/newsfirstlive-kannada/media/post_attachments/wp-content/uploads/2024/09/RCB_VIRAT_SIRAJ.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಐಪಿಎಲ್​​ ತಂಡಗಳು ಬಿಸಿಸಿಐಗೆ ರೀಟೆನ್ಷನ್ ಲಿಸ್ಟ್​ ನೀಡಲು ಕೇವಲ ಒಂದೇ ದಿನ ಬಾಕಿ ಇದೆ. ನಾಳೆ ಸಂಜೆ ಒಳಗೆ ಎಲ್ಲಾ ತಂಡಗಳು ಯಾರನ್ನು ಉಳಿಸಿಕೊಂಡಿದ್ದೇವೆ? ಅನ್ನೋ ಲಿಸ್ಟ್​ ಸಲ್ಲಿಸಬೇಕಿದೆ. ಇದಕ್ಕೂ ಮುನ್ನ ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಯಾರನ್ನು ಕೈ ಬಿಡಬೇಕು? ಎಂಬ ಬಗ್ಗೆ ಕೊನೆಯ ಸುತ್ತಿನ ಕಸರತ್ತು ನಡೆಸಲಾಗುತ್ತಿದೆ.
ಬಿಸಿಸಿಐ ಎಲ್ಲ ತಂಡಗಳಿಗೂ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಜತೆಗೆ ಐಪಿಎಲ್​​ ಹರಾಜಿನಲ್ಲಿ ಮಾಲೀಕರಿಗೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶ ಕೂಡ ಇದೆ. ಕಳೆದ ಐಪಿಎಲ್​ನಲ್ಲಿ ಅರ್ಧ ಸೀಸನ್​ ನಂತರ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಪ್ಲೇ ಆಫ್​ಗೆ ಹೋಗಿತ್ತು. ಆದರೆ, ಎಲಿಮಿನೇಟರ್​​ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​​ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿದ್ದಿತ್ತು. ಹಾಗಾಗಿ ಮುಂದಿನ ಸೀಸನ್​ 2025ರ ಐಪಿಎಲ್​ಗೆ ಮೊದಲು ನಡೆಯಲಿರೋ ಹರಾಜಿಗೆ ಮುನ್ನ ಆರ್​​ಸಿಬಿ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಿಸಿದೆ.
ಐಪಿಎಲ್​​ ಮೆಗಾ ಹರಾಜಿಗೆ ಇನ್ನೇನು ಕೇವಲ 1 ತಿಂಗಳು ಮಾತ್ರ ಬಾಕಿ ಇವೆ. ಹೀಗಾಗಿ ಆರ್​​ಸಿಬಿ ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಅನ್ನೋ ಶಾರ್ಟ್​​ ಲಿಸ್ಟ್​ ಮಾಡಿಕೊಂಡಿದೆ. ಆರ್​​ಸಿಬಿ ರೀಟೈನ್​ ಲಿಸ್ಟ್​ನಲ್ಲಿ ಸ್ಟಾರ್​ ಆಟಗಾರನ ಹೆಸರು ಇಲ್ಲ ಎಂಬುದು ಬೇಸರದ ಸುದ್ದಿ.
ಈ ಸಲ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬಿಗ್​ ಶಾಟ್​​ಗಳಿಗೆ ಕೊಕ್​​ ನೀಡುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​ ಹೆಸರು ಕೂಡ ಇದೆ. ಆರ್​​ಸಿಬಿ ಈ ನಿರ್ಧಾರಕ್ಕೆ ಬಂದಿದ್ದು, ಸ್ಟಾರ್​ ಆಟಗಾರನನ್ನು ರಿಲೀಸ್​​ ಮಾಡಬೇಕು ಎಂದು ತಯಾರಿ ನಡೆಸಿಕೊಂಡಿದೆ. ಇವರ ಜಾಗಕ್ಕೆ ಬಲಿಷ್ಠ ಆಟಗಾಟರರನ್ನು ಕರೆ ತರಲು ಆರ್​ಸಿಬಿ ಭರ್ಜರಿ ಪ್ಲಾನ್​ ಮಾಡಿಕೊಂಡಿದೆ ಎಂದು ಇಂಡಿಯನ್​ ಪ್ರೀಮಿಯರ್​​ ಲೀಗ್​ ಉನ್ನತ ಮೂಲಗಳು ತಿಳಿಸಿವೆ.
ಕಳಪೆ ಪ್ರದರ್ಶನ ನೀಡಿದ್ದ ಸಿರಾಜ್​​!
ಐಪಿಎಲ್ 2024ರಲ್ಲಿ ಮೊಹಮ್ಮದ್ ಸಿರಾಜ್ ಆರ್​ಸಿಬಿ ಪರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿರಲಿಲ್ಲ. ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಸಿರಾಜ್ ಮೇಲೆ ಆರ್​ಸಿಬಿ ಭರವಸೆ ಇಟ್ಟಿತ್ತು. ತನ್ನ ಮೇಲಿಟ್ಟ ಭರವಸೆಯನ್ನು ಸಿರಾಜ್​​ ಕಳೆದುಕೊಂಡಿದ್ದು, ಆರ್​ಸಿಬಿ ರೀಟೈನ್​ ಲಿಸ್ಟ್​​ನಿಂದ ಇವರ ಹೆಸರು ಕೈ ಬಿಡಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us