ರೋಹಿತ್​ ಶರ್ಮಾಗೆ ಮತ್ತೆ ಅವಮಾನ; ಕ್ಯಾಪ್ಟನ್ಸಿ ವಿಚಾರದಲ್ಲಿ ಮುಂಬೈ ಇಂಡಿಯನ್ಸ್​ ಸರ್ಪ್ರೈಸ್​ ನಿರ್ಧಾರ

author-image
Ganesh Nachikethu
Updated On
ಮುಂಬೈ ತಂಡದಿಂದ ಹಾರ್ದಿಕ್​​, ರೋಹಿತ್ ಸೇರಿ ಐವರು ರೀಟೈನ್​​​; ಯಾರಿಗೆ ಎಷ್ಟು ಕೋಟಿ? ಕ್ಯಾಪ್ಟನ್​ ಯಾರು?​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​
  • ರೋಹಿತ್​, ಹಾರ್ದಿಕ್​ ಸೇರಿ ಐವರಿಗೆ ಮಣೆ ಹಾಕಿದ ಮುಂಬೈ
  • ಕ್ಯಾಪ್ಟನ್ಸಿ ವಿಚಾರದಲ್ಲಿ ಮುಂಬೈನಿಂದ ಮಹತ್ವದ ನಿರ್ಧಾರ..!

ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತೀ ಹೆಚ್ಚು ಸಕ್ಸಸ್​ಫುಲ್​ ಆಗಿರೋ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್​ ಒಂದು. ಬರೋಬ್ಬರಿ 5 ಬಾರಿ ಐಪಿಎಲ್​ ಚಾಂಪಿಯನ್​ ಆಗಿದೆ. ಈ ತಂಡ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಜೊತೆಗೆ ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿದೆ. ಹಾಗೆಯೇ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆಲ್ಲಿಸಿದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ರೀಟೈನ್​ ಮಾಡಿಕೊಂಡು ಎಲ್ಲಾ ವಿವಾದಕ್ಕೂ ತೆರೆ ಎಳೆದಿದೆ.

ಯಾರಿಗೆ ಎಷ್ಟು ಕೋಟಿ?

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್​​ ತಂಡವನ್ನು ತೊರೆಯಲಿದ್ದಾರೆ ಅನ್ನೋ ವದಂತಿ ಇತ್ತು. ಆದರೀಗ, ಮುಂಬೈ ಇಂಡಿಯನ್ಸ್​ ತಂಡ ರೋಹಿತ್​ ಶರ್ಮಾ ಅವರ ಮನವೊಲಿಸಿದೆ. ಹಾಗಾಗಿ ರೋಹಿತ್ ಶರ್ಮಾಗೆ 16.30 ಕೋಟಿ ಕೊಟ್ಟು ರೀಟೈನ್​ ಮಾಡಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ ಬರೋಬ್ಬರಿ 18 ಕೋಟಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್​ಗೆ ತಲಾ 16.35 ಕೋಟಿ ನೀಡಿ ರೀಟೈನ್​​ ಮಾಡಿಕೊಳ್ಳಲಾಗಿದೆ. ತಿಲಕ್ ವರ್ಮಾಗೆ 8 ಕೋಟಿ ನೀಡಿ ಉಳಿಸಿಕೊಂಡಿದ್ದಾರೆ.

ಇಶಾನ್​ ಕಿಶನ್​ಗೆ ಕೊಕ್​

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್​ ವಿಕೆಟ್ ಕೀಪರ್ ಇಶಾನ್ ಕಿಶನ್. ಈ ಹಿಂದೆ 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಇಶಾನ್​ ಕಿಶನ್​ಗೆ ಬರೋಬ್ಬರಿ 15.25 ಕೋಟಿ ನೀಡಿ ಖರೀದಿ ಮಾಡಿತ್ತು. ಈ ಸಲ ಮುಂಬೈ ತಂಡದಿಂದ ಇಶಾನ್​ ಅವರನ್ನು ಕೈ ಬಿಡಲಾಗಿದೆ.

ಬಿಸಿಸಿಐ ಎಲ್ಲ ತಂಡಗಳಿಗೂ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಜತೆಗೆ ಐಪಿಎಲ್​​ ಹರಾಜಿನಲ್ಲಿ ಮಾಲೀಕರಿಗೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸುವ ಅವಕಾಶ ಕೂಡ ಇದೆ. ಈ ನಡುವೆ ಮುಂಬೈ ಯಾರನ್ನೆಲ್ಲಾ ಉಳಿಸಿಕೊಳ್ಳಬಹುದು ಎಂಬ ಕುತೂಹಲ ಜನರಲ್ಲಿತ್ತು. ಈಗ ಎಲ್ಲಾ ಪ್ರಶ್ನೆಗಳಿಗೂ ತೆರೆ ಬಿದ್ದಿದೆ.

ಕ್ಯಾಪ್ಟನ್​ ಯಾರು?

ಮುಂಬೈ ಇಂಡಿಯನ್ಸ್​ ತಂಡವು ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನೇ ಕ್ಯಾಪ್ಟನ್​ ಆಗಿ ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಸೂರ್ಯಗೆ ಮುಂಬೈ ಕ್ಯಾಪ್ಟನ್ಸಿ ಪಟ್ಟ ಸಿಗಲಿದೆ ಎಂದು ಹೇಳಲಾಗಿತ್ತು. ಹಾರ್ದಿಕ್​ ಪಾಂಡ್ಯ ಅವರೇ ನಾಯಕರಾದ ಕಾರಣ ಇದು ಸೂರ್ಯಗೆ ಶಾಕಿಂಗ್​ ನ್ಯೂಸ್​ ಆಗಿದೆ.

ಇದನ್ನೂ ಓದಿ: ಹರಾಜಿಗೆ ಮುನ್ನ RCB ಮಹಾ ಎಡವಟ್ಟು; ಒಂದೇ ಒಂದು ವಿಕೆಟ್​ ಪಡೆದವನಿಗೆ ಬೌಲಿಂಗ್​​ ಕೋಚ್ ಹುದ್ದೆ​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment