/newsfirstlive-kannada/media/post_attachments/wp-content/uploads/2025/01/BBK11106.jpg)
ಬಿಗ್ ಬಾಸ್ ಸೀಸನ್ 11 ಅಂತಿಮ ಘಟ್ಟ ತಲುಪಿದ್ದು, ಇನ್ನೆರಡು ದಿನಗಳು ಕಳೆದರೆ ಸಾಕು ಯಾರ ಕೈಗೆ ಟ್ರೋಫಿ ಅನ್ನೋದು ಗೊತ್ತಾಗಲಿದೆ. ಒಂದೇ ಒಂದು ಟ್ರೋಫಿಗೆ 12 ಕೈಗಳು, 6 ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಟ್ಯಾಂತರ ಕನ್ನಡಿಗರು ಬಿಗ್ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ ಅಂತ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:VIDEO: ಒಂದೇ ಕಾಲಲ್ಲಿ ಕುಂಟುತ್ತ ವೇದಿಕೆಗೆ ಬಂದ ರಶ್ಮಿಕಾ; ಅಭಿಮಾನಿಗಳು ಆಕ್ರೋಶ.. ದಿಲ್ ಗೆದ್ದ ವಿಕ್ಕಿ ಕೌಶಲ್
/newsfirstlive-kannada/media/post_attachments/wp-content/uploads/2025/01/BBK-11-Bhavya-Mokshitha.jpg)
ಬಿಗ್ ಬಾಸ್ ಫಿನಾಲೆಗೆ ವೇದಿಕೆ ರೆಡಿಯಾಗಿದ್ದು ಇದೇ ಶನಿವಾರ ಹಾಗೂ ಭಾನುವಾರ ಸೀಸನ್ 11ರ ಫಿನಾಲೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ. ಇನ್ನೂ ಬಿಗ್​ಬಾಸ್​ ಮನೆಯಲ್ಲಿ 6 ಮಂದಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ಟ್ರೋಫಿಯನ್ನು ಮಹಿಳಾ ಸ್ಪರ್ಧಿಗಳು ವಿನ್ನರ್ ಆಗೋ ಚಾನ್ಸಸ್ ಇದ್ಯಾ ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/01/BBK-11-Rajat-Bhavya-gowda.jpg)
ಇದೇ ವಿಚಾರವಾಗಿ ನ್ಯೂಸ್​ಫಸ್ಟ್​ ಸ್ಪೆಷಲ್ ಸಂದರ್ಶನದಲ್ಲಿ ಭಾಗಿಯಾಗಿದ್ದ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳಾದ ಧನರಾಜ್ ಆಚಾರ್, ರಂಜಿತ್, ಐಶ್ವರ್ಯಾ ಸಿಂಧೋಗಿ, ಅನುಷಾ ರೈ ಹಾಗೂ ಗೋಲ್ಡ್ ಸುರೇಶ್​ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅದರಲ್ಲೂ ಈ ಬಾರಿಯ ಬಿಗ್​ಬಾಸ್​ ಟ್ರೋಫಿ ಮಹಿಳಾ ಸ್ಪರ್ಧಿಗೆ ದಕ್ಕುತ್ತಾ ಅಂತ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಸೀಸನ್ 11 ಕಪ್ ಗೆಲ್ಲೋದು ಯಾರು? ಹೊಸ ಡೆಡ್ಲೈನ್ ಫಿಕ್ಸ್!
/newsfirstlive-kannada/media/post_attachments/wp-content/uploads/2025/01/BBK11107.jpg)
ಮೊದಲು ಮಾತಾಡಿದ ಐಶ್ವರ್ಯಾ ಸಿಂಧೋಗಿ ಅವರ ಪ್ರಕಾರ ಮೋಕ್ಷಿತಾ ವಿನ್​ ಆಗಬೇಕಂತೆ. ಏಕೆಂದರೆ, ಬಿಗ್​ಬಾಸ್​ ಮನೆಗೆ ಬರೋದಕ್ಕೂ ಮುನ್ನ ಮೋಕ್ಷಿತಾ ಗೊತ್ತಿದೆ. ನಮ್ಮ ಅಮ್ಮ ಕೂಡ ಮೋಕ್ಷಿತಾ ಅವರ ಫ್ಯಾನ್ಸ್. ಬಿಗ್​ಬಾಸ್​ ಮನೆಯಲ್ಲಿದ್ದಾಗ ಮೋಕ್ಷಿತಾರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ. ತುಂಬಾ ಚೆನ್ನಾಗಿ ಆಡಿದ್ದಾರೆ. ವಿನ್​ ಆದ್ರೆ ಮೋಕ್ಷಿತಾನೇ ಆಗಬೇಕು ಎಂದಿದ್ದಾರೆ. ಅನುಷಾ ಅವರ ಪ್ರಕಾರ, ಭವ್ಯಾ ಗೌಡ ವಿನ್​ ಆಗಬೇಕಂತೆ. ಭವ್ಯಾ ಗೌಡ ವಿನ್​ ಆಂದ್ರೆ ತುಂಬಾ ಖುಷಿ ಆಗುತ್ತೆ ಎಂದಿದ್ದಾರೆ. ಧನರಾಜ್​ ಆಚಾರ್ ಪ್ರಕಾರ ರನ್ನರ್ ಅಪ್​ ಆದ್ರೆ ಭವ್ಯಾ ಗೌಡ ಆಗಬೇಕು ಎಂದಿದ್ದಾರೆ. ರಂಜಿತ್ ಅವರ ಪ್ರಕಾರ, ಮೋಕ್ಷಿತಾ ಹಾಗೂ ಭವ್ಯಾ ಇಬ್ಬರು ಚೆನ್ನಾಗಿ ಆಡಿದ್ದಾರೆ. ವಿನ್​ ಆದ್ರೆ ಭವ್ಯಾ ಗೌಡ ಆಗಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us