ಸೋಲಿನ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ CSK.. ಧೋನಿ ಪ್ಲಾನ್ ಮಾತ್ರ ಭಲೇ ಇದೆ..!

author-image
Ganesh
Updated On
ಸೋಲಿನ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ CSK.. ಧೋನಿ ಪ್ಲಾನ್ ಮಾತ್ರ ಭಲೇ ಇದೆ..!
Advertisment
  • ಫ್ಲೇ ಆಫ್ ಅಲ್ಲ.. ಚೆನ್ನೈ ತಂಡದಲ್ಲಿ ಭವಿಷ್ಯದ ಪ್ಲಾನ್
  • ಫ್ರಾಂಚೈಸಿಗೆ ಈ ಐಪಿಎಲ್​​​​​​​​​​​ ಆಟಕ್ಕುಂಟು ಲೆಕ್ಕಕ್ಕಿಲ್ಲ
  • ಭವಿಷ್ಯದತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೃಷ್ಟಿ

ಸತತ ಸೋಲಿನಿಂದ ಕಂಗಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಲಕ್ನೋ ಎದುರು ಗೆದ್ದ ಚೆನ್ನೈ ಉಳಿದ 7ಕ್ಕೆ ಏಳೂ ಪಂದ್ಯಗಳನ್ನು ಗೆದ್ದರೆ, ಪ್ಲೇ ಆಫ್​ಗೆ ಎಂಟ್ರಿ ನೀಡೋದು ಪಕ್ಕಾ. ಚೆನ್ನೈನ ಟಾರ್ಗೆಟ್​ ಪ್ಲೇ ಆಫ್​ ಎಂಟ್ರಿಯಲ್ಲ.. ಸದ್ಯ ಚೆನ್ನೈ ಫ್ರಾಂಚೈಸಿ ಭವಿಷ್ಯದ ಪ್ಲಾನ್​ ರೂಪಿಸ್ತಿದೆ.

ಈ ಸೀಸನ್​ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಚೆನ್ನೈ ಸತತ ಸೋಲುಗಳ ಮುಖಭಂಗ ಅನುಭವಿಸಿದೆ. ಹಿಂದೆಂದೂ ಕಾಣದ ಹೀನಾಯ ಪ್ರದರ್ಶನಕ್ಕೆ ಟೀಕೆಗಳನ್ನ ಎದುರಿಸಿದೆ. ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಆಡಿದ 7ರಲ್ಲಿ ಜಸ್ಟ್​ ಎರಡೇ ಎರಡು ಪಂದ್ಯಗಳನ್ನಷ್ಟೇ ಗೆದ್ದಿರುವ ಚೆನ್ನೈನ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ. ಮುಂದಿನ ಎಲ್ಲಾ ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ್ರೆ ಪ್ಲೇ-ಆಫ್ ತಲುಪುವುದು ಕಷ್ಟವೇನಲ್ಲ. ಹೀಗಿದ್ರೂ ಚೆನ್ನೈ ಸೂಪರ್ ಕಿಂಗ್ಸ್​ ಮ್ಯಾನೇಜ್​ಮೆಂಟ್​ ಈ ಸೀಸನ್ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಚೆನ್ನೈ​ಗೆ ಈ ಐಪಿಎಲ್​ ಸೀಸನ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದಕ್ಕೆ ಕಾರಣ ಚೆನ್ನೈ ಭವಿಷ್ಯದ ಪ್ಲಾನ್ಸ್​.

ಭವಿಷ್ಯದತ್ತ ಚೆನ್ನೈ ಸೂಪರ್ ಕಿಂಗ್ಸ್ ಚಿತ್ತ

ಈ ಬಾರಿ ಪ್ರತಿ ಸ್ಲಾಟ್​, ಪ್ರತಿ ವಿಭಾಗದಲ್ಲೂ ಚೆನ್ನೈ ಹಿಂದೆಂದೂ ಕಾಣದ ಫೇಲ್ಯೂರ್​ ಕಂಡಿದೆ. ಬ್ಯಾಟಿಂಗ್​, ಬೌಲಿಂಗ್​ ಬಿಡಿ.. ಫೀಲ್ಡಿಂಗ್​ನಲ್ಲೂ ಹೀನಾಯ ಪರ್ಫಾಮೆನ್ಸ್​ ನೀಡಿದೆ. ಕಳಪೆ ಪರ್ಫಾಮೆನ್ಸ್​ನಿಂದ ಬೇಸತ್ತು ಟ್ರೋಫಿ ಕನಸು ಕೈಬ್ಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್​, ಇದೀಗ ಭವಿಷ್ಯದತ್ತ ದೃಷ್ಟಿ ನೆಟ್ಟಿದೆ. ಭವಿಷ್ಯಕ್ಕೆ ಯಂಗ್​ ಕೋರ್​ ಟೀಮ್​ ಕಟ್ಟೋ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ.

ಇದನ್ನೂ  ಓದಿ: ಚಿನ್ನಸ್ವಾಮಿಯಲ್ಲಿ RCB ಮ್ಯಾಚ್; ಪಂಜಾಬ್ ಮಣಿಸಲು ಓರ್ವ ಬ್ಯಾಟರ್​ ಮೇಲೆ ಭಾರೀ ನಂಬಿಕೆಯಿಟ್ಟ ರಜತ್..!

publive-image

ಬಲಿಷ್ಠ ತಂಡ ಕಟ್ಟಲು ಪ್ರಯೋಗ

ಲಕ್ನೋ ಸೂಪರ್ ಜೈಂಟ್ಸ್ ಎದುರಿನ ಪಂದ್ಯದೊಂದಿಗೆ ಚೆನ್ನೈ ತಂಡ ಪ್ರಯೋಗಗಳಿಗೆ ಮುಂದಾಗಿದೆ. ಈ ಪಂದ್ಯದಲ್ಲಿ ಇನ್​ಕನ್ಸಿಸ್ಟೆಂಟ್​ ಅನಿಸಿದ್ದ ಡಿವೋನ್ ಕಾನ್ವೆಯನ್ನ ಬೆಂಚ್ ಕಾಯಿಸಿದ ಮ್ಯಾನೇಜ್​ಮೆಂಟ್​, 20 ವರ್ಷದ ಶೇಕ್ ರಶೀದ್​ಗೆ ಓಪನಿಂಗ್ ಮಾಡುವ ಅವಕಾಶ ನೀಡ್ತು. ಅನುಭವಿ ಸೀನಿಯರ್​ ಆಟಗಾರ ಆಫ್ ಸ್ಪಿನ್ನರ್ ಆರ್​.ಅಶ್ವಿನ್​ನೂ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗಿಟ್ಟಿತ್ತು. ಯುವ ಅಂಶುಲ್​​​ ಕಾಂಬೋಜ್​​ನ ಬ್ಯಾಕ್​ ಮಾಡ್ತು. ಇದಿಷ್ಟೇ ಅಲ್ಲ, ಋತುರಾಜ್​ ರಿಪ್ಲೇಸ್​ಮೆಂಟ್​ ಪ್ಲೇಯರ್​ ಆಗಿ ಸ್ಟಾರ್​​ನ ಕರೆ ತರೋ ಬದಲು 17 ವರ್ಷದ ಆಯುಷ್ ಮ್ಹಾತ್ರೆಗೆ ಮಣೆ ಹಾಕಿದೆ. ಇದೆಲ್ಲವೂ ಭವಿಷ್ಯದ ತಂಡ ಕಟ್ಟೋ ಪ್ರಯೋಗದ ಭಾಗವಾಗಿದೆ.

ಧೋನಿ ಹೆಗಲಿಗೆ ಟೀಮ್ ಕಟ್ಟುವ ಹೊಣೆ

ಚೆನ್ನೈ ತಂಡದ ಚಾಂಪಿಯನ್​ ಕ್ಯಾಪ್ಟನ್​ ಧೋನಿ ಹೆಗಲಿಗೆ ಟೀಮ್​ ಕಟ್ಟುವ ಹೊಣೆಯನ್ನ ಫ್ರಾಂಚೈಸಿ ನೀಡಿದೆ. ಋತುರಾಜ್​​ಗೆ ಇಂಜುರಿಯಾದ ಬೆನ್ನಲ್ಲೇ ಮತ್ತೆ ಧೋನಿಯನ್ನ ನಾಯಕನನ್ನಾಗಿ ನೇಮಿಸಿದ್ದು ಇದೇ ಕಾರಣಕ್ಕೆ. ಧೋನಿ ಯಾವಾಗ ಐಪಿಎಲ್​ಗೆ ಗುಡ್​ ಬೈ ಹೇಳ್ತಾರೋ ಗೊತ್ತಿಲ್ಲ. ಧೋನಿ ಜೊತೆಗೆ ಆರ್​.ಅಶ್ವಿನ್, ರವೀಂದ್ರ ಜಡೇಜಾ ಕೂಡ ನಿವೃತ್ತಿಯ ಅಂಚಿನಲ್ಲಿದ್ದಾರೆ. ಸದ್ಯ ತಂಡದಲ್ಲಿರುವ ರಾಹುಲ್ ತ್ರಿಪಾಠಿ, ದೀಪಕ್ ಹೂಡಾರಂತ ಆಟಗಾರರು ಸಹ ತಂಡಕ್ಕೆ ಹೊರೆಯೇ ಆಗಿದ್ದಾರೆ. ಇವರಿಗೆ ಪರ್ಯಾಯ ಆಟಗಾರರನ್ನು ಬೆಳಸೋ ಟಾಸ್ಕ್​​​​​​​​​​​ ಧೋನಿಗೆ ನೀಡಲಾಗಿದೆ.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ ಗೆಲ್ಲಲು ಆರ್​ಸಿಬಿಗೆ ಇದೆ ಈ ಅಸ್ತ್ರ.. ತಪ್ಪು ತಿದ್ದಿಕೊಳ್ಳಲು ಸುವರ್ಣಾವಕಾಶ..!

publive-image

ಪ್ರಸಕ್ತ ಸೀಸನ್​ನಲ್ಲಿ ವೈಫಲ್ಯ ಕಂಡಿದ್ದಾಗಿದೆ. ಇದ್ರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಂಡು ಫಲವಿಲ್ಲ. ಹೀಗಾಗಿ ಚೆನ್ನೈ ಮ್ಯಾನೇಜ್​ಮೆಂಟ್, ಈಗಿನಿಂದಲೇ ಭವಿಷ್ಯದತ್ತ ದೃಷ್ಟಿ ನೆಟ್ಟಿದೆ. ಯುವ ಆಟಗಾರರಿಗೆ ತಂಡದಲ್ಲಿ ಹೆಚ್ಚು ಅವಕಾಶ ನೀಡಲು ಫ್ರಾಂಚೈಸಿ ಮುಂದಾಗಿದೆ. ಈ ಪ್ರಯೋಗ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment