ಪಾಂಡ್ಯ ಹೋರಾಟ ಮೆಚ್ಚಲೇಬೇಕು.. ಜಸ್ಟ್ 15 ಬಾಲ್​ನಲ್ಲಿ 42 ರನ್..!

author-image
Ganesh
Updated On
ಪಾಂಡ್ಯ ಹೋರಾಟ ಮೆಚ್ಚಲೇಬೇಕು.. ಜಸ್ಟ್ 15 ಬಾಲ್​ನಲ್ಲಿ 42 ರನ್..!
Advertisment
  • ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್​​ಸಿಬಿ
  • 12 ರನ್​ಗಳ ರೋಚಕ ಜಯ ಸಾಧಿಸಿದ ಆರ್​​ಸಿಬಿ
  • 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಆರ್​​ಸಿಬಿಗೆ ಜಯ

ಬೆಟ್ಟದಂತಹ ಟಾರ್ಗೆಟ್​ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ಆರಂಭದಲ್ಲಿ ಎಡವಿತು. ಮಿಡಲ್​ ಓವರ್​​ಗಳಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕಮ್​ಬ್ಯಾಕ್​ ಮಾಡ್ತು. ಮುಂಬೈನ ಕಮ್​ಬ್ಯಾಕ್​ ಪಂದ್ಯಕ್ಕೆ ರಣ ರೋಚಕ ಟ್ವಿಸ್ಟ್​ ನೀಡ್ತು.

ಬಿಗ್​ ಟಾರ್ಗೆಟ್​ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ಗೆ ಆರಂಭದಲ್ಲೇ ಯಶ್​ ದಯಾಳ್​ ಆಘಾತ ನೀಡಿದ್ರು. ಅಬ್ಬರದ ಆಟವಾಡೋ ಸೂಚನೆ ನೀಡಿದ ರೋಹಿತ್​ ಶರ್ಮಾ, ಯಶ್​ ದಯಾಳ್​​ ಕರಾರುವಕ್​​ ಎಸೆತಕ್ಕೆ ಕಕ್ಕಾಬಿಕ್ಕಿಯಾದ್ರು. 17 ರನ್​ಗಳಿಸಿದ್ದ ಹಿಟ್​ಮ್ಯಾನ್​ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದ್ರು.

ಇದನ್ನೂ ಓದಿ: ಅವರೇ ನಮ್ಮ ಹೀರೋ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?

publive-image

ಇನ್ನೋರ್ವ ಓಪನರ್​ ರಿಯಾನ್​ ರಿಕಲ್ಟನ್, ರೋಹಿತ್​ ಹಿಂದೆ ಡಗೌಟ್​ ಸೇರಿದ್ರು. 4 ಬೌಂಡರಿ ಸಿಡಿಸಿ ಮಿಂಚಿದ್ದ ರಿಕಲ್ಟನ್​​ ಹೇಜಲ್​ವುಡ್​​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್​ ಜಾಕ್ಸ್​ ಆಟವೂ ನಡೆಯಲಿಲ್ಲ. 18 ಎಸೆತಗಳನ್ನ ಎದುರಿಸಿದ ವಿಲ್​ ಜಾಕ್ಸ್​​ 22 ರನ್​ಗಳಿಗೆ ಸೀಮಿತವಾದ್ರು. ಕೃನಾಲ್​ ಪಾಂಡ್ಯ ಬೌಲಿಂಗ್​ನಲ್ಲಿ ಕೊಹ್ಲಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು.

ಮಿಸ್ಟರ್​ 360 ಡಿಗ್ರಿ ಬ್ಯಾಟರ್​​ ಸೂರ್ಯಕುಮಾರ್​ ಯಾದವ್​ಗೆ 2 ಜೀವದಾನ ಸಿಗ್ತು. ಕ್ಯಾಚ್​ ಡ್ರಾಪ್​ ಲಾಭ ಪಡೆದ ಸೂರ್ಯ 5 ಬೌಂಡರಿ ಬಾರಿಸಿದ್ರು. ಬಿಗ್​ ಇನ್ನಿಂಗ್ಸ್​ ಕಟ್ಟೋಕೆ ಯಶ್​ ದಯಾಳ್​ ಅವಕಾಶ ನೀಡಲಿಲ್ಲ. ಲಿವಿಂಗ್​​ಸ್ಟೋನ್​​ ಹಿಡಿದ ಅದ್ಭುತ ಕ್ಯಾಚ್​ಗೆ ಸೂರ್ಯಕುಮಾರ್ ಔಟಾದರು.

ಇದನ್ನೂ ಓದಿ: W W Wd 1 4 W 0! ಕೊನೆಯ ಓವರ್​ನ ರೋಚಕತೆ ಹೇಗಿತ್ತು? ಕೃನಾಲ್ ಬಗ್ಗೆ ಪಾಟೀದಾರ್​ ಏನಂದ್ರು..?

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ತಿಲಕ್​ ವರ್ಮಾ-ಹಾರ್ದಿಕ್​ ಪಾಂಡ್ಯ ಆರ್​​ಸಿಬಿ ಪಾಳೆಯದಲ್ಲಿ ಆತಂಕ ಹುಟ್ಟು ಹಾಕಿದ್ರು. ಬೌಂಡರಿ-ಸಿಕ್ಸರ್​​ಗಳಲ್ಲೇ ರನ್​ಡೀಲ್​ ಮಾಡಿದ ಈ ಜೋಡಿ 34 ಎಸೆತಗಳಲ್ಲಿ 89 ರನ್​ಗಳ ಜೊತೆಯಾಟವಾಡಿದ್ರು. ಪಂದ್ಯಕ್ಕೂ ರಣರೋಚಕ ಟ್ವಿಸ್ಟ್​ ನೀಡಿದ್ರು.
ಅಬ್ಬರದ ಆಟವಾಡಿದ ತಿಲಕ್​ ವರ್ಮಾ 4 ಬೌಂಡರಿ, 4 ಸಿಕ್ಸರ್​ ಸಿಡಿಸಿದ್ರು. 29 ಎಸೆತಗಳಲ್ಲೇ 56 ರನ್​ಗಳ ಬಿಗ್​ ಇನ್ನಿಂಗ್ಸ್​ ಕಟ್ಟಿದ್ರು. ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಅಗ್ರೆಸ್ಸಿವ್​ ಆಟವಾಡಿದ್ರು. 280ರ ಸ್ಟ್ರೈಕ್​ರೇಟ್​​​ನಲ್ಲಿ ಬ್ಯಾಟ್​ ಬೀಸಿದ ಹಾರ್ದಿಕ್​​ 3 ಬೌಂಡರಿ, 4 ಸಿಕ್ಸರ್​ ಸಿಡಿಸಿದ್ರು. ಜಸ್ಟ್​​ 15 ಎಸೆತಗಳಲ್ಲೇ 42 ರನ್​ ಸಿಡಿಸಿದ್ರು. ಬೌಲಿಂಗ್​ನಲ್ಲೂ ಅದ್ಭುತವಾಗಿ ಸ್ಪೆಲ್ ಮಾಡಿರುವ ಪಾಂಡ್ಯ, ಎರಡು ವಿಕೆಟ್ ಕಿತ್ತರು.

ಹಾರ್ದಿಕ್​-ತಿಲಕ್​ ಸ್ಫೋಟಕ ಆಟ ಮುಂಬೈ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. 18ನೇ ಓವರ್​​ನಲ್ಲಿ ತಿಲಕ್​ ವರ್ಮಾ ವಿಕೆಟ್​ ಉರುಳಿಸಿದ ಭುವನೇಶ್ವರ್​ ಮೊದಲ ಶಾಕ್​ ಕೊಟ್ರು. 19ನೇ ಓವರ್​ನಲ್ಲಿ ಪಾಂಡ್ಯಗೆ ಜೋಶ್​ ಹೇಜಲ್​ವುಡ್​​ ಗೇಟ್​ಪಾಸ್​ ನೀಡಿದ್ರು.
ಕೊನೆಯ ಓವರ್​ನಲ್ಲಿ 19 ರನ್​ ಡಿಫೆಂಡ್​ ಮಾಡಿಕೊಳ್ಳೋ ಟಾಸ್ಕ್​ನೊಂದಿಗೆ ಬೌಲಿಂಗ್​ಗೆ ಬಂದ ಕೃನಾಲ್​ ಪಾಂಡ್ಯ ಸ್ಪಿನ್​ ಮ್ಯಾಜಿಕ್​ ಮಾಡಿದ್ರು. 3 ವಿಕೆಟ್​ ಉರುಳಿಸಿ ಮುಂಬೈಗೆ ಶಾಕ್​ ನೀಡಿದ್ರು. 9 ವಿಕೆಟ್​ ಕಳೆದುಕೊಂಡ ಮುಂಬೈ 20 ಓವರ್​ ಅಂತ್ಯಕ್ಕೆ 209 ರನ್​ಗಳಿಸಿತು. 12 ರನ್​ಗಳ ರೋಚಕ ಗೆಲುವು ಸಾಧಿಸಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆದ್ದ ಸಾಧನೆ ಮಾಡಿತು.

ಇದನ್ನೂ ಓದಿ: ಸೋನು ಗೌಡ ಸೇರಿ 100ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಸ್ಟಾರ್​ಗಳ ಬೆಂಡೆತ್ತಿದ ಪೊಲೀಸರು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment