ನಮ್ಮ ಮೆಟ್ರೋ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರ.. ಕಾರಣವೇನು..?

author-image
Veena Gangani
Updated On
ನಮ್ಮ ಮೆಟ್ರೋ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರ.. ಕಾರಣವೇನು..?
Advertisment
  • ಕೋರ್ಟ್ ಮೂಲಕ ನ್ಯಾಯ ಕೇಳಲು ಮುಂದಾದ ಸಂಸದ ತೇಜಸ್ವಿ ಸೂರ್ಯ
  • ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಕೋರ್ಟ್ ಮೊರೆ
  • ಸೋಮವಾರ ಸಂಸದ ತೇಜಸ್ವಿ ಸೂರ್ಯ ಅರ್ಜಿಯ ವಿಚಾರಣೆ ನಡೆಯಲಿದೆ

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಮ್ಮ ಮೆಟ್ರೋ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಬಿಎಂಆರ್​ಸಿಎಲ್​ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿ ತೇಜಸ್ವಿ ಸೂರ್ಯ ಅವರ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.

ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್​ ಸೆಕ್ಯೂರಿಟಿ


">July 6, 2025

ಮೆಟ್ರೋ ದರ ಏರಿಕೆ ಪರಿಷ್ಕರಣೆ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದಿತ್ತು. ದೆಹಲಿ, ಚೆನ್ನೈ, ಹಾಂಕಾಂಗ್, ಸಿಂಗಾಪುರ್ ‌ಮೆಟ್ರೋ ನಿಲ್ದಾಣಗಳಿಗೆ ಹೋಗಿ ಸ್ಟಡಿ ಮಾಡಿದ್ರು. ಬಳಿಕ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿತ್ತು. ಶೇಕಡಾ 130% ದರ ಏರಿಕೆ ಮಾಡಿದ್ರು. ಸಮಿತಿಯ ವರದಿ ಬಹಿರಂಗಪಡಿಸಿ ಅಂತ ಎಷ್ಟೇ ಕೇಳಿದ್ರು ಬಹಿರಂಗ ಮಾಡ್ತಿಲ್ಲ. ಆರ್​ಟಿಐ ಮೂಲಕ ಆಗ್ರಹಿಸಿದರು ಬಹಿರಂಗ ಪಡಿಸ್ತಿಲ್ಲ. ಬಿಎಂಆರ್​ಸಿಎಲ್​ ಎಂಡಿಗೆ ಪತ್ರ ಬರೆದರೂ ಬಿಡುಗಡೆ ಮಾಡ್ತಿಲ್ಲ. ಹಾಗಾಗಿ ಕೋರ್ಟ್ ಮೂಲಕ ನ್ಯಾಯ ಕೇಳಲು ಸಂಸದ ತೇಜಸ್ವಿ ಸೂರ್ಯ ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment