ಮುಂಬೈ ರೈಲು ಸ್ಫೋಟ ಕೇಸ್​ಗೆ ಟ್ವಿಸ್ಟ್.. 12 ಅಪರಾಧಿಗಳ ಖುಲಾಸೆ ಆದೇಶಕ್ಕೆ ಸುಪ್ರೀಂ ತಡೆ

author-image
Ganesh
Updated On
ಮುಂಬೈ ರೈಲು ಸ್ಫೋಟ ಕೇಸ್​ಗೆ ಟ್ವಿಸ್ಟ್.. 12 ಅಪರಾಧಿಗಳ ಖುಲಾಸೆ ಆದೇಶಕ್ಕೆ ಸುಪ್ರೀಂ ತಡೆ
Advertisment
  • 2015ರಲ್ಲಿ 12 ಮಂದಿಯನ್ನು ಖುಲಾಸೆಗೊಳಿಸಿದ್ದ ಹೈಕೋರ್ಟ್
  • ಹೈಕೋರ್ಟ್ ತೀರ್ಪು ಪ್ರಶ್ನೆ ಮಾಡಿದ್ದ ಮಹಾರಾಷ್ಟ್ರ ಸರ್ಕಾರ
  • ಸರಣಿ ರೈಲು ಸ್ಫೋಟದಲ್ಲಿ 189 ಮಂದಿ ಪ್ರಾಣ ಹೋಗಿದೆ

ಮುಂಬೈ ಟ್ರೈನ್ ಬಾಂಬ್ ಬ್ಲಾಸ್ಟ್​-2006 (Mumbai train bomb blasts) ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಸುಪ್ರೀಂ ಕೊರ್ಟ್ (Supreme Court ) ಮಹತ್ವದ ತೀರ್ಪು ನೀಡಿದೆ. ​ಪ್ರಕರಣದ 12 ಆರೋಪಿಗಳಿಗೆ ಬಾಂಬೆ ಹೈಕೋರ್ಟ್ (Bombay High Court) ನೀಡಿದ್ದ ಖುಲಾಸೆಗೆ ತಡೆಯಾಜ್ಞೆ ನೀಡಿದೆ.

ಬಾಂಬೆ ಹೈಕೋರ್ಟ್ ಇದೇ ಸೋಮವಾರ 12 ಅಪರಾಧಿಗಳನ್ನು ಪ್ರಕರಣದಿಂದ ಖುಲಾಸೆ ಮಾಡಿತ್ತು. ಹೈಕೋರ್ಟ್​ನ ನಿರ್ಧಾರ ಪ್ರಶ್ನೆ ಮಾಡಿದ ಮಹಾರಾಷ್ಟ್ರ ಸರ್ಕಾರ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್​ನಲ್ಲಿ ಈ ಬಗ್ಗೆ ವಿಸ್ತೃತ ಅರ್ಜಿ ವಿಚಾರಣೆ ನಡೆಯಬೇಕಿದೆ. ಅಲ್ಲಿಯವರೆಗೆ ಹೈಕೋರ್ಟ್​ನ ತೀರ್ಪಿಗೆ ಸುಪ್ರೀಂ ಕೋರ್ಟ್​ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ: ಗರ್ಭಿಣಿ ಪತ್ನಿ ಮೃತದೇಹದ ಮುಂದೆ ಎಗ್​​ ಬುರ್ಜಿ ಮಾಡಿ ತಿಂದ ಪತಿ.. ಬೆಂಗಳೂರಲ್ಲಿ ಮತ್ತೊಂದು ಹಾರರ್..!

ಪ್ರಕರಣದ ಎಲ್ಲಾ ಆರೋಪಿಗಳಿಗೂ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್​, ಅವರ ಬಿಡುಗಡೆಗೆ ಯಾವುದೇ ತಡೆ ನೀಡಿಲ್ಲ. ಜುಲೈ 11, 2006ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮುಂಬೈ ಲೋಕಲ್ ಟ್ರೈನ್​ನ 7 ಕೋಚ್​​ಗಳನ್ನ ಸ್ಫೋಟ ಮಾಡಲಾಗಿತ್ತು. ಈ ಕೃತ್ಯದಲ್ಲಿ 189 ಮಂದಿ ಪ್ರಾಣ ಕಳೆದುಕೊಂಡಿದ್ದರು. 824 ಜನರು ಗಂಭೀರವಾಗಿ ಗಾಯಗೊಂಡಿದ್ದರು.

2015ರಲ್ಲಿ MCOCA ವಿಶೇಷ ಕೋರ್ಟ್​ 13 ಮಂದಿ ಅಪರಾಧಿಗಳು ಎಂದು ತೀರ್ಪು ನೀಡಿತ್ತು. ಅಲ್ಲದೇ ಅವರಲ್ಲಿ ಐವರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿತು. ಉಳಿದ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು. ಓರ್ವನನ್ನು ಪ್ರಕರಣದಿಂದ ಖುಲಾಸೆ ಮಾಡಿತ್ತು. ಮರಣದಂಡನೆಗೆ ಒಳಗಾದ ಓರ್ವ ಅಪರಾಧಿ 2021ರಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಮ್ಯಾಂಚೆಸ್ಟರ್​ ಟೆಸ್ಟ್​ನ ಮೊದಲ ದಿನವೇ ಆಘಾತ.. ರಿಷಬ್ ಪಂತ್​​ಗೆ ಅಸಲಿಗೆ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment