/newsfirstlive-kannada/media/post_attachments/wp-content/uploads/2025/04/DHONI_BATTING.jpg)
2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನೆಲದಲ್ಲಿಯೇ ಭಾರೀ ಅವಮಾನಕ್ಕೆ ಒಳಗುತ್ತಿದೆ. 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 104 ರನ್ಗಳ ಗುರಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ಗೆ ನೀಡಿದೆ.
ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 25ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಕೆಲವೇ ಕ್ಷಣದಲ್ಲಿ ರಹಾನೆಯ ಈ ನಿರ್ಧಾರ ಸರಿಯಾಗಿ ಇದೆ ಎನಿಸಿತು. ಏಕೆಂದರೆ, ಚೆನ್ನೈ ಪರ ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ರಚಿನ್ ರವೀಂದ್ರ (4) ಹಾಗೂ ಡಿವೋನ್ ಕಾನ್ವೆ (12) ತಂಡದ ಮೊತ್ತ 16 ರನ್ ಇರುವಾಗಲೇ ಔಟ್ ಆದರು.
ಇದನ್ನೂ ಓದಿ:CSK ಪ್ಲೇ ಆಫ್ ಹಾದಿ ಭಾರೀ ಕಠಿಣ.. ಕೂಲ್ ಕ್ಯಾಪ್ಟನ್ ಧೋನಿ ಮುಂದೆ ಸಾಲು ಸಾಲು ಚಾಲೆಂಜಸ್.!
ರಾಹುಲ್ ತ್ರಿಪಾಠಿ 16 ರನ್ ಗಳಿಸಿ ಆಡುವಾಗ ಸುನಿಲ್ ನರೈನ್ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ರನ್ಗಳಿಂದ ಆಡುವಾಗ ವರುಣ್ ಚಕ್ರವರ್ತಿ ಬ್ರೇಕ್ ಹಾಕಿದರು. ತವರಿನ ಪಿಚ್ ಆದರೂ ಆರ್ ಅಶ್ವಿನ್ ಅವರು ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ನಡೆದರು. ಆಲ್ರೌಂಡರ್ ಜಡೇಜಾ ಹಾಗೂ ದೀಪಕ್ ಹೂಡಾ ಈ ಇಬ್ಬರು ಡಕೌಟ್ ಆಗಿರುವುದು ಭಾರೀ ಅವಮಾನಕ್ಕೆ ಕಾರಣವಾಯಿತು ಎನ್ನಬಹುದು.
ಚೆನ್ನೈ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರು 10ನೇ ಬ್ಯಾಟ್ಸ್ಮನ್ ಆಗಿ ಕ್ರೀಸ್ಗೆ ಆಗಮಿಸಿದರು. ಆದರೆ ಧೋನಿ ಬ್ಯಾಟಿಂಗ್ ವೇಳೆ ಫ್ರಂಟ್ನಲ್ಲಿ ಕೆಕೆಆರ್ ಫೀಲ್ಡರ್ ಅನ್ನು ನಿಲ್ಲಿಸಿದ್ದರು. ಬಂದಷ್ಟೇ ವೇಗವಾಗಿ ಧೋನಿ 1 ರನ್ಗೆ ಹೊರ ನಡೆದು ಫ್ಯಾನ್ಸ್ಗೆ ನಿರಾಸೆ ಮೂಡಿಸಿದರು. ನೂರ್ ಅಹ್ಮದ್ ಕೂಡ 1 ರನ್ಗೆ ಕ್ಯಾಚ್ ಕೊಟ್ಟರು. ತಂಡದಲ್ಲಿ ಶಿವಂ ದುಬೆ ಅವರ 31 ರನ್ಗಳನ್ನು ಬಿಟ್ಟರೇ ಉಳಿದ ಯಾವ ಬ್ಯಾಟ್ಸ್ಮನ್ ಕೂಡ ಈ ರನ್ಗಳ ಗಡಿ ಸನಿಹಕ್ಕೂ ಬರಲಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 104 ರನ್ಗಳ ಟಾರ್ಗೆಟ್ ಅನ್ನು ರಹಾನೆ ಪಡೆಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ