/newsfirstlive-kannada/media/post_attachments/wp-content/uploads/2025/05/Suryakumar_Yadav-1.jpg)
ಸೂರ್ಯಕುಮಾರ್ ಅವರ 57 ರನ್ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕೊನೆ ಲೀಗ್ ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ಗೆ ನೀಡಿದೆ.
ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ದೊಡ್ಡ ಹಿನ್ನಡೆ ಅನುಭವಿಸಿತು. ರಯಾನ್ ರಿಕೆಲ್ಟನ್ ಕೇವಲ 27 ರನ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಮುಂಬೈ ನಗರದಲ್ಲಿ ವರುಣಾರ್ಭಟ; ಮೆಟ್ರೋ ನಿಲ್ದಾಣದ ಅಂಡರ್ಗ್ರೌಂಡ್ ತುಂಬೆಲ್ಲಾ ನೀರೋ ನೀರು..!
ಇವರಾದ ಮೇಲೆ ಮತ್ತೊಬ್ಬ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಕ್ರೀಸ್ನಲ್ಲಿ ಸ್ಟ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಹರ್ಪೀತ್ ಬ್ರಾರ್ ಬೌಲಿಂಗ್ನಲ್ಲಿ 24 ರನ್ಗೆ ಕ್ಯಾಚ್ ಕೊಟ್ಟರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ತಂಡದ ಮಾನ ಕಾಪಾಡಿದರು ಎನ್ನಬಹುದು. ಏಕೆಂದರೆ ಅಲ್ಪ ಮೊತ್ತಕ್ಕೆ ಕುಸಿಯುವ ತಂಡವನ್ನು ಸೂರ್ಯ ಮೇಲೆತ್ತಿದರು. ಈ ಪಂದ್ಯದಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿದ ಮಿಸ್ಟರ್ 360 ಸೂರ್ಯಕುಮಾರ್, 6 ಬೌಂಡರಿ, 2 ಸಿಕ್ಸರ್ಗಳಿಂದ 57 ರನ್ ಚಚ್ಚಿದರು. ಈ ವೇಳೆ ಬ್ಯಾಟಿಂಗ್ ಮಾಡುವಾಗ ಆರ್ಷ್ದೀಪ್ ಸಿಂಗ್ಗೆ ಎಲ್ಬಿಗೆ ಬಲಿಯಾದರು.
ತಿಲಕ್ ವರ್ಮಾ 1, ವಿಲ್ ಜಾಕ್ಸ್ 17 ಮತ್ತೆ ಬ್ಯಾಟಿಂಗ್ನಲ್ಲಿ ವಿಫಲರಾದರು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ 2 ಬೌಂಡರಿ, 2 ಸಿಕ್ಸರ್ನಿಂದ 15 ಬಾಲ್ಗೆ 26 ರನ್ ಸಿಡಿಸಿ ಔಟ್ ಆದರು. ನಮನ್ ಧೀರ್ ಮತ್ತೆ ಅಬ್ಬರಿಸಲು ಮುಂದಾದರು. ಆದರೆ 20 ರನ್ಗೆ ಆರ್ಷ್ದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಈ ಎಲ್ಲರ ಬ್ಯಾಟಿಂಗ್ನಿಂದ ಮುಂಬೈ ಇಂಡಿಯನ್ಸ್, 7 ವಿಕೆಟ್ ನಷ್ಟಕ್ಕೆ 185 ರನ್ಗಳ ಟಾರ್ಗೆಟ್ ಅನ್ನು ಪಂಜಾಬ್ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ