/newsfirstlive-kannada/media/post_attachments/wp-content/uploads/2025/07/SIRAJ-3.jpg)
ಇಂಡೋ-ಇಂಗ್ಲೆಂಡ್​​ ಲಾರ್ಡ್ಸ್​​ ಟೆಸ್ಟ್​ನ ಅಂತಿಮ ದಿನದಾಟ ಯಾರೂ ನಿರೀಕ್ಷೆ ಮಾಡದ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯ್ತು. ಅಂತಿಮವಾಗಿ ಟೀಮ್​ ಇಂಡಿಯಾ ವಿರೋಚಿತ ಸೋಲಿಗೆ ಶರಣಾಯ್ತು. ಒಂದು ಬ್ಯಾಡ್​​ಲಕ್​ನಿಂದ ಗೆಲುವು ಜಸ್ಟ್​ ಮಿಸ್​​ ಆಯ್ತು.
ಲಾರ್ಡ್ಸ್​​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದ ಮುಂದಿದಿದ್ದು 193 ರನ್​ಗಳ ಟಾರ್ಗೆಟ್​. ಈ ಗುರಿ ಮುಟ್ಟೋಕೆ ಬರೋಬ್ಬರಿ 4 ಸೆಷನ್​ಗಳು ಬಾಕಿ ಉಳಿದಿದ್ವು. ಚೇಸಿಂಗ್​ನ ಮೊದಲ ಹೆಜ್ಜೆಯಲ್ಲೇ ಎಡವಿದ್ದ ಟೀಮ್​ ಇಂಡಿಯಾ 4ನೇ ದಿನದ ಅಂತ್ಯಕ್ಕೆ 4 ಪ್ರಮುಖ ವಿಕೆಟ್​ ಕಳೆದುಕೊಂಡಿತ್ತು.
ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!
ಕೈಯಲ್ಲಿ 6 ವಿಕೆಟ್​ಗಳನ್ನಿಟ್ಟುಕೊಂಡು ಅಂತಿಮ ದಿನ 135 ರನ್​ಗಳ ಚೇಸಿಂಗ್​ಗಿಳಿದ ಇಂಡಿಯಾ ಮತ್ತೆ ಎದುರಿಸಿದ್ದು ಆಘಾತ. ಜಸ್ಟ್​​ 82 ರನ್​ಗಳಿಸುವಷ್ಟರಲ್ಲಿ ಟೀಮ್​ ಇಂಡಿಯಾದ ಟಾಪ್​ ಮತ್ತು ಮಿಡಲ್​ ಆರ್ಡರ್​​ ಗಂಟುಮೂಟೆ ಕಟ್ಟಿತ್ತು. 7 ವಿಕೆಟ್​ ಕಬಳಿಸಿದ್ದ ಆಂಗ್ಲರು ಅಟ್ಟಹಾಸ ಮರೆಯುತ್ತಿದ್ದರು.
ಆಂಗ್ಲರ ಹುಟ್ಟಡಗಿಸಿದ ತ್ರಿಮೂರ್ತಿಗಳು
ಟೀಮ್​ ಇಂಡಿಯಾದ ಮೊದಲ 7 ವಿಕೆಟ್​​ ಕಬಳಿಸಿದ್ದೇ ತಡ ಆಂಗ್ಲ ಪಡೆ ಗೆಲುವು ನಮ್ಮದೆ ಅಂತಾ ಲಾರ್ಡ್ಸ್​ ಮೆರೆದಾಡ್ತಿತ್ತು. ಅತಿಯಾದ ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್​ ತಂಡವಿತ್ತು. ಭಾರತದ ತ್ರಿಮೂರ್ತಿಗಳು ಆಂಗ್ಲರ ಆತ್ಮವಿಶ್ವಾಸಕ್ಕೆ ಸರಿಯಾದ ಏಟು ಕೊಟ್ರು. ಜಡೇಜಾ, ಬೂಮ್ರಾ, ಸಿರಾಜ್​ ಕೆಚ್ಚೆದೆಯ ಹೋರಾಟಕ್ಕೆ ಆಂಗ್ಲರು ಅಕ್ಷರಶಃ ಕಂಗಾಲಾದರು. ಅರ್ಚರ್​, ಬೆನ್​ ಸ್ಟೋಕ್ಸ್​, ಕ್ರಿಸ್​​ ವೋಕ್ಸ್​, ಬ್ರೆಂಡನ್​ ಕರ್ಸ್​​ ಘಟಾನುಘಟಿ ಬೌಲರ್ಸ್​​ ಬಳಲಿ ಬೆಂಡಾದರು.
54 ಎಸೆತ, 104 ನಿಮಿಷ, ಆಂಗ್ಲರಿಗೆ ಪೀಕಲಾಟ
ವಾಷಿಂಗ್ಟನ್​ ಸುಂದರ್​ ಹೋದ ಮೇಲೆ ಬ್ಯಾಟಿಂಗ್​ಗೆ ಬಂದಿದ್ದು ಜಸ್​​ಪ್ರಿತ್​ ಬೂಮ್ರಾ. ಆಗ ಬ್ಯಾಟಿಂಗ್​ ಲೈನ್​​ಅಪ್​ ಅನ್ನೇ ಚಿಂದಿ ಉಡಾಯಿಸಿದ ನಮಗೆ ಬೂಮ್ರಾ ಯಾವ ಲೆಕ್ಕ ಅನ್ನೋ ಮನಸ್ಥಿತಿಯಲ್ಲಿತ್ತು ಇಂಗ್ಲೆಂಡ್. ಆದರೆ ಬೂಮ್ರಾ ಕೊಟ್ಟ ಕಾಟ ಅಷ್ಟಿಷ್ಟಲ್ಲ. 104 ನಿಮಿಷಗಳ ಕಾಲ ಕ್ರಿಸ್​ ಕಚ್ಚಿ ನಿಂತ ಬೂಮ್ರಾ 54 ಎಸೆತ ಎದುರಿಸಿದ್ರು. ಗಳಿಸಿದ್ದು 5 ಇರಬಹುದು. ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ರು. ಜಡೇಜಾ ಜೊತೆಗೆ 35 ಕ್ರೂಶಿಯಲ್​ ಪಾರ್ಟನರ್​ಶಿಪ್​ ಕಟ್ಟಿದ್ರು.
30 ಎಸೆತ, 64 ನಿಮಿಷ, ಇಂಗ್ಲೆಂಡ್​ ಬೌಲರ್ಸ್​ ಬೆಂಡ್​
ತಿಣುಕಾಡಿ ಬೂಮ್ರಾ ವಿಕೆಟ್​​ ಉರುಳಿಸಿದ ಇಂಗ್ಲೆಂಡ್​ಗೆ ಮತ್ತೆ ಕಾನ್ಫಿಡೆನ್ಸ್​ ಬಂದು ಬಿಡ್ತು.​ ಟೀ ಬ್ರೇಕ್​ ಅನ್ನ ಮುಂದೂಡಿ ಕೆಲವೇ ಹೊತ್ತಲ್ಲಿ ಅಲೌಟ್​​ ಮಾಡ್ತಿವಿ ಅನ್ನೋ ಅತಿಯಾದ ಆತ್ಮವಿಶ್ವಾಸವನ್ನ ತೋರಿಸಿತು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸಿರಾಜ್​​ ಆಂಗ್ಲರ ಬೆಂಡೆತ್ತಿದ್ರು. ಫೈರಿ ಎಸೆತಗಳಲ್ಲ ದಿಟ್ಟವಾಗಿ ಎದುರಿಸಿ ಹೋರಾಡಿದ್ರು. ಬರೋಬ್ಬರಿ 64 ನಿಮಿಷ ಕ್ರಿಸ್​ ಕಚ್ಚಿ ನಿಂತ ಸಿರಾಜ್​ 30 ಎಸೆತ ಎದುರಿಸಿದ್ರು.
181 ಎಸೆತ, 266 ನಿಮಿಷ..
ಲಾರ್ಡ್ಸ್​​ ಅಂಗಳದಲ್ಲಿ ಇಡೀ ಭಾರತದ ಪಾಲಿಗೆ ಭರವಸೆಯಾಗಿ ನಿಂತಿದ್ದು ಜಡೇಜಾ ಮಾತ್ರ. ಬೂಮ್ರಾ, ಸಿರಾಜ್​ ಅದ್ಭುತ ಆಟದ ಹಿಂದಿನ ಕಲೆಗಾರ ಈ ಜಡೇಜಾ. ಟೀಮ್​ ಇಂಡಿಯಾ ಎಲ್ಲಾ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದಾಗ ರಣರಂಗದಲ್ಲಿ ವೀರ ಸೇನಾನಿಯಂತೆ ಹೋರಾಡಿದ್ದು ಸರ್​ ರವೀಂದ್ರ ಜಡೇಜಾ.
ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ.. ಫೋಟೋಸ್ ಇಲ್ಲಿವೆ
ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕಣಕ್ಕಿಳಿದ ಜಡೇಜಾ ಅಂತಿಮ ಹಂತ ತಲುಪಿದ್ರೂ ಹೋರಾಟ ನಿಲ್ಲಿಸಲಿಲ್ಲ. ಸುದೀರ್ಘ 266 ನಿಮಿಷಗಳ ಕಾಲ ಹೋರಾಡಿದ್ರು. ಈ ಅವಧಿಯಲ್ಲಿ ಬರೋಬ್ಬರಿ 181 ಎಸೆತ ಎದುರಿಸಿದ್ರು. ಅಜೇಯ 61 ರನ್​ಗಳಿಸಿದ್ದ ಜಡೇಜಾ ಗೆಲುವಿನ ದಡ ಸೇರಿಸೋ ಅಪ್ರತಿಮ ಗುರಿ ಹೊಂದಿದ್ರು. ಅಷ್ಟರಲ್ಲೇ ಕಾಡಿದ್ದು ಬ್ಯಾಡ್​​ಲಕ್​.
74.5ನೇ ಓವರ್​​
ಜಡೇಜಾ, ಜಸ್​​​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​ ಅತ್ಯದ್ಭುತ ಹೋರಾಟ ಇಡೀ ಭಾರತದಲ್ಲಿ ಗೆಲುವಿನ ಭರವಸೆ ಹುಟ್ಟು ಹಾಕಿತ್ತು. ಒಂದು ಬ್ಯಾಡ್​​ಲಕ್​ ಗೆಲುವನ್ನ ಕಿತ್ತು ಕೊಳ್ತು. ಶೋಯೆಬ್​ ಬಶೀರ್​ ಎಸೆದ 74.5ನೇ ಎಸೆತ ಸಿರಾಜ್​ ಸಕ್ಸಸ್​ಫುಲ್​ ಆಗಿ ಡಿಫೆಂಡ್​ ಮಾಡಿದ್ರು. ಆದ್ರೆ, ಕೆಳಗೆ ಬಿದ್ದ ಬಾಲ್​ ತೆವಳುತ್ತಾ ಸಾಗಿ ಸ್ಟಂಪ್​ಗೆ ಬಡೆದು ಬಿಡ್ತು. ಕೊಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಯ್ತು.
ಸ್ಟೋಕ್ಸ್​, ವೋಕ್ಸ್​​, ಕರ್ಸ್​​, ಆರ್ಚರ್​​ರಂತ ಘಟಾನುಘಟಿಗಳೇ ಪಾರ್ಟನರ್​ ಶಿಪ್​ ಬ್ರೇಕ್​ ಮಾಡೋಕೆ ತಿಣುಕಾದ್ರು. ಇಂತದ್ರಲ್ಲಿ ಡಿಫೆಂಡ್​ ಮಾಡಿದ ಬಾಲ್​ ತೆವಳುತ್ತಾ ಸಾಗಿ ಸ್ಟಂಪ್​ ಬಡಿಯುತ್ತೆ ಅಂದ್ರೇನು ಹೇಳಿ. ಖಂಡಿತಾ ಇದು ಬ್ಯಾಡ್​​ಲಕ್ಕೆ. ಲಾರ್ಡ್ಸ್​ ಅಂಗಳಲ್ಲಿ ಗೆಲುವು ಜಸ್ಟ್​ ಮಿಸ್​ ಆಗಿರಬಹುದು. ಟೀಮ್​ ಇಂಡಿಯಾದ ಅದ್ರಲ್ಲೂ ಜಡೇಜಾ, ಬೂಮ್ರಾ, ಸಿರಾಜ್​​​​ ಹೋರಾಟವನ್ನ ಮಾತ್ರ ಇತಿಹಾಸ ಎಂದಿಗೂ ಮರೆಯಲ್ಲ.
It's Not A Wicket Ball At All. Siraj tried to Block the ball But Luck towards England Side. #INDvENGpic.twitter.com/GRRmYd64zu
— Rockz☜ (@Rockz055) July 14, 2025
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ