newsfirstkannada.com

4 ದಿನದ ಮೊಮ್ಮಗಳನ್ನು ಕತ್ತು ಹಿಸುಕಿ ಕೊಂದ ಖತರ್ನಾಕ್​ ಅಜ್ಜಿ.. ಕಾರಣವೇನು?

Share :

Published April 19, 2024 at 6:10am

    ತಾಯಿ ಮಾಡಿದ ಮಹಾನ್ ಕಾರ್ಯಕ್ಕೆ ಮಗ ಸಾಥ್ ಕೊಟ್ಟಿದ್ನಾ?

    ಯಾರೂ ಇಲ್ಲದ ಸಮಯ ಸಾಧಿಸಿ ಕೃತ್ಯ ಎಸಗಿರುವ ಪ್ರೇಮಲತಾ

    ಸೊಸೆ ಮಾಡಿದ ಧೈರ್ಯದಿಂದ ಅತ್ತೆಯ ಕೃತ್ಯ ಬಯಲಾಗಿದ್ದು ಹೇಗೆ?

ಭೋಪಾಲ್​: ಅಜ್ಜಿಯೊಬ್ಬರು ತಮ್ಮ 4 ದಿನದ ವಿಶೇಷ ಚೇತನ ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವಂತ ಹೃದಯ ವಿದ್ರಾವಕ ಘಟನೆಯೊಂದು ಮಧ್ಯ ಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

ವೃದ್ಧೆ ಪ್ರೇಮಲತಾ ಕೃತ್ಯ ಎಸಗಿದವರು. ಈ ಅಜ್ಜಿ ಮೊಮ್ಮಗನ ಆಸೆಯಲ್ಲಿದ್ದಾಗ ಮೊಮ್ಮಗಳು ದೈಹಿಕ ಅಂಗವೈಕಲ್ಯದಿಂದ ಜನಿಸಿದ್ದಳು. ಆದರೆ ಇದರಿಂದ ವೃದ್ಧೆ ಅತೃಪ್ತಿಗೊಂಡಿದ್ದಳು. ಹೀಗಾಗಿ ಆಸ್ಪತ್ರೆಯ ಬೆಡ್​ ಮೇಲೆ ಮಗು ಮಲಗಿದ್ದಾಗ ಆ ಕೋಣೆಯಲ್ಲಿ ಡಾಕ್ಟರ್, ತನ್ನ ಸೊಸೆ ಸೇರಿ ಯಾರೂ ಇಲ್ಲದ ಸಮಯ ಸಾಧಿಸಿಕೊಂಡು ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಸಹಜವಾಗಿಯೇ ಮಗು ಸಾವನ್ನಪ್ಪಿದೆ ಎನ್ನುವಂತೆ ಬಿಂಬಿಸಲು ವೃದ್ಧೆ ಪ್ರಯತ್ನಿಸಿದ್ದಳು. ಇದಕ್ಕೆ ವೃದ್ಧೆಯ ಮಗನು ಕೂಡ ಸಹಾಯ ಮಾಡಿದ್ದನು ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಗ್ವಾಲಿಯರ್‌ನ ಕಮಲರಾಜ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗು ಹೇಗಿದ್ದರೇನು ಎಂದು ತಾಯಿ ಕಾಜಲ್ ಸಂತಸದಿಂದ ಇದ್ದರು. ಆದರೆ ಮಗು ಸಾವನ್ನಪ್ಪಿದ ಬಳಿಕ ತಾಯಿಯ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಇನ್ನು ಅತ್ತೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಸೊಸೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ದಿನದ ಮೊಮ್ಮಗಳನ್ನು ಕತ್ತು ಹಿಸುಕಿ ಕೊಂದ ಖತರ್ನಾಕ್​ ಅಜ್ಜಿ.. ಕಾರಣವೇನು?

https://newsfirstlive.com/wp-content/uploads/2024/04/MP_GRAND_MAA.jpg

    ತಾಯಿ ಮಾಡಿದ ಮಹಾನ್ ಕಾರ್ಯಕ್ಕೆ ಮಗ ಸಾಥ್ ಕೊಟ್ಟಿದ್ನಾ?

    ಯಾರೂ ಇಲ್ಲದ ಸಮಯ ಸಾಧಿಸಿ ಕೃತ್ಯ ಎಸಗಿರುವ ಪ್ರೇಮಲತಾ

    ಸೊಸೆ ಮಾಡಿದ ಧೈರ್ಯದಿಂದ ಅತ್ತೆಯ ಕೃತ್ಯ ಬಯಲಾಗಿದ್ದು ಹೇಗೆ?

ಭೋಪಾಲ್​: ಅಜ್ಜಿಯೊಬ್ಬರು ತಮ್ಮ 4 ದಿನದ ವಿಶೇಷ ಚೇತನ ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವಂತ ಹೃದಯ ವಿದ್ರಾವಕ ಘಟನೆಯೊಂದು ಮಧ್ಯ ಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

ವೃದ್ಧೆ ಪ್ರೇಮಲತಾ ಕೃತ್ಯ ಎಸಗಿದವರು. ಈ ಅಜ್ಜಿ ಮೊಮ್ಮಗನ ಆಸೆಯಲ್ಲಿದ್ದಾಗ ಮೊಮ್ಮಗಳು ದೈಹಿಕ ಅಂಗವೈಕಲ್ಯದಿಂದ ಜನಿಸಿದ್ದಳು. ಆದರೆ ಇದರಿಂದ ವೃದ್ಧೆ ಅತೃಪ್ತಿಗೊಂಡಿದ್ದಳು. ಹೀಗಾಗಿ ಆಸ್ಪತ್ರೆಯ ಬೆಡ್​ ಮೇಲೆ ಮಗು ಮಲಗಿದ್ದಾಗ ಆ ಕೋಣೆಯಲ್ಲಿ ಡಾಕ್ಟರ್, ತನ್ನ ಸೊಸೆ ಸೇರಿ ಯಾರೂ ಇಲ್ಲದ ಸಮಯ ಸಾಧಿಸಿಕೊಂಡು ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಸಹಜವಾಗಿಯೇ ಮಗು ಸಾವನ್ನಪ್ಪಿದೆ ಎನ್ನುವಂತೆ ಬಿಂಬಿಸಲು ವೃದ್ಧೆ ಪ್ರಯತ್ನಿಸಿದ್ದಳು. ಇದಕ್ಕೆ ವೃದ್ಧೆಯ ಮಗನು ಕೂಡ ಸಹಾಯ ಮಾಡಿದ್ದನು ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಗ್ವಾಲಿಯರ್‌ನ ಕಮಲರಾಜ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗು ಹೇಗಿದ್ದರೇನು ಎಂದು ತಾಯಿ ಕಾಜಲ್ ಸಂತಸದಿಂದ ಇದ್ದರು. ಆದರೆ ಮಗು ಸಾವನ್ನಪ್ಪಿದ ಬಳಿಕ ತಾಯಿಯ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಇನ್ನು ಅತ್ತೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಸೊಸೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More