/newsfirstlive-kannada/media/post_attachments/wp-content/uploads/2025/02/SHAMI_1.jpg)
ಬೂಮ್ರಾ ಇಲ್ಲದರೇನು, ಮೊಹಮ್ಮದ್ ಶಮಿ ಇದ್ದಾರೆ ಅನ್ನೋ ಸಮಾಧಾನ ಫ್ಯಾನ್ಸ್ ವಲಯದಲ್ಲಿತ್ತು. ಆದ್ರೆ, ಪಾಕ್ ಎದುರಿನ ಪಂದ್ಯ ನೋಡಿದ ಮೇಲೆ, ಶಮಿ ಇವತ್ತೋ, ನಾಳೆ ಟೂರ್ನಿಯಿಂದಲೇ ಔಟ್ ಆಗೋದು ಗ್ಯಾರಂಟಿ ಅನ್ನೋದು ಕನ್ಫರ್ಮ್ ಆಗಿದೆ. ಟೂರ್ನಿಯಿಂದ ಮಾತ್ರವಲ್ಲ, ವೈಟ್ಬಾಲ್ ಕರಿಯರಿಂದ ಹೊರ ನಡೆದರೂ ಅಚ್ಚರಿ ಪಡಬೇಕಿಲ್ಲ.
ಚಾಂಪಿಯನ್ಸ್ ಟ್ರೋಫಿಯ ಫಸ್ಟ್ ಮ್ಯಾಚ್. ಒಂದಲ್ಲ, ಎರಡಲ್ಲ ಬರೋಬ್ಬರಿ 5 ವಿಕೆಟ್ ಉರುಳಿಸಿದ್ದ ಮೊಹಮ್ಮದ್ ಶಮಿ ಸೆನ್ಸೇಷನ್ ಸೃಷ್ಟಿಸಿದ್ದರು. ಬೂಮ್ರಾ ಇಲ್ಲದೇ ಬಡವಾಗಿದ್ದ ಬೌಲಿಂಗ್ ವಿಭಾಗಕ್ಕೆ ನಾನೇ ಬಲ ಎಂದು ಸಂದೇಶ ರವಾನಿಸಿದರು. ಇದನ್ನ ನೋಡಿದ್ದ ಫ್ಯಾನ್ಸ್ ಖುಷಿಯಲ್ಲೇ ತೇಲಾಡಿದ್ದರು. ಆದ್ರೆ, 2ನೇ ಮ್ಯಾಚ್ನಲ್ಲಿ ಎಲ್ಲವೂ ಬದಲಾಯಿತು.
ಪಾಕ್ ವಿರುದ್ಧ ಮೊದಲ ಓವರ್ನಲ್ಲೇ 5 ವೈಡ್..!
ಬಾಂಗ್ಲಾ ಎದುರು 5 ವಿಕೆಟ್ ಬೇಟೆಯಾಡಿ ಗಮನ ಸೆಳೆದಿದ್ದ ಮೊಹಮ್ಮದ್ ಶಮಿ ಮೇಲೆ ಪಾಕ್ ವಿರುದ್ಧದ ಹೈವೋಲ್ಟೇಜ್ ಕದನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಹೊಸ ಬಾಲ್ ಹಿಡಿದು ದಾಳಿಗಿಳಿದ ಶಮಿ ಮೊದಲ ಓವರ್ ಓವರ್ನಲ್ಲೇ ಬರೋಬ್ಬರಿ 5 ವೈಡ್ ಬಾಲ್ ಎಸೆದರು. ಮೊದಲ ಓವರ್ನ ಈ 5 ವೈಡ್ಗಳೇ ಶಮಿ ಫಿಟ್ನೆಸ್ ಕತೆ ಹೇಳುತ್ತಿವೆ.
ಪಂದ್ಯದಲ್ಲಿ ತನ್ನ ಕೋಟಾದ ಮೊದಲ ಎರಡು ಓವರ್ ಮುಗಿಸಿದ್ದ ಶಮಿ, 3ನೇ ಓವರ್ನ 4ನೇ ಎಸೆತ ಎಸೆಯುತಿದ್ದಂತೆ ಇಂಜುರಿಗೆ ತುತ್ತಾದರು. ಬೌಲ್ ಮಾಡಿ ವಾಪಾಸ್ಸಾಗ್ತಿದ್ದಂತೆ ಫಿಸಿಯೋ ಮೈದಾನಕ್ಕೆ ಎಂಟ್ರಿ ನೀಡಿದರು. ಟ್ರೀಟ್ಮೆಂಟ್ ಪಡೆದ ಶಮಿ ಮತ್ತೆರೆಡು ಎಸೆತ ಎಸೆದು ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದರು. ಕೆಲ ಕಾಲ ವಿಶ್ರಾಂತಿ ಪಡೆದು ಬಂದ ಶಮಿ ಬಳಿಕ ಮತ್ತೆ ಬೌಲಿಂಗ್ ಮಾಡಿದರು. ಆದ್ರೆ, ಸ್ಪೆಲ್ ಮುಗಿದ ಬೆನ್ನಲ್ಲೇ ಮತ್ತೆ ಡ್ರೆಸ್ಸಿಂಗ್ ರೂಮ್ ಸೇರಿದರು. ಶಮಿ ಹೀಗೆ ಪದೇ ಪದೇ ವಿಶ್ರಾಂತಿಯ ಮೊರೆ ಹೋಗಿದ್ದು ಫಿಟ್ನೆಸ್ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.
ತರಾತುರಿಯಲ್ಲಿ ಶಮಿಯನ್ನ ಆಡಿಸಿದ್ರಾ..?
ಪಾಕ್ ಎದುರಿನ ಮ್ಯಾಚ್ನಲ್ಲಿ ಸೆಟಲ್ಡ್ ಆಗಿ ಬೌಲಿಂಗ್ ಮಾಡದ ಶಮಿಯನ್ನು ನೋಡಿದ ಯಾರಿಗಾದರೂ ಫಿಟ್ಟಾ, ಅನ್ಫಿಟ್ಟಾ ಅನ್ನೋ ಸಂದೇಹ ಹುಟ್ಟದೇ ಇರಲ್ಲ. ಯಾಕಂದ್ರೆ, 2023ರ ಏಕದಿನ ವಿಶ್ವಕಪ್ ಬಳಿಕ ಇಂಜುರಿಯಿಂದ ಚೇತರಿಸಿಕೊಳ್ಳುವುದರಲ್ಲೇ ದಿನ ದೂಡಿದ್ದ ಶಮಿ, ಕಳೆದ ತಿಂಗಳು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುನ್ನವೂ ಕಾಲು ಊತದಿಂದ ಬಳಲಿದ್ದರು. ಇದರ ಹೊರತಾಗಿ ಇಂಗ್ಲೆಂಡ್ ಎದುರಿನ ಟಿ20, ಏಕದಿನ ಸರಣಿಯಲ್ಲಿ ಸ್ಥಾನ ನೀಡಿದ ಸೆಲೆಕ್ಷನ್ ಕಮಿಟಿ, ಚಾಂಪಿಯನ್ಸ್ ಟ್ರೋಫಿಗೂ ಅವಕಾಶ ನೀಡಿದೆ. ಈಗ ಮತ್ತೆ ಇಂಜುರಿ ಕಾಟ ಶುರುವಾಗಿದೆ. ಇದು ಸಂಪೂರ್ಣ ಫಿಟ್ ಆಗದ ಶಮಿಯನ್ನ ಟೀಮ್ ಮ್ಯಾನೇಜ್ಮೆಂಟ್ ತುರಾತುರಿಯಲ್ಲಿ ಆಡಿಸ್ತಾ ಎಂಬ ಅನುಮಾನ ಹುಟ್ಟಿದೆ.
ಆರ್ಷ್ದೀಪ್ ಸಿಂಗ್ ಇದ್ದರೂ ಶಮಿ ಮೇಲ್ಯಾಕೆ ಒತ್ತಡ..?
ಯಂಗ್ ಲೆಫ್ಟಿ ಪೇಸರ್ ಆರ್ಷ್ದೀಪ್ ಸಿಂಗ್ ತಂಡದಲ್ಲಿದ್ದಾರೆ. ಟಿ20 ಸಿರೀಸ್, ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದ ಆರ್ಷ್ದೀಪ್, ಟಿ20 ವಿಶ್ವಕಪ್ಗಳಲ್ಲಿ ಮೇನ್ ರೋಲ್ ಪ್ಲೇ ಮಾಡಿದ್ದಾರೆ. ಇಂಥಹ ಅನುಭವಿಯನ್ನು ಟೀಮ್ನಲ್ಲಿರಿಸಿಕೊಂಡ ಮ್ಯಾನೇಜ್ಮೆಂಟ್, ಶಮಿಗೆ ಬಾಂಗ್ಲಾ ಎದುರಿನ ಮೊದಲ ಪಂದ್ಯದಲ್ಲಿ ರೆಸ್ಟ್ ನೀಡಬಹುದಿತ್ತು. ಮಹತ್ವದ ಪಂದ್ಯಗಳಲ್ಲಿ ಮಾತ್ರವೇ ಚಾನ್ಸ್ ನೀಡಬಹುದಿತ್ತು. ಆದ್ರೆ, ಅನಾವಶ್ಯಕವಾಗಿ ಆಡಿಸಿ ಕೈ ಸುಟ್ಟುಕೊಂಡಿದೆ.
ಇದನ್ನೂ ಓದಿ: Kumbh Mela; ಗಂಗೆಯಲ್ಲಿ ಮಿಂದಿದ್ದು ಎಷ್ಟು ಕೋಟಿ ಭಕ್ತರು.. ಶಿವರಾತ್ರಿಯಂದೇ ವಿದ್ಯುಕ್ತ ತೆರೆ
ಮೊಹಮ್ಮದ್ ಸಿರಾಜ್ಗೆ ಡೋರ್ ಓಪನ್ ಆಗುತ್ತಾ..?
ಪಾಕ್ ವಿರುದ್ಧ ಮೈದಾನಕ್ಕಿಂತ ಗ್ಯಾಲರಿಯಲ್ಲೇ ಹೆಚ್ಚು ಕುಳಿತಿದ್ದ ಮೊಹಮ್ಮದ್ ಶಮಿ, ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಈ ಇಂಜುರಿ ದೊಡ್ಡ ಪ್ರಮಾಣದಲ್ಲಿಗಿರೋದ್ರಿಂದ ಟೂರ್ನಮೆಂಟ್ನಿಂದ ಹೊರ ಬೀಳೋ ಸಾಧ್ಯತೆಯಿದೆ. ಶಮಿ ಹೊರಬಿದ್ರೆ, ಮೊಹಮ್ಮದ್ ಸಿರಾಜ್ಗೆ ತಂಡದ ಡೋರ್ ಓಪನ್ ಆಗಲಿದೆ. ರಿಸರ್ವ್ ಪ್ಲೇಯರ್ ಆಗಿ ಆಯ್ಕೆ ಆಗಿರೋ ಸಿರಾಜ್ಗೆ ಬಿಗ್ಸ್ಟೇಜ್ನಲ್ಲಿ ಆಡಿರುವ ಅನುಭವವೂ ಇದೆ. ಇರೋದ್ರಲ್ಲಿ ಸದ್ಯಕ್ಕೆ ಸಿರಾಜೇ ಬೆಸ್ಟ್ ಚಾಯ್ಸ್ ಬಿಡಿ.
ಆತಂಕದಲ್ಲಿ ಶಮಿಯ ವೈಟ್ಬಾಲ್ ಕರಿಯರ್..?
ಒಂದಲ್ಲ, ಎರಡಲ್ಲ ಕಳೆದ 10 ವರ್ಷಗಳಿಂದ ಬಹುಪಾಲು ಇಂಜುರಿಯಿಂದಲೇ ಶಮಿ ಕಾಲ ಕಳೆದಿದ್ದಾರೆ. 2015ರ ಏಕದಿನ ವಿಶ್ವಕಪ್ನಲ್ಲಿ ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದ ಶಮಿ, ಆ ನೋವಿನಲ್ಲೇ ಆಡಿದರು. ಇನ್ನು, 2023ರ ಏಕದಿನ ವಿಶ್ವಕಪ್ನಲ್ಲೂ ಇಂಜೆಕ್ಷನ್ ತೆಗೆದುಕೊಂಡು ಇಂಜುರಿ ನಡುವೆ ಆಡಿದರು. ಅದಾದ ಬಳಿಕ ದೀರ್ಘಕಾಲ ಮೈದಾನದಿಂದ ಹೊರಗಿದ್ದ ಶಮಿ, ಇದೀಗ ಕಮ್ಬ್ಯಾಕ್ ಮಾಡಿದ್ದಾರೆ. ಮತ್ತೆ ಇಂಜುರಿ ಕಾಣಿಸಿಕೊಂಡಿದೆ. ಈ ಇಂಜುರಿ ಮೊಹಮ್ಮದ್ ಶಮಿಯ ವೈಟ್ಬಾಲ್ ಕರಿಯರ್ ಅನ್ನೇ ಅಂತ್ಯಗೊಳಿಸಿದರು ಅಚ್ಚರಿಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ