿಲ್ದಾಣದಲ್ಲಿ‌ ಬಸ್​ಗೆ ಕಾಯುತಿದ್ದ ಶಶಾಂಕ್​​​ನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿಹಾಕಿದ್ದಾರೆ. ಬಳಿಕ ಪೆಟ್ರೋಲ್​ ಸುರಿದು ಬೆಂಕಿ ಇಟ್ಟಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸದ್ಯ ಶಶಾಂಕ್ ಬೆಂಕಿಯ ತಗುಲಿ ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಈ ಪ್ರಕರಣ ಸಂಬಂಧಿಸಿದಂತೆ ಕುಂಬಳಗೋಡು ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದೊಡ್ಡಪ್ಪನ ಮಗಳನ್ನು ಪ್ರೀತಿಸಿದಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/07/Kidnap.jpg

    ಇನ್ನೊವಾದಲ್ಲಿ ಬಂದು ಯುವಕನನ್ನು ಕಿಡ್ನಾಪ್​ ಮಾಡಿದ ಕಿರಾತಕರು

    ಶಶಾಂಕ್​ನನ್ನು ಕೈ-ಕಾಲು ಕಟ್ಟಿ ಹೊತ್ತೊಯ್ದು ಪೆಟ್ರೋಲ್​​ ಸುರಿದರು

    ಬಸ್​ಗೆ ಕಾಯುತ್ತಿದ್ದವನನ್ನ ಕಿಡ್ನಾಪ್​ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ದೊಡ್ಡಪ್ಪನ ಮಗಳನ್ನು ಪ್ರೀತಿಸಿದ ಕಾರಣಕ್ಕೆ ಶಶಾಂಕ್ ಎಂಬ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆ ಆರ್.ಆರ್​ ನಗರದಲ್ಲಿ ನಡೆದಿದೆ. ಆದರೀಗ ಈ ಘಟನೆಗೆ ಸಾಕ್ಷಿಯಾಗಿರುವ ಮಹತ್ವದ ಸಿಸಿಟಿವಿ ವಿಡಿಯೋ ಬಯಲಾಗಿದೆ.

ಕಾಲೇಜಿಗೆ ತೆರಳುತಿದ್ದ ವೇಳೆ ಇನ್ನೊವಾ ಕಾರಿನಲ್ಲಿ ಬಂದ ಕಿರಾತಕರು ಶಶಾಂಕ್​ನನ್ನು ಕಿಡ್ನಾಪ್ ಮಾಡಿ ಕೃತ್ಯವೆಸಗಿದ್ದಾರೆ. ಬಳಿಕ ಶಶಾಂಕ್​ನನ್ನು ಕೈ-ಕಾಲು ಕಟ್ಟಿ ಹೊತ್ತೊಯ್ದು ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಯುವತಿ

ಆರ್ ಆರ್‌ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್​ ಮೇಲೆ ಕಿರಾತಕರು ಪೆಟ್ರೋಲ್​ ಸುರಿದು ಬೆಂಕಿ ಹಾಕಿದ್ದಾರೆ. ಶಶಾಂಕ್ ತನ್ನ ದೊಡ್ಡಪ್ಪನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಸೋಮವಾರದಂದು ಮೈಸೂರಿನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು.

ಶಶಾಂಕ್ ಮನೆಗೆ ನುಗ್ಗಿ ಹಲ್ಲೆ

ತನ್ನನ್ನು ನಂಬಿ ಬೆಂಗಳೂರಿಗೆ ಬಂದ ಯುವತಿಯ‌ನ್ನು ಶಶಾಂಕ್ ಮನೆಗೆ ಕರೆದೊಯ್ದಿದ್ದನು. ಈ ವೇಳೆ ಯುವತಿಯ ಪೋಷಕರು ಶಶಾಂಕ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಯುವತಿ ಸಹವಾಸಕ್ಕೆ ಹೋಗಲ್ಲ ಎಂದು ಹೇಳಿ ಶಶಾಂಕ್ ತನ್ನ ಪಾಡಿಗೆ ಕಾಲೇಜಿಗೆ ಹೋಗಿದ್ದಾನೆ.

ನಿನ್ನೆ ಬೆಳಗ್ಗ ತಂದೆ ರಂಗನಾಥ ಶಶಾಂಕ್​​ನನ್ನು ಕಾಲೇಜಿಗೆ ಡ್ರಾಪ್ ಮಾಡಿದ್ದಾರೆ.ಈ ವೇಳೆ ಬಸ್ ನಿಲ್ದಾಣದಲ್ಲಿ‌ ಬಸ್​ಗೆ ಕಾಯುತಿದ್ದ ಶಶಾಂಕ್​​​ನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿಹಾಕಿದ್ದಾರೆ. ಬಳಿಕ ಪೆಟ್ರೋಲ್​ ಸುರಿದು ಬೆಂಕಿ ಇಟ್ಟಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸದ್ಯ ಶಶಾಂಕ್ ಬೆಂಕಿಯ ತಗುಲಿ ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಈ ಪ್ರಕರಣ ಸಂಬಂಧಿಸಿದಂತೆ ಕುಂಬಳಗೋಡು ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More