ಒಡಹುಟ್ಟಿದ ಅಣ್ಣನ ಮೇಲೆ ಧೋನಿ ಸಿಟ್ಟಾಗಿದ್ದು ಏಕೆ..? ಆ ಯಡವಟ್ಟಿನಿಂದ ಕೋಪಕ್ಕೆ ಗುರಿಯಾದ್ರಾ ನರೇಂದ್ರ ಸಿಂಗ್?

author-image
Veena Gangani
Updated On
ಒಡಹುಟ್ಟಿದ ಅಣ್ಣನ ಮೇಲೆ ಧೋನಿ ಸಿಟ್ಟಾಗಿದ್ದು ಏಕೆ..? ಆ ಯಡವಟ್ಟಿನಿಂದ ಕೋಪಕ್ಕೆ ಗುರಿಯಾದ್ರಾ ನರೇಂದ್ರ ಸಿಂಗ್?
Advertisment
  • ನರೇಂದ್ರ ಸಿಂಗ್​ ಮೇಲೆ ಧೋನಿ ಸಿಟ್ಟಾಗಿದ್ಯಾಕೆ?
  • ಬಯೋಪಿಕ್​ನಿಂದ ಅಣ್ಣನನ್ನ ದೂರ ಇಟ್ಟಿದ್ಯಾಕೆ?
  • 3 ವರ್ಷದಿಂದ ಒಟ್ಟಾಗಿ ಅಣ್ಣ ತಮ್ಮಂದಿರ ಜೀವನ

ವಿಶ್ವ ಕ್ರಿಕೆಟ್​​​ ಲೋಕದ ಮೋಸ್ಟ್​ ಸಕ್ಸಸ್​​ಫುಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ತನ್ನ ಕೂಲ್​ ಮತ್ತು ಕಾಮ್​​ ವ್ಯಕ್ತಿತ್ವಕ್ಕೆ ಹೆಸರುವಾಸಿ. ಧೋನಿ ಸಾಮಾನ್ಯವಾಗಿ ಸಿಟ್ಟು ಮಾಡಿಕೊಳ್ಳಲ್ಲ. ಸಿಟ್ಟು ಮಾಡಿಕೊಂಡ್ರೆ ಸುಲಭಕ್ಕೆ ಶಾಂತನಾಗಲ್ಲ. ಯಾವುದಾದ್ರೂ ವಿಚಾರದಲ್ಲಿ ಧೋನಿಗೆ ಬೇಸರ ಆಯ್ತು ಅಂತಿಟ್ಟುಕೊಳ್ಳಿ. ಧೋನಿಯ ಕೋಪ ಎಷ್ಟು ಎಕ್ಸ್​​​ಟ್ರೀಮ್​ಗೆ ಹೋಗುತ್ತೆ ಅನ್ನೋದನ್ನ ಉಹಿಸೋಕೂ ಆಗಲ್ಲ. ಒಡ ಹುಟ್ಟಿದ ಅಣ್ಣನ ಕಥೆಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್​ಫ್ರೆಂಡ್.. ಬಿಗ್​ಬಾಸ್​ ವಿನ್ನರ್​ ಕೂಡ​ ಈ ಹಿಂದೆ ಹೃದಯಾಘಾತದಿಂದ ನಿಧನ!

publive-image

ವಿಶ್ವಮೆಚ್ಚಿದ ನಾಯಕ ಧೋನಿಯ ಜೀವನಾಧಾರಿತ ಚಿತ್ರ. 2016ರಲ್ಲಿ ತೆರೆಕಂಡು ಸೂಪರ್​ ಡೂಪರ್ ಹಿಟ್ ಆಗಿತ್ತು. ಬಾಕ್ಸ್​ ಆಫೀಸ್​​ನಲ್ಲಿ 216 ಕೋಟಿ ರೂ ಬಾಚಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು. ದಿವಂಗತ ಶುಶಾಂತ್ ಸಿಂಗ್ ರಜಪೂತ್​​ ಮಾಹಿಯ ಪಾತ್ರಕ್ಕೆ ಜೀವ ತುಂಬಿ ಶಹಬ್ಬಾಸ್​ ಗಿರಿ ಗಿಟ್ಟಿಸಿಕೊಂಡಿದ್ರು. 5 ವರ್ಷಗಳ ಹಿಂದೆ ತೆರೆಕಂಡ ಈ ಬ್ಲಾಕ್​ಬಸ್ಟರ್​​​​ ಮೂವಿ ಧೋನಿ ಜೀವನದ ಒಂದು ಕಂಪ್ಲೀಟ್ ಪ್ಯಾಕೇಜ್ ಆಗಿತ್ತು. ಧೋನಿಯ ಬಾಲ್ಯ, ಸ್ಟ್ರಗಲಿಂಗ್ ಲೈಫ್​​​​, ಲವ್​​​​​​, ಕ್ರಿಕೆಟ್ ಸಾಧನೆ, ಫ್ರೆಂಡ್ಸ್​​​ ಮತ್ತು ಫ್ಯಾಮಿಲಿ ಪಾತ್ರವನ್ನ ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇಷ್ಟೆಲ್ಲಾ ಇದ್ದ ಬಯೋಪಿಕ್​​ನಲ್ಲಿ ಒಂದು ಟಾಪಿಕ್ ಮಿಸ್ಸಾಗಿತ್ತು. ಧೋನಿಯ ಒಡಹುಟ್ಟಿದ ಅಣ್ಣನ ಬಗ್ಗೆ ಎಲ್ಲೂ ತೋರಿಸಿರ್ಲಿಲ್ಲ.
ಧೋನಿ ಬಯೋಪಿಕ್​ ಅಣ್ಣ ನರೇಂದ್ರ ಸಿಂಗ್​​ ಧೋನಿಯ ಪಾತ್ರ ಇಲ್ಲದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.

publive-image

ನಿಜ ಜೀವನದಲ್ಲೂ ಅಷ್ಟೇ ಧೋನಿ ಜೊತೆಗೆ ಎಲ್ಲೂ ಕೂಡ ಅವರ ಅಣ್ಣ ಕಾಣಿಸಿಕೊಂಡಿಲ್ಲ. ಧೋನಿ ತಮ್ಮ ಒಡಹುಟ್ಟಿದ ಅಣ್ಣನನ್ನೇ ದೂರ ಇಟ್ಟಿರೋದ್ಯಾಕೆ? ಇದಕ್ಕೆ ಕಾರಣ ಏನು? ಅನ್ನೋದು ಕ್ರಿಕೆಟ್​ ಲೋಕದ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊನೆಗೂ ಧೋನಿ ತಮ್ಮ ಸ್ವಂತ ಅಣ್ಣನ ಕೋಪಗೊಂಡಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಣ್ಣ ನರೇಂದ್ರ ಸಿಂಗ್​ ಮಾಡಿದ ಆ ಒಂದು ಯಡವಟ್ಟೇ ಧೋನಿ ಕೋಪಕ್ಕೆ ಕಾರಣ ಅನ್ನೋದು ರಿವೀಲ್​ ಆಗಿದೆ. 2008ರ ಆಸುಪಾಸಿನಲ್ಲಿ ಧೋನಿ ರಾಂಚಿಯಲ್ಲಿ ವೃದ್ಧಾಶ್ರಮವೊಂದನ್ನ ಕಟ್ಟೋಕೆ ಮುಂದಾಗಿದ್ರು. ಆ ಜವಾಬ್ಧಾರಿಯನ್ನ ಅಣ್ಣನಿಗೆ ವಹಿಸಿದ್ರು. ಅದಕ್ಕೆಂದು ಹಣವನ್ನೂ ನೀಡಿ ಪ್ರಾಪರ್ಟಿ ಖರೀದಿಗೆ ಸೂಚಿಸಿದ್ರಂತೆ. ಆ ದುಡ್ಡಲ್ಲಿ ಪ್ರಾಪರ್ಟಿ ಖರೀದಿಸಿದ್ದ ಧೋನಿ ಅಣ್ಣ ಅದನ್ನ ತನ್ನ ಪತ್ನಿ ಮನೆಯವರಿಗೆ ಗಿಫ್ಟ್​ ನೀಡಿದ್ರಿಂತೆ. ಇದ್ರಿಂದ ಸಿಟ್ಟಾದ ಧೋನಿ ಅಣ್ಣನನ್ನ ದೂರ ಇಟ್ಟಿದ್ರು. ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡ್ತಿದ್ರು.

publive-image

ವೃದ್ಧಾಶ್ರಮ ಕಟ್ಟೋ ವಿಚಾರದಲ್ಲಿ ಅಣ್ಣನ ನಡೆಯಿಂದ ಬೇಸರಗೊಂಡಿದ್ದ ಧೋನಿ ದಶಕಕ್ಕೂ ಅಧಿಕ ಕಾಲ ದೂರ ಉಳಿದಿದ್ರು. ಮಾತು ಕತೆ ಏನೋ ಇಲ್ಲದೇ ಮಹೆಂದ್ರ ಹಾಗೂ ನರೇಂದ್ರ ಜೀವನ ನಡೆಸ್ತಿದ್ರು. ಧೋನಿಯ ಈ ಕೋಪತಾಪ ಕೊನೆಗೂ ಕಡಿಮೆಯಾಗಿದೆ. ಅಣ್ಣನ ಮೇಲಿನ ಮುನಿಸನ್ನ ಮಿಸ್ಟರ್​ ಕೂಲ್​ ಮರೆತು ಒಂದಾಗಿದ್ದಾರೆ. ಕಳೆದ 3 ವರ್ಷಗಳಗಿಂದ ಇಬ್ಬರೂ ರಾಮ-ಲಕ್ಷ್ಮಣರು ಮತ್ತೆ ಸಂತೋಷದಿಂದ ಒಟ್ಟಾಗಿ ಜೀವನ ನಡೆಸ್ತಿದ್ದಾರೆ. ಐಪಿಎಲ್​​ ವೇಳೆ ಮಾತ್ರ ದರ್ಶನ ಕೊಡೋ ಧೋನಿ, ಆ ಬಳಿಕ ತಮ್ಮ ಫಾರ್ಮ್​​ಹೌಸ್​​ ಬ್ಯುಸಿಯಾಗ್ತಿದ್ದಾರೆ. ಧೋನಿಯ ಅಣ್ಣ ನರೇಂದ್ರ ಸಿಂಗ್​ ಧೋನಿ ರಾಜಕೀಯ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ರು. ಈಗ ಸಮಾಜವಾದಿ ಪಕ್ಷದಲ್ಲಿದ್ದಾರೆ. ಫೈನಲಿ ಧೋನಿ ತಮ್ಮ ಒಡ ಹುಟ್ಟಿದ ಅಣ್ಣನನ್ನ ದೂರ ಇಟ್ಟಿದ್ದೇಕೆ? ಬಯೋಪಿಕ್​ನಲ್ಲಿ ಧೋನಿಯ ಅಣ್ಣ ಮಿಸ್ ಆಗಿದ್ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದೂರಾಗಿದ್ದ ಇಬ್ಬರೂ ಒಂದಾಗಿದ್ದೂ ಆಗಿದೆ. ಇನ್ಮುಂದೆ ಮಹೆಂದ್ರ ಮತ್ತು ನರೇಂದ್ರ ರಾಮ-ಲಕ್ಷ್ಮಣರಂತೆ ಕೂಡಿ ಬಾಳಲಿ. ಅಣ್ಣ-ತಮ್ಮನ ಸಹೋದರತ್ವ ಎಲ್ಲರಿಗೂ ಮಾದರಿಯಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment