/newsfirstlive-kannada/media/post_attachments/wp-content/uploads/2024/10/MNG-BAVA-BROTHER-1.jpg)
ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಹಿದ್ದೀನ್​ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ನಿನ್ನೆ ದಿಢೀರ್​ ನಾಪತ್ತೆಯಾಗಿದ್ದರು. ಕೂಳೂರು ಸೇತುವೆ ಮೇಲೆ ಕಾರು ನಿಲ್ಲಿಸಿ ಕಣ್ಮರೆಯಾಗಿದ್ದರು. ಆದರೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಮ್ತಾಜ್ ಮೃತದೇಹ ಸಿಕ್ಕಿದೆ.
ತಣ್ಣೀರುಬಾವಿ ಮುಳುಗುಗಾರರಿಂದ ಮೊಹಿದ್ದೀನ್​ ಬಾವಾ ಅವರ ಸಹೋದರನ ಮೃತದೇಹ ಪತ್ತೆಹಚ್ಚಿದ್ದಾರೆ. ಈ ವೇಳೆ ತಮ್ಮನ ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಣ್ಣೀರು ಸುರಿಸಿದ್ದಾರೆ.
28 ಗಂಟೆಗಳ ಬಳಿಕ ಸಿಕ್ತು ಮೃತದೇಹ
ಶನಿವಾರ ಮುಂಜಾನೆ 3 ಗಂಟೆಗೆ ಮುಮ್ತಾಜ್​ ಕಣ್ಮರೆಯಾಗಿದ್ದರು. ನಂತರ ಫ್ಯಾಮಿಲಿ ಗ್ರೂಪ್​ನಲ್ಲಿ ನಾನು ದೇವರ ಬಳಿ ತೆರಳುತ್ತಿದ್ದೇನೆ ಎಂದು ಮೆಸೇಜ್​ ಹಾಕಿದ್ದಾರೆ. ತಂದೆಯ ಮೆಸೇಜನ್ನು ಮಗಳು 4.30 ಗಂಟೆಗೆ ನೋಡಿದ್ದು ಕುಟುಂಬದವರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ: ಹಿಂದೂ ಯುವತಿಯನ್ನು ವಿವಾಹವಾಗಲಿದ್ದಾರೆ ಈ ಪಾಕ್​​ ಮಾಜಿ ಕ್ರಿಕೆಟಿಗ!
ಕುಟುಂಬದವರು ಗಾಬರಿಯಿಂದ ಹುಡುಕಾಡಿದಾಗ ಮುಮ್ತಾಜ್​ ಅಲಿ ಖಾನ್​​ ಕಾರು ಕೂಳೂರು ಸೇತುವೆಯ ಫಲ್ಗುಣಿ ನದಿ ಬಳಿ ಅಪಘಾತಕ್ಕೀಡಾದಂತೆ ಪತ್ತೆಯಾಗಿದೆ. ಕಾರಿನಲ್ಲಿ ಮೊಬೈಲ್​ ಮತ್ತು ಕಾರು ಕೀ ಪತ್ತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us