/newsfirstlive-kannada/media/post_attachments/wp-content/uploads/2025/05/Suryakumar_Yadav-1.jpg)
ಸೂರ್ಯಕುಮಾರ್ ಅವರ 57 ರನ್​ಗಳ ನೆರವಿನಿಂದ ಮುಂಬೈ ಇಂಡಿಯನ್ಸ್​ ತಂಡ ಕೊನೆ ಲೀಗ್​ ಪಂದ್ಯದಲ್ಲಿ 7 ವಿಕೆಟ್​ ನಷ್ಟಕ್ಕೆ 185 ರನ್​ಗಳ ಗುರಿಯನ್ನು ಪಂಜಾಬ್​ ಕಿಂಗ್ಸ್​​ಗೆ ನೀಡಿದೆ.
ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಪಂಜಾಬ್​ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ದೊಡ್ಡ ಹಿನ್ನಡೆ ಅನುಭವಿಸಿತು. ರಯಾನ್ ರಿಕೆಲ್ಟನ್ ಕೇವಲ 27 ರನ್​ಗೆ ವಿಕೆಟ್ ಒಪ್ಪಿಸಿದರು.
/newsfirstlive-kannada/media/post_attachments/wp-content/uploads/2025/05/Suryakumar-1.jpg)
ಇವರಾದ ಮೇಲೆ ಮತ್ತೊಬ್ಬ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಅವರು ಕ್ರೀಸ್​ನಲ್ಲಿ ಸ್ಟ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಹರ್ಪೀತ್​ ಬ್ರಾರ್​ ಬೌಲಿಂಗ್​ನಲ್ಲಿ 24 ರನ್​ಗೆ ಕ್ಯಾಚ್​ ಕೊಟ್ಟರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್​ ತಂಡದ ಮಾನ ಕಾಪಾಡಿದರು ಎನ್ನಬಹುದು. ಏಕೆಂದರೆ ಅಲ್ಪ ಮೊತ್ತಕ್ಕೆ ಕುಸಿಯುವ ತಂಡವನ್ನು ಸೂರ್ಯ ಮೇಲೆತ್ತಿದರು. ಈ ಪಂದ್ಯದಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿದ ಮಿಸ್ಟರ್​ 360 ಸೂರ್ಯಕುಮಾರ್, 6 ಬೌಂಡರಿ, 2 ಸಿಕ್ಸರ್​ಗಳಿಂದ 57 ರನ್​ ಚಚ್ಚಿದರು. ಈ ವೇಳೆ ಬ್ಯಾಟಿಂಗ್ ಮಾಡುವಾಗ ಆರ್ಷ್​ದೀಪ್ ಸಿಂಗ್​ಗೆ ಎಲ್​ಬಿಗೆ ಬಲಿಯಾದರು.
ತಿಲಕ್ ವರ್ಮಾ 1, ವಿಲ್ ಜಾಕ್ಸ್​ 17 ಮತ್ತೆ ಬ್ಯಾಟಿಂಗ್​ನಲ್ಲಿ ವಿಫಲರಾದರು. ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 2 ಬೌಂಡರಿ, 2 ಸಿಕ್ಸರ್​​​ನಿಂದ 15 ಬಾಲ್​ಗೆ 26 ರನ್​ ಸಿಡಿಸಿ ಔಟ್ ಆದರು. ನಮನ್​ ಧೀರ್ ಮತ್ತೆ ಅಬ್ಬರಿಸಲು ಮುಂದಾದರು. ಆದರೆ 20 ರನ್​ಗೆ ಆರ್ಷ್​ದೀಪ್ ಸಿಂಗ್​ಗೆ ವಿಕೆಟ್​ ಒಪ್ಪಿಸಿದರು. ಈ ಎಲ್ಲರ ಬ್ಯಾಟಿಂಗ್​ನಿಂದ ಮುಂಬೈ ಇಂಡಿಯನ್ಸ್​, 7 ವಿಕೆಟ್​ ನಷ್ಟಕ್ಕೆ 185 ರನ್​ಗಳ ಟಾರ್ಗೆಟ್​ ಅನ್ನು ಪಂಜಾಬ್​ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us