7 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿಕೆಟ್ ಪಡೆಯಲಾಗದೇ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ವೈಫಲ್ಯ
ಆರ್ಸಿಬಿ ಕಮ್ಬ್ಯಾಕ್ ಮಧ್ಯೆ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ಗೆ ಗುಡ್ನ್ಯೂಸ್!
ಇತ್ತೀಚೆಗೆ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ. ಪ್ಲೇ ಆಫ್ಗಾಗಿ ಹೇಗಾದ್ರೂ ಮಾಡಿ ಮುಂದೆ ನಡೆಯಲಿರೋ 4 ಪಂದ್ಯಗಳು ಗೆಲ್ಲಲೇಬೇಕಿದೆ. ಈ ಮಧ್ಯೆ ಆರ್ಸಿಬಿ ಸ್ಟಾರ್ ಪ್ಲೇಯರ್ಗೆ ಬಿಸಿಸಿಐ ಗುಡ್ನ್ಯೂಸ್ ನೀಡಿದೆ.
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಅರ್ಧ ಮುಗಿದು ಹೋಗಿದೆ. ಈ ಸೀಸನ್ನಲ್ಲಿ ಬ್ಯಾಕ್ ಟು ಬ್ಯಾಕ್ 7 ಪಂದ್ಯ ಸೋತಿದ್ದ ಆರ್ಸಿಬಿ ಕಳೆದ 2 ಪಂದ್ಯಗಳಲ್ಲಿ ಗೆದ್ದು ಭರ್ಜರಿ ಕಮ್ಬ್ಯಾಕ್ ಮಾಡಿದೆ. ಆರ್ಸಿಬಿ 7 ಪಂದ್ಯ ಸೋಲಲು ಹೀನಾಯ ಬೌಲಿಂಗ್ ಕಾರಣ.
ಆರ್ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಫೇಲ್ಯೂರ್ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್ಗಳು ಭಾರೀ ರನ್ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.
Can someone ask BCCI just 2 questions!!
1- On what basis did you choose Mohammed Siraj, he is the worst in IPL and has never performed in T20i.
2- On what basis you dropped Rinku Singh? @BCCI @JayShah pic.twitter.com/7CNGPsJgLz— Satya Prakash (@Satya_Prakash08) April 30, 2024
ಆರ್ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆಯಲು ಸಾಧ್ಯವಾಗದೆ ಫೇಲ್ಯೂರ್ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್ನಲ್ಲಿ ಇದ್ದಾರೆ. ಸಿರಾಜ್ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಿದ್ರೂ ಇವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ. ಈ ಕಾರಣ ಟೀಮ್ ಇಂಡಿಯಾದ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ರಿಂಕು ಸಿಂಗ್ ಅವರನ್ನು ಡ್ರಾಪ್ ಮಾಡಿ ಹೇಗೆ ಸಿರಾಜ್ ಆಯ್ಕೆ ಮಾಡಿದ್ದೀರಿ? ಅನ್ನೋ ಪ್ರಶ್ನೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
7 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿಕೆಟ್ ಪಡೆಯಲಾಗದೇ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ವೈಫಲ್ಯ
ಆರ್ಸಿಬಿ ಕಮ್ಬ್ಯಾಕ್ ಮಧ್ಯೆ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ಗೆ ಗುಡ್ನ್ಯೂಸ್!
ಇತ್ತೀಚೆಗೆ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ. ಪ್ಲೇ ಆಫ್ಗಾಗಿ ಹೇಗಾದ್ರೂ ಮಾಡಿ ಮುಂದೆ ನಡೆಯಲಿರೋ 4 ಪಂದ್ಯಗಳು ಗೆಲ್ಲಲೇಬೇಕಿದೆ. ಈ ಮಧ್ಯೆ ಆರ್ಸಿಬಿ ಸ್ಟಾರ್ ಪ್ಲೇಯರ್ಗೆ ಬಿಸಿಸಿಐ ಗುಡ್ನ್ಯೂಸ್ ನೀಡಿದೆ.
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಅರ್ಧ ಮುಗಿದು ಹೋಗಿದೆ. ಈ ಸೀಸನ್ನಲ್ಲಿ ಬ್ಯಾಕ್ ಟು ಬ್ಯಾಕ್ 7 ಪಂದ್ಯ ಸೋತಿದ್ದ ಆರ್ಸಿಬಿ ಕಳೆದ 2 ಪಂದ್ಯಗಳಲ್ಲಿ ಗೆದ್ದು ಭರ್ಜರಿ ಕಮ್ಬ್ಯಾಕ್ ಮಾಡಿದೆ. ಆರ್ಸಿಬಿ 7 ಪಂದ್ಯ ಸೋಲಲು ಹೀನಾಯ ಬೌಲಿಂಗ್ ಕಾರಣ.
ಆರ್ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಫೇಲ್ಯೂರ್ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್ಗಳು ಭಾರೀ ರನ್ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.
Can someone ask BCCI just 2 questions!!
1- On what basis did you choose Mohammed Siraj, he is the worst in IPL and has never performed in T20i.
2- On what basis you dropped Rinku Singh? @BCCI @JayShah pic.twitter.com/7CNGPsJgLz— Satya Prakash (@Satya_Prakash08) April 30, 2024
ಆರ್ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆಯಲು ಸಾಧ್ಯವಾಗದೆ ಫೇಲ್ಯೂರ್ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್ನಲ್ಲಿ ಇದ್ದಾರೆ. ಸಿರಾಜ್ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಿದ್ರೂ ಇವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ. ಈ ಕಾರಣ ಟೀಮ್ ಇಂಡಿಯಾದ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ರಿಂಕು ಸಿಂಗ್ ಅವರನ್ನು ಡ್ರಾಪ್ ಮಾಡಿ ಹೇಗೆ ಸಿರಾಜ್ ಆಯ್ಕೆ ಮಾಡಿದ್ದೀರಿ? ಅನ್ನೋ ಪ್ರಶ್ನೆ ಕೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ