ಮುಂಬೈ ತಂಡದಲ್ಲಿ ಶುರುವಾಗಿದೆಯ ಭಿನ್ನಾಭಿಪ್ರಾಯ?
ರೋಹಿತ್, ಬೂಮ್ರಾ, ಸೂರ್ಯರವರ ಈ ನಿರ್ಧಾರ ಸರಿಯೇ?
ಮುಂಬೈಗೆ ಶಾಕ್ ಕೊಟ್ಟ ಸ್ಟಾರ್ ಪ್ಲೇಯರ್ಸ್? ಹೀಗಾದ್ರೆ ಮುಂದೇನು?
ಮುಂಬೈ ತಂಡ 2024ರ ಬಾರಿಯ ಐಪಿಎಲ್ನಲ್ಲಿ ಹೀನಾಯ ಸೋಲು ಕಂಡು ತವರು ಸೇರಿದೆ. 14 ಪಂದ್ಯದಲ್ಲಿ 10 ಪಂದ್ಯ ಸೋಲುಂಡು ರೇಸ್ನಿಂದ ಹೊರಗುಳಿದಿದೆ. ಆದರೀಗ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಮೂವರು ಸ್ಟಾರ್ ಪ್ಲೇಯರ್ಸ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ರೋಹಿತ್ ಶರ್ಮಾರನ್ನು ಉಪನಾಯಕನನ್ನಾಗಿ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯಗೆ ಅವಕಾಶ ಕೊಟ್ಟರು. ಆದರೆ ಈ ಸುದ್ದಿ ರೋಹಿತ್ ಮತ್ತು ಅವರ ಅಭಿಮಾನಿಗಳನ್ನು ಕೆರಳಿಸಿತು. ಆದರೀಗ ಇದೇ ತಂಡದಲ್ಲಿ ಕೆಲ ಆಟಗಾರರು ಹೊರ ಹೋಗಲು ನಿರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮುಂಬೈ ಮನವೊಲಿಸುತ್ತಿದೆಯಾ?
2025ರ ಐಪಿಎಲ್ ಹರಾಜಿನಲ್ಲಿ ಮುಂಬೈ ತಂಡ ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳೋದು ಅವಶ್ಯಕವಾಗಿದೆ. ಅದರಲ್ಲಿ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ. ಆದರೀಗ ರೋಹಿತ್, ಸೂರ್ಯ, ಬೂಮ್ರಾ ಈ ತಂಡದಿಂದ ಹೊರಹೋಗಲು ನಿರ್ಧಿರಿಸಿದ್ದು, ಮುಂಬೈ ತಂಡ ಅವರ ಮನತಣಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬೂಮ್ರಾ
ಬೂಮ್ರಾ ಮುಂಬೈನ ಪ್ರಮುಖ ಬೌಲರ್. ಅವರ ಸಂಭಾವನೆ 12 ಕೋಟಿ. ಅಗ್ರಮಾನ್ಯ ಬೌಲರ್ ಎಂದೆನಿಸಿಕೊಂಡಿರುವ ಈ ವೇಗಿಗೆ ಉಳಿದವರಿಗಿಂತ ನೀಡುವ ಸಂಭಾವನೆ ತೀರಾ ಕಡಿಮೆ. ಹೀಗಾಗಿ ಮುಂದಿನ ವರ್ಷ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದರೆ 15 ಕೋಟಿಯಿಂದ 25 ಕೋಟಿಯವರೆಗೆ ಅವರನ್ನು ಖರೀದಿಸಲು ತಂಡಗಳು ಹೋರಾಟ ನಡೆಸಲಿವೆ.
ಮತ್ತೊಂದೆಡೆ ರೋಹಿತ್ ಬಳಿಕ ಬೂಮ್ರಾಗೆ ನಾಯಕತ್ವ ನೀಡುವ ನಿರೀಕ್ಷೆಯಿತ್ತು. ಆದರೆ ಮುಂಬೈ ತಂಡ ಹಾರ್ದಿಕ್ಗೆ ಚಾನ್ಸ್ ನೀಡಿದರು. ಇದರಿಂದ ಅವರು ಅತೃಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸದ್ಯಕ್ಕಿಲ್ಲ ನಿವೃತ್ತಿ.. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಅಪ್ಡೇಟ್ಸ್..!
ಸೂರ್ಯ
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ಗೆ ಮುಂಬೈ ನೀಡುತ್ತಿರುವ ಸಂಭಾವನೆ ತೀರಾ ಕಡಿಮೆ. 8 ಕೋಟಿ ಅವರಿಗೆ ನೀಡುತ್ತಿದೆ. ಹೀಗಾಗಿ ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂಭಾವನೆ ಪಡೆಯುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಂಡದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರೋಹಿತ್ ಶರ್ಮಾ
ಇನ್ನು ರೋಹಿತ್ ಬಗ್ಗೆ ಹೇಳಬೇಕಾಗಿಲ್ಲ. ನಾಯಕತ್ವದ ಕೈತಪ್ಪಿದ್ದಲ್ಲಿ ಅಸಮಾಧಾನವಿದೆ. ಮಾತ್ರವಲ್ಲದೆ ಇತ್ತೀಚೆಗೆ ತಂಡ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಮಾತನಾಡಿರುವ ಸಂಗತಿ ಕೂಡ ವೈರಲ್ ಆಗಿತ್ತು. ಹಾಗಾಗಿ ರೋಹಿತ್ ತಂಡದಿಂದ ಹೊರಬಂದರೆ ಮುಂದಿನ ವರ್ಷ ಬೇರೆ ತಂಡಗಳು ಖರೀದಿ ಮಾಡಬಹುದು ಎಂಬ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Rain Effects: ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಸಾಲು ಸಾಲು ಸಂಕಷ್ಟ
ಆದರೆ ಈ ಮೂವರು ಆಟಗಾರರು ನಿಜವಾಗಿಗೂ ತಂಡದಿಂದ ಹೋರಹೋಗುತ್ತಿದ್ದಾರಾ? ಮುಂಬೈ ತಂಡ ಇವರನ್ನು ಉಳಿಸಲು ಶತ ಪ್ರಯತ್ನ ಮಾಡುತ್ತಿದೆಯಾ? ಇವೆಲ್ಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಮುಂಬೈ ತಂಡದಲ್ಲಿ ಶುರುವಾಗಿದೆಯ ಭಿನ್ನಾಭಿಪ್ರಾಯ?
ರೋಹಿತ್, ಬೂಮ್ರಾ, ಸೂರ್ಯರವರ ಈ ನಿರ್ಧಾರ ಸರಿಯೇ?
ಮುಂಬೈಗೆ ಶಾಕ್ ಕೊಟ್ಟ ಸ್ಟಾರ್ ಪ್ಲೇಯರ್ಸ್? ಹೀಗಾದ್ರೆ ಮುಂದೇನು?
ಮುಂಬೈ ತಂಡ 2024ರ ಬಾರಿಯ ಐಪಿಎಲ್ನಲ್ಲಿ ಹೀನಾಯ ಸೋಲು ಕಂಡು ತವರು ಸೇರಿದೆ. 14 ಪಂದ್ಯದಲ್ಲಿ 10 ಪಂದ್ಯ ಸೋಲುಂಡು ರೇಸ್ನಿಂದ ಹೊರಗುಳಿದಿದೆ. ಆದರೀಗ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಮೂವರು ಸ್ಟಾರ್ ಪ್ಲೇಯರ್ಸ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ರೋಹಿತ್ ಶರ್ಮಾರನ್ನು ಉಪನಾಯಕನನ್ನಾಗಿ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯಗೆ ಅವಕಾಶ ಕೊಟ್ಟರು. ಆದರೆ ಈ ಸುದ್ದಿ ರೋಹಿತ್ ಮತ್ತು ಅವರ ಅಭಿಮಾನಿಗಳನ್ನು ಕೆರಳಿಸಿತು. ಆದರೀಗ ಇದೇ ತಂಡದಲ್ಲಿ ಕೆಲ ಆಟಗಾರರು ಹೊರ ಹೋಗಲು ನಿರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮುಂಬೈ ಮನವೊಲಿಸುತ್ತಿದೆಯಾ?
2025ರ ಐಪಿಎಲ್ ಹರಾಜಿನಲ್ಲಿ ಮುಂಬೈ ತಂಡ ಕೇವಲ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳೋದು ಅವಶ್ಯಕವಾಗಿದೆ. ಅದರಲ್ಲಿ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ. ಆದರೀಗ ರೋಹಿತ್, ಸೂರ್ಯ, ಬೂಮ್ರಾ ಈ ತಂಡದಿಂದ ಹೊರಹೋಗಲು ನಿರ್ಧಿರಿಸಿದ್ದು, ಮುಂಬೈ ತಂಡ ಅವರ ಮನತಣಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬೂಮ್ರಾ
ಬೂಮ್ರಾ ಮುಂಬೈನ ಪ್ರಮುಖ ಬೌಲರ್. ಅವರ ಸಂಭಾವನೆ 12 ಕೋಟಿ. ಅಗ್ರಮಾನ್ಯ ಬೌಲರ್ ಎಂದೆನಿಸಿಕೊಂಡಿರುವ ಈ ವೇಗಿಗೆ ಉಳಿದವರಿಗಿಂತ ನೀಡುವ ಸಂಭಾವನೆ ತೀರಾ ಕಡಿಮೆ. ಹೀಗಾಗಿ ಮುಂದಿನ ವರ್ಷ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದರೆ 15 ಕೋಟಿಯಿಂದ 25 ಕೋಟಿಯವರೆಗೆ ಅವರನ್ನು ಖರೀದಿಸಲು ತಂಡಗಳು ಹೋರಾಟ ನಡೆಸಲಿವೆ.
ಮತ್ತೊಂದೆಡೆ ರೋಹಿತ್ ಬಳಿಕ ಬೂಮ್ರಾಗೆ ನಾಯಕತ್ವ ನೀಡುವ ನಿರೀಕ್ಷೆಯಿತ್ತು. ಆದರೆ ಮುಂಬೈ ತಂಡ ಹಾರ್ದಿಕ್ಗೆ ಚಾನ್ಸ್ ನೀಡಿದರು. ಇದರಿಂದ ಅವರು ಅತೃಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸದ್ಯಕ್ಕಿಲ್ಲ ನಿವೃತ್ತಿ.. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಅಪ್ಡೇಟ್ಸ್..!
ಸೂರ್ಯ
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ಗೆ ಮುಂಬೈ ನೀಡುತ್ತಿರುವ ಸಂಭಾವನೆ ತೀರಾ ಕಡಿಮೆ. 8 ಕೋಟಿ ಅವರಿಗೆ ನೀಡುತ್ತಿದೆ. ಹೀಗಾಗಿ ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂಭಾವನೆ ಪಡೆಯುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಂಡದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರೋಹಿತ್ ಶರ್ಮಾ
ಇನ್ನು ರೋಹಿತ್ ಬಗ್ಗೆ ಹೇಳಬೇಕಾಗಿಲ್ಲ. ನಾಯಕತ್ವದ ಕೈತಪ್ಪಿದ್ದಲ್ಲಿ ಅಸಮಾಧಾನವಿದೆ. ಮಾತ್ರವಲ್ಲದೆ ಇತ್ತೀಚೆಗೆ ತಂಡ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಮಾತನಾಡಿರುವ ಸಂಗತಿ ಕೂಡ ವೈರಲ್ ಆಗಿತ್ತು. ಹಾಗಾಗಿ ರೋಹಿತ್ ತಂಡದಿಂದ ಹೊರಬಂದರೆ ಮುಂದಿನ ವರ್ಷ ಬೇರೆ ತಂಡಗಳು ಖರೀದಿ ಮಾಡಬಹುದು ಎಂಬ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Rain Effects: ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಸಾಲು ಸಾಲು ಸಂಕಷ್ಟ
ಆದರೆ ಈ ಮೂವರು ಆಟಗಾರರು ನಿಜವಾಗಿಗೂ ತಂಡದಿಂದ ಹೋರಹೋಗುತ್ತಿದ್ದಾರಾ? ಮುಂಬೈ ತಂಡ ಇವರನ್ನು ಉಳಿಸಲು ಶತ ಪ್ರಯತ್ನ ಮಾಡುತ್ತಿದೆಯಾ? ಇವೆಲ್ಲಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ