/newsfirstlive-kannada/media/post_attachments/wp-content/uploads/2025/06/MS_DHONI_3.jpg)
ನೇಮ್ ಆ್ಯಂಡ್ ಫೇಮ್. ಎರಡು ಬಂದ್ಮೇಲೆ ಕೆಲ ಕ್ರಿಕೆಟಿಗರನ್ನ ಹಿಡಿಯೋಕೆ ಆಗಲ್ಲ. ಆಕಾಶದಲ್ಲೇ ಹಾರಾಡ್ತಾರೆ. ಅವರ ಜೀವನ ಶೈಲಿ, ಆ್ಯಟಿಡ್ಯೂಡ್ ಎಲ್ಲವೂ ಬದಲಾಗುತ್ತೆ. ಆದ್ರೆ, ಎಲ್ಲವೂ ಸಿಕ್ಕ ಮೇಲೂ ಮೊದಲಿದ್ದಂತೆ ಇರೋರು ತುಂಬಾ ಕಡಿಮೆ. ಮಿಸ್ಟರ್ ಕೂಲ್ ಎಂ.ಎಸ್ ಧೋನಿ ಅದರಲ್ಲಿ ಒಬ್ಬರು. ಸರಳತೆಯ ಸಾಹುಕಾರ ಎಂ.ಎಸ್ ಧೋನಿ ಮತ್ತೆ ತಮ್ಮ ನಡೆಯಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ..! ವಿಶ್ವಕ್ರಿಕೆಟ್ನ ದಂತಕಥೆ. ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಕ್ರಿಕೆಟರ್. ಮಾಹಿಯ ಆಟ, ನಡೆ, ನುಡಿ ಎಲ್ಲವೂ ಅನುಕರಣೀಯ. ಧೋನಿಗೆ ಸಿಕ್ಕಿರೋ ಅಪಾರ ಯಶಸ್ಸು, ಗೌರವ ಎಲ್ಲಾರಿಗೂ ಸಿಗುವಂತದ್ದಲ್ಲ. ವಿಶ್ವವನ್ನೇ ಗೆದ್ದ ಇಂಥಾ ಧೋನಿಗೆ ಕೊಂಚವೂ ಹಮ್ಮು-ಬಿಮ್ಮಿಲ್ಲ. ನಿಜ ಹೇಳಬೇಕಂದ್ರೆ ಧೋನಿ ಒಬ್ಬ ಸರಳತೆಯ ಸಾಹುಕಾರ. ತಮ್ಮ ಖುಷಿಯ ಜೊತೆಗೆ ಫ್ಯಾನ್ಸ್ ಹಾಗೂ ಫ್ರೆಂಡ್ಸ್ ಕೂಡ ಖುಷಿಯಿಂದ ಇರಬೇಕು ಅಂತ ಬಯಸುವ ಹೃದಯವಂತ.
ಆಪ್ತ ಗೆಳೆಯನಿಗೆ ಮಿಸ್ಟರ್ ಕೂಲ್ ಮಾಹಿ ಸರ್ಪ್ರೈಸ್..!
ಧೋನಿ ತನ್ನ ಸರಳತೆಯಿಂದ ಆಗಾಗ ಇಡೀ ಜಗತ್ತಿನ ಗಮನ ಸೆಳೀತಾ ಇರ್ತಾರೆ. ಇದೇ ಕಾರಣಕ್ಕೆ ಧೋನಿ ಬಹುತೇಕರಿಗೆ ಇಷ್ಟ ಆಗೋದು ಕೂಡ. ಇದೀಗ ಮತ್ತೆ ಸುದ್ದಿಯಲ್ಲಿರೋದು ಮತ್ತೆ ಇದೇ ಸರಳತೆಯ ಕಾರಣಕ್ಕೆ.
ಸಾಮಾನ್ಯರಲ್ಲಿ ಸಾಮಾನ್ಯನಾಗಿ ವಿಶ್ವ ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ಕ್ಯಾಪ್ಟನ್ ಹೇಗೆ ನಿಂತಿದ್ದಾರೆ ಅಂತಾ. ಇತ್ತೀಚೆಗೆ ಧೋನಿಯ ಸ್ನೇಹಿತರೊಬ್ಬರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಬರ್ತ್ಡೇ ಸೆಲಬ್ರೇಶನ್ಗೆ ಧೋನಿ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ಸಾಮಾನ್ಯನಂತೆ ನಿಂತು ಗೆಳೆಯನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಕೇಕ್ ತಿನ್ನಿಸಿದ ಧೋನಿ, ಆನಂದಭಾಷ್ಪ ಸುರಿಸಿದ ಗೆಳೆಯ
ಕೇಕ್ ಕಟ್ ಮಾಡಿದ ಗೆಳೆಯ ಧೋನಿ ಕೇಕ್ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಧೋನಿ ಪಕ್ಕದಲ್ಲಿದ್ದವರಿಗೆ ತಿನ್ನಿಸಲು ಸೂಚಿಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆ ಬಳಿಕ ತಾವು ಮುಂದೆ ಬಂದು ಗೆಳೆಯನಿಗೆ ಮೊದಲು ಕೇಕ್ ತಿನ್ನಿಸಿದ್ದಾರೆ. ಈ ವೇಳೆ ಸಂತೋಷದಲ್ಲಿ ಗೆಳೆಯ ಆನಂದಭಾಷ್ಪ ಸುರಿಸಿದ್ದಾರೆ.
ಈ ವರ್ಷ ಮಾತ್ರವಲ್ಲ.. ಕಳೆದ ವರ್ಷ ಕೂಡ ಧೋನಿ ತಮ್ಮ ಗೆಳೆಯನ ಹುಟ್ಟುಹಬ್ಬದ ಸೆಲಬ್ರೇಷನ್ನಲ್ಲಿ ಭಾಗಿಯಾಗಿದ್ದರು. ಆಗಲೂ ಸಾಮಾನ್ಯನಂತೆ ನಿಂತು ಧೋನಿ ಸಂಭ್ರಮಿಸಿದರು. ಅಂದು ಫ್ಯಾಮಿಲಿಯವರಿಗೆ ಆದ ಸಂತಸವನ್ನಂತೂ ಹೇಳತೀರದು.
ಇದನ್ನೂ ಓದಿ:ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ದಿನ ಮುಂದೂಡಿಕೆ.. ಕಾರಣವೇನು?
ಧೋನಿಯ ಈ ಆಪ್ತ ಗೆಳೆಯ ಯಾರು ಗೊತ್ತಾ.?
ಅಂದ್ಹಾಗೆ ಧೋನಿಯ ಈ ಆಪ್ತ ಗೆಳೆಯನ ಹೆಸರು. ಸುರೆಂದರ್ ಕಾಕಾ ಅಂತ. ಭಾರತದ ಮಾಜಿ ಟೆನ್ನಿಸ್ ಪ್ಲೇಯರ್. 1977ರಲ್ಲಿ ಥಾಯ್ಲೆಂಡ್ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಗೋಲ್ಡ್ ಮೆಡಲ್ ಗೆದ್ದ ಸಾಧಕ. ಈ ಸುರೆಂದರ್ ಕಾಕಾ ಮತ್ತು ಧೋನಿ ಬಹುಕಾಲದ ಗೆಳೆಯರು. ಸದ್ಯ ಕಾಕಾ ಜಾರ್ಖಂಡ್ನಲ್ಲಿ ಟೆನ್ನಿಸ್ ಅಕಾಡೆಮಿ ನಡೆಸ್ತಿದ್ದಾರೆ. ಈ ಅಕಾಡೆಮಿಯಲ್ಲೇ ಧೋನಿ ಕೂಡ ಹಲವು ವರ್ಷಗಳಿಂದ ಅಭ್ಯಾಸ ನಡೆಸ್ತಿದ್ದಾರೆ.
ಸುರೆಂದರ್ ಕಾಕಾ ವಿಚಾರದಲ್ಲಿ ಮಾತ್ರವಲ್ಲ, ಧೋನಿ ತಮ್ಮ ಆಪ್ತರನ್ನ ತುಂಬಾ ಕೇರ್ ಮಾಡ್ತಾರೆ. ಯಶಸ್ಸು ಸಿಕ್ಕ ಮೇಲೆ ನಡೆದು ಬಂದ ದಾರಿಯನ್ನೇ ಮರೆಯೋರೆ ಹೆಚ್ಚು. ಆದ್ರೆ, ಮಾಹಿ ತಾವು ಖುಷಿ ಆಗಿರೋದಲ್ಲದೇ ತಮ್ಮ ಸುತ್ತಮುತ್ತಲಿನವರು ಖುಷಿಯಿಂದ ಇರಬೇಕು ಅಂತ ಬಯಸ್ತಾರೆ. ನಿಜಕ್ಕೂ ಧೋನಿಯದ್ದು ಎಂಥಾ ಕ್ಯಾರಕ್ಟರ್ ಅಲ್ವಾ?.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ