newsfirstkannada.com

ಸುದೀಪ್ vs ಎಮ್.ಎನ್.ಕುಮಾರ್; ಕಿಚ್ಚನ ವಿರುದ್ಧ ಮುಂದಿನ ಹೆಜ್ಜೆ ಇಡಲು ಮುಂದಾದ ಮಾಣಿಕ್ಯ ನಿರ್ಮಾಪಕ

Share :

Published July 5, 2023 at 9:35am

    ನಟ ಕಿಚ್ಚ ಸುದೀಪ್​ ವಿರುದ್ಧ ನಿರ್ಮಾಪಕ ಫುಲ್​ ಗರಂ

    ಸಾಲು ಆರೋಪಕ್ಕೆ ‘ಮಾಣಿಕ್ಯ’ನ ಖಡಕ್​​ ಉತ್ತರ ಏನು?

    ಕಿಚ್ಚನ ಮೇಲೆ ತಿರುಗಿಬಿದ್ದ ನಿರ್ಮಾಪಕ ಹೇಳಿದ್ದೇನು..?

ಸ್ಯಾಂಡಲ್​ವುಡ್​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್​ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು.

ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕ  ಪರೋಕ್ಷವಾಗಿ ಉತ್ತರ ನೀಡಿದ್ದರು​. ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್​​ ಮಾಡಿದ್ದಾರೆ. ನಟ ಕಿಚ್ಚ ಸುದೀಪ್​ ಮಾಡಿದ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಸಹ ಆಗಿತ್ತು.

ಇದೀಗ ಈ ವಿಚಾರ ಮುಂದಿನ ಹಂತ ತಲುಪುವ ಸಾಧ್ಯತೆ ಇದೆ. ಇನ್ನು ಈ ಕುರಿತು ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಎಮ್.ಎನ್.ಕುಮಾರ್ ಅವರು, ಇಂದು ಈ ಸಂಬಂಧ ನಿರ್ಮಾಪಕ ಸಂಘದಲ್ಲಿ ಸಭೆ ಮಾಡಲಿದ್ದೇವೆ. ಈ ಬಗ್ಗೆ ನಿರ್ಮಾಪಕ ಸಂಘ ಸಲಹೆ ಕೇಳಿ ಮುಂದುವರೆಯುದಾಗಿ ಎಮ್.ಎನ್.ಕುಮಾರ್ ನ್ಯೂಸ್​ಫಸ್ಟ್​​ಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸುದೀಪ್ vs ಎಮ್.ಎನ್.ಕುಮಾರ್; ಕಿಚ್ಚನ ವಿರುದ್ಧ ಮುಂದಿನ ಹೆಜ್ಜೆ ಇಡಲು ಮುಂದಾದ ಮಾಣಿಕ್ಯ ನಿರ್ಮಾಪಕ

https://newsfirstlive.com/wp-content/uploads/2023/07/kiccha-20.jpg

    ನಟ ಕಿಚ್ಚ ಸುದೀಪ್​ ವಿರುದ್ಧ ನಿರ್ಮಾಪಕ ಫುಲ್​ ಗರಂ

    ಸಾಲು ಆರೋಪಕ್ಕೆ ‘ಮಾಣಿಕ್ಯ’ನ ಖಡಕ್​​ ಉತ್ತರ ಏನು?

    ಕಿಚ್ಚನ ಮೇಲೆ ತಿರುಗಿಬಿದ್ದ ನಿರ್ಮಾಪಕ ಹೇಳಿದ್ದೇನು..?

ಸ್ಯಾಂಡಲ್​ವುಡ್​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್​ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು.

ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕ  ಪರೋಕ್ಷವಾಗಿ ಉತ್ತರ ನೀಡಿದ್ದರು​. ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್​​ ಮಾಡಿದ್ದಾರೆ. ನಟ ಕಿಚ್ಚ ಸುದೀಪ್​ ಮಾಡಿದ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಸಹ ಆಗಿತ್ತು.

ಇದೀಗ ಈ ವಿಚಾರ ಮುಂದಿನ ಹಂತ ತಲುಪುವ ಸಾಧ್ಯತೆ ಇದೆ. ಇನ್ನು ಈ ಕುರಿತು ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಎಮ್.ಎನ್.ಕುಮಾರ್ ಅವರು, ಇಂದು ಈ ಸಂಬಂಧ ನಿರ್ಮಾಪಕ ಸಂಘದಲ್ಲಿ ಸಭೆ ಮಾಡಲಿದ್ದೇವೆ. ಈ ಬಗ್ಗೆ ನಿರ್ಮಾಪಕ ಸಂಘ ಸಲಹೆ ಕೇಳಿ ಮುಂದುವರೆಯುದಾಗಿ ಎಮ್.ಎನ್.ಕುಮಾರ್ ನ್ಯೂಸ್​ಫಸ್ಟ್​​ಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More