/newsfirstlive-kannada/media/post_attachments/wp-content/uploads/2024/05/MYS-MONKEY-1.jpg)
ಮೈಸೂರು: ಮೊಬೈಲ್ ಕಸಿದ ವಾನರ ಮರವೇರಿ ಭಕ್ತರೊಬ್ಬರಿಗೆ ಕೆಲಕಾಲ ಪೇಚಾಟ ತಂದ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.
ಹಾಸನದಿಂದ ಬಂದ ಕುಟುಂಬ ನಾಡದೇವಿಯ ದರುಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು. ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಯಲ್ಲಿದ್ದ ಪರ್ಸ್ ಕಸಿದ ಕೋತಿ ಮರವೇರಿ ಕುಳಿತಿದೆ. ಪರ್ಸ್ ನಲ್ಲಿದ್ದ ಒಂದೊಂದೇ ವಸ್ತುಗಳನ್ನು ಬಿಸಾಡಿದ ಮಂಗ ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಹಾರುತ್ತ ಭಕ್ತರನ್ನ ಪರದಾಡುವಂತೆ ಮಾಡಿತು.
ಇದನ್ನೂ ಓದಿ:ಕಳೆದುಕೊಳ್ಳುವಾಗ ಯಾವಾಗಲೂ ನೋವು ಇರುತ್ತದೆ, ಆದರೆ.. ಎದೆಗುಂದದ ಎಬಿ ಡಿವಿಲಿಯರ್ಸ್
/newsfirstlive-kannada/media/post_attachments/wp-content/uploads/2024/05/MYS-MONKEY.jpg)
ಬಾಳೆಹಣ್ಣು ಆಮಿಷ ನೀಡಿದರೂ ಮೊಬೈಲ್ ಬಿಡದ ವಾನರ ಸುಮಾರು ಅರ್ಧಗಂಟೆ ಕಾಲ ತನ್ನ ಚೇಷ್ಠೆಯನ್ನ ಮುಂದುವರೆಸಿ ಕೊನೆಗೆ ಬಿಸಾಡಿತು. ಮೊಬೈಲ್ ಪಡೆದ ಭಕ್ತರು ನೆಮ್ಮದಿಯಿಂದ ನಾಡದೇವಿಯ ದರುಶನಕ್ಕೆ ತೆರಳಿದರು. ಈ ವಿಡಿಯೋ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗ್ತಿದೆ.
ಇದನ್ನೂ ಓದಿ:ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?
/newsfirstlive-kannada/media/post_attachments/wp-content/uploads/2024/05/MYS-MONKEY-2.jpg)
ಇದನ್ನೂ ಓದಿ:RCB ಸೋಲು ಸಂಭ್ರಮಿಸಿ ಟ್ರೋಲ್ ಮಾಡಿದ CSKಯ ತುಷಾರ್ ದೇಶಪಾಂಡೆ.. ಆಮೇಲೆ ಆಗಿದ್ದೇ ಬೇರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us