Advertisment

ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ

author-image
Ganesh
Updated On
ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಅರೆಸ್ಟ್​.. ಕೆಲವರು ಹೀಗೂ ಇದ್ದಾರಾ..?
Advertisment
  • ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮ
  • ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ
  • ಅದ್ದೂರಿ ಮದುವೆಗೆ ದೇಶ, ವಿದೇಶಗಳಿಂದ ಗಣ್ಯರು ಆಗಮನ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ಈಗ ಅಂಬಾನಿ ಕುಟುಂಬದಲ್ಲಿ ಮದುವೆ ನಂತರದ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅಂತೆಯೇ ನಿನ್ನೆ ಹೆಣ್ಣು ಒಪ್ಪಿಸಿ ವಿದಾಯ ಹೇಳುವ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಧಿಕಾ ಮರ್ಚೆಂಟ್ ಅವರ ಮಾವ ಮುಕೇಶ್ ಅಂಬಾನಿ ಕಣ್ಣೀರು ಇಟ್ಟಿದ್ದಾರೆ.

Advertisment

ರಾಧಿಕಾ ಮರ್ಚೆಂಟ್​​​ ತನ್ನ ಕುಟುಂಬಕ್ಕೆ ವಿದಾಯ ಹೇಳುವ ಕಾರ್ಯಕ್ರಮ (vidai/ bidaai) ದಲ್ಲಿ ಮುಕೇಶ್ ಅಂಬಾನಿ ತುಂಬಾ ಭಾವುಕರಾಗಿದ್ದಾರೆ. ಇನ್ನು ರಾಧಿಕಾ ಮರ್ಚೆಂಟ್ ಸಹಜವಾಗಿಯೇ ಕಣ್ಣೀರು ಹಾಕುತ್ತಿರೋದು ಕಂಡುಬಂದಿದೆ. ಸದ್ಯ ಅಂಬಾನಿ ಕಣ್ಣೀರಿಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್​ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?

publive-image

ಏನಿದು ವಿದಾಯಿ ಕಾರ್ಯಕ್ರಮ..?
ಭಾರತೀಯ ಮದುವೆ ಸಮಾರಂಭದಲ್ಲಿ ಹೆಣ್ಣು ಒಪ್ಪಿಸಿ ವಿದಾಯ ಹೇಳುವ ಪದ್ದತಿ ತುಂಬಾನೇ ಭಾವನಾತ್ಮಕ ಘಳಿಗೆ ಸಾಕ್ಷಿಯಾಗುತ್ತದೆ. ಹೆಣ್ಣು ಹೆತ್ತ ಕುಟುಂಬ ಮಗುವನ್ನು ಎತ್ತಿ ಆಡಿಸಿ, ಮುದ್ದಾಡಿ ದೊಡ್ಡವರನ್ನಾಗಿ ಮಾಡುತ್ತದೆ. ಆಕೆ ಮದುವೆ ವಯಸ್ಸಿಗೆ ಬಂದಾಗ ಖುಷಿಯಿಂದ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಈ ವೇಳೆ ಹೆಣ್ಣಿನ ಕುಟುಂಬಸ್ಥರು, ಮಗಳಿಗೆ ಗಂಡನ ಮನೆಗೆ ಪ್ರೀತಿ ನೀಡಿ, ಮನೆಯನ್ನು ಬೆಳಗಿಕೊಂಡು ಹೋಗುವಂತೆ ಹಿತನುಡಿಗಳನ್ನು ಹೇಳಿ, ಆಶೀರ್ವಾದ ಮಾಡುತ್ತಾರೆ. ನಂತರ ಆಕೆಯ ಪತಿಯ ಕೈಗೆ ಮಗಳನ್ನು ಒಪ್ಪಿಸುತ್ತಾರೆ. ನಂತರ ಹೆಣ್ಣಿನ ಕಡೆಯ ದಿಬ್ಬಣ ವಾಪಸ್ ಹೋಗಲಿದೆ. ಇದು ಮದುಮಗಳಿಗೆ ಹಾಗೂ ಆಕೆಯ ಹೆತ್ತ ಕುಟುಂಬಕ್ಕೆ ತುಂಬಾ ಭಾರವಾದ ಕ್ಷಣವಾಗಿದೆ.

Advertisment

ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment