ರಾಜ್ಯದ ಏಕೈಕ ವಿವಿಗೆ ಮತ್ತೆ ಕಗ್ಗತ್ತಲಿನ ಆತಂಕ
ಬಾಕಿ ಬಿಲ್ ಪಾವತಿಗೆ ಜೆಸ್ಕಾಂ ನೋಟಿಸ್ ಜಾರಿ
1 ಕೋಟಿ 5 ಲಕ್ಷ 74 ಸಾವಿರ ವಿದ್ಯುತ್ ಬಿಲ್ ಬಾಕಿ
ವಿಜಯನಗರ: ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಮತ್ತೊಮ್ಮೆ ಜೆಸ್ಕಾಂ ಶಾಕ್ ನೀಡಿದೆ. ಬಾಕಿ ಬಿಲ್ ಪಾವತಿಗೆ ನೋಟಿಸ್ ಜಾರಿಗೊಳಿಸಿದೆ.
ಕನ್ನಡ ಸಂಶೋಧನೆಗಿರೋ ರಾಜ್ಯದ ಏಕೈಕ ವಿವಿಗೆ ಮತ್ತೆ ಕಗ್ಗತ್ತಲಿನ ಆತಂಕ ಎದುರಾಗಿದೆ. ವಿಶ್ವ ವಿದ್ಯಾಲಯ ಸುಮಾರು 1 ಕೋಟಿ 5 ಲಕ್ಷ 74 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ.
ಕೆಲವು ದಿನದ ಹಿಂದೆ ಜೆಸ್ಕಾ ಅಧಿಕಾರಿಗಳು ವಿಶ್ವ ವಿದ್ಯಾಲಯಕ್ಕೆ ಸಪ್ಲೈ ಆಗುತ್ತಿದ್ದ ಕರೆಂಟ್ ಕಟ್ ಮಾಡಿದ್ದರು. ನುಡಿ ಹಬ್ಬದಲ್ಲಿ ಕರೆಂಟ್ ತೆಗೆದರೆ ಮರ್ಯಾದೆ ಹೋಗುತ್ತದೆ ಎಂದು ಮನವಿ ಮಾಡಿದಾಗ ಮತ್ತೆ ಅವಕಾಶ ನೀಡಿದ್ದರು. ಇದೀಗ ಕರೆಂಟ್ ಕಟ್ ಮಾಡ್ತೇವೆ ಎಂದು ಜೆಸ್ಕಾಂ ಮತ್ತೊಮ್ಮೆ ನೋಟಿಸ್ ಮೇಲೆ ನೊಟೀಸ್ ಜಾರಿ ಮಾಡಿದೆ.
ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೂ ಉಚಿತ ಕರೆಂಟ್ ನೀಡುತ್ತಿರೋ ಸರ್ಕಾರ ಹಂಪಿ ವಿವಿಯ ವಿದ್ಯುತ್ ಬಾಕಿ ಬಿಲ್ ಪಾವತಿಗೆ ನೋಟಿಸ್ ಮೇಲೆ ನೋಟಿಸ್ ನೀಡ್ತಿದ್ರು ಗಮನ ಹರಿಸದೆ ಸುಮ್ಮನಾಗಿದೆ. ವಿದ್ಯುತ್ ಸಪ್ಲೈ ನಿಲ್ಲಿಸಿದ್ದರಿಂದ ಕನ್ನಡ ವಿವಿಯ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿವಿಗೆ ಭೇಟಿ ಕೊಟ್ಟಿದ್ರು. ತಿಂಗಳೊಳಗೆ ಸಮಸ್ಯೆ ಕ್ಲೀಯರ್ ಮಾಡುತ್ತೇವೆ ಎಂದು ಹೇಳಿದ್ರು. ಆದರೆ ಸಚಿವ ಜಮೀರ್ ಬಂದೋಗಿ 15 ದಿನ ಕಳೆದಿಲ್ಲ ಬಾಕಿ ಬಿಲ್ ಪಾವತಿಗೆ ಜೆಸ್ಕಾಂನಿಂದ ನೋಟಿಸ್ ಜಾರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯದ ಏಕೈಕ ವಿವಿಗೆ ಮತ್ತೆ ಕಗ್ಗತ್ತಲಿನ ಆತಂಕ
ಬಾಕಿ ಬಿಲ್ ಪಾವತಿಗೆ ಜೆಸ್ಕಾಂ ನೋಟಿಸ್ ಜಾರಿ
1 ಕೋಟಿ 5 ಲಕ್ಷ 74 ಸಾವಿರ ವಿದ್ಯುತ್ ಬಿಲ್ ಬಾಕಿ
ವಿಜಯನಗರ: ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಮತ್ತೊಮ್ಮೆ ಜೆಸ್ಕಾಂ ಶಾಕ್ ನೀಡಿದೆ. ಬಾಕಿ ಬಿಲ್ ಪಾವತಿಗೆ ನೋಟಿಸ್ ಜಾರಿಗೊಳಿಸಿದೆ.
ಕನ್ನಡ ಸಂಶೋಧನೆಗಿರೋ ರಾಜ್ಯದ ಏಕೈಕ ವಿವಿಗೆ ಮತ್ತೆ ಕಗ್ಗತ್ತಲಿನ ಆತಂಕ ಎದುರಾಗಿದೆ. ವಿಶ್ವ ವಿದ್ಯಾಲಯ ಸುಮಾರು 1 ಕೋಟಿ 5 ಲಕ್ಷ 74 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ.
ಕೆಲವು ದಿನದ ಹಿಂದೆ ಜೆಸ್ಕಾ ಅಧಿಕಾರಿಗಳು ವಿಶ್ವ ವಿದ್ಯಾಲಯಕ್ಕೆ ಸಪ್ಲೈ ಆಗುತ್ತಿದ್ದ ಕರೆಂಟ್ ಕಟ್ ಮಾಡಿದ್ದರು. ನುಡಿ ಹಬ್ಬದಲ್ಲಿ ಕರೆಂಟ್ ತೆಗೆದರೆ ಮರ್ಯಾದೆ ಹೋಗುತ್ತದೆ ಎಂದು ಮನವಿ ಮಾಡಿದಾಗ ಮತ್ತೆ ಅವಕಾಶ ನೀಡಿದ್ದರು. ಇದೀಗ ಕರೆಂಟ್ ಕಟ್ ಮಾಡ್ತೇವೆ ಎಂದು ಜೆಸ್ಕಾಂ ಮತ್ತೊಮ್ಮೆ ನೋಟಿಸ್ ಮೇಲೆ ನೊಟೀಸ್ ಜಾರಿ ಮಾಡಿದೆ.
ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೂ ಉಚಿತ ಕರೆಂಟ್ ನೀಡುತ್ತಿರೋ ಸರ್ಕಾರ ಹಂಪಿ ವಿವಿಯ ವಿದ್ಯುತ್ ಬಾಕಿ ಬಿಲ್ ಪಾವತಿಗೆ ನೋಟಿಸ್ ಮೇಲೆ ನೋಟಿಸ್ ನೀಡ್ತಿದ್ರು ಗಮನ ಹರಿಸದೆ ಸುಮ್ಮನಾಗಿದೆ. ವಿದ್ಯುತ್ ಸಪ್ಲೈ ನಿಲ್ಲಿಸಿದ್ದರಿಂದ ಕನ್ನಡ ವಿವಿಯ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿವಿಗೆ ಭೇಟಿ ಕೊಟ್ಟಿದ್ರು. ತಿಂಗಳೊಳಗೆ ಸಮಸ್ಯೆ ಕ್ಲೀಯರ್ ಮಾಡುತ್ತೇವೆ ಎಂದು ಹೇಳಿದ್ರು. ಆದರೆ ಸಚಿವ ಜಮೀರ್ ಬಂದೋಗಿ 15 ದಿನ ಕಳೆದಿಲ್ಲ ಬಾಕಿ ಬಿಲ್ ಪಾವತಿಗೆ ಜೆಸ್ಕಾಂನಿಂದ ನೋಟಿಸ್ ಜಾರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ