newsfirstkannada.com

‘ನಮಾಜ್ ಮಾಡಿ ಬಿರಿಯಾನಿ ಮಾಡಿದ್ರೆ ಟೇಸ್ಟ್ ಸೂಪರ್‌’- ವಿವಾದಕ್ಕೆ ಸಿಲುಕಿದ ನಟಿ ನಯನತಾರಾ ಸಿನಿಮಾ

Share :

Published January 8, 2024 at 1:08pm

Update January 8, 2024 at 1:09pm

    ನಿರ್ಮಾಪಕ, ನಿರ್ದೇಶಕರ, ನಟಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

    ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಆರೋಪ

    ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲಿಸಿದ ರಮೇಶ್ ಸೋಲಂಕಿ

ಬಹುಭಾಷಾ ನಟಿ ನಯನತಾರಾ ನಟಿಸಿರೋ ಅನ್ನಪೂರ್ಣಿ ಸಿನಿಮಾ ಹೊಸದೊಂದು ವಿವಾದಕ್ಕೆ ಗುರಿಯಾಗಿದೆ. ಅನ್ನಪೂರ್ಣಿ ಸಿನಿಮಾದಲ್ಲಿ ನಯನ ತಾರಾ ಹಿಂದೂ ಪೂಜಾರಿಯ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೂ ಪೂಜಾರಿಯ ಮಗಳು ಒಂದು ಅಡುಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಅಡುಗೆ ಸ್ಪರ್ಧೆಯನ್ನ ಗೆಲ್ಲಲು ನಮಾಜ್ ಮಾಡಿದೆ. ನಮಾಜ್ ಮಾಡಿ ಬಿರಿಯಾನಿ ಮಾಡಿದ್ದರಿಂದ ಬಿರಿಯಾನಿ ಚೆನ್ನಾಗಿದೆ ಎಂದು ಹೇಳಿದ್ದಾರೆ.

ನಯನ ತಾರಾ ಜೊತೆಗೆ ಭಗವಾನ ಶ್ರೀರಾಮ, ಮಾಂಸಹಾರಿ ಎಂದು ನಟ ಜೈ ಸಿನಿಮಾದಲ್ಲಿ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ ಎಂದು ದೂರಲಾಗಿದೆ. ಈ ಸಿನಿಮಾದಲ್ಲಿ ನಿಲೇಶ್ ಕೃಷ್ಣ ನಿರ್ದೇಶಿದ್ದಾರೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆ ಎಂದು ಹಿಂದೂ ಮುಖಂಡ, ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಗಂಭೀರವಾಗಿ ಆರೋಪಿಸಿದ್ದಾರೆ. ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಅನ್ನಪೂರ್ಣಿ ಸಿನಿಮಾ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ. ಹಿಂದೂ ಧರ್ಮ ವಿರೋಧಿ ನಿಲುವು ಚಿತ್ರದಲ್ಲಿರುವುದರಿಂದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಅವರು ಒತ್ತಾಯಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಟಾಟಾ ಬೈ ಬೈ.. ಬರೋಬ್ಬರಿ 10 ಸಾವಿರ ರೂಮ್‌, 5,520 ವಿಮಾನ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್‌


ಈ ಬಗ್ಗೆ ತಮ್ಮ X ಖಾತೆಯಲ್ಲಿ ಪೋಸ್ಟ್​ವೊಂದನನ್ನು ಹಂಚಿಕೊಂಡಿದ್ದಾರೆ. ಶೇರ್​​ ಮಾಡಿಕೊಂಡ ಫೋಟೋದಲ್ಲಿ ರಾಮನ ವಿರುದ್ಧ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲದೇ, ಚಿತ್ರವು ಲವ್ ಜಿಹಾದ್ ಅನ್ನು ಕೂಡ ಉತ್ತೇಜಿಸುತ್ತದೆ. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ. ನಟ ಫರ್ಹಾನ್ ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ನಟಿಯನ್ನು ಮಾಂಸ ತಿನ್ನಲು ಮನವೊಲಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಮಾಜ್ ಮಾಡಿ ಬಿರಿಯಾನಿ ಮಾಡಿದ್ರೆ ಟೇಸ್ಟ್ ಸೂಪರ್‌’- ವಿವಾದಕ್ಕೆ ಸಿಲುಕಿದ ನಟಿ ನಯನತಾರಾ ಸಿನಿಮಾ

https://newsfirstlive.com/wp-content/uploads/2024/01/nanyantara.jpg

    ನಿರ್ಮಾಪಕ, ನಿರ್ದೇಶಕರ, ನಟಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

    ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಆರೋಪ

    ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲಿಸಿದ ರಮೇಶ್ ಸೋಲಂಕಿ

ಬಹುಭಾಷಾ ನಟಿ ನಯನತಾರಾ ನಟಿಸಿರೋ ಅನ್ನಪೂರ್ಣಿ ಸಿನಿಮಾ ಹೊಸದೊಂದು ವಿವಾದಕ್ಕೆ ಗುರಿಯಾಗಿದೆ. ಅನ್ನಪೂರ್ಣಿ ಸಿನಿಮಾದಲ್ಲಿ ನಯನ ತಾರಾ ಹಿಂದೂ ಪೂಜಾರಿಯ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೂ ಪೂಜಾರಿಯ ಮಗಳು ಒಂದು ಅಡುಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಅಡುಗೆ ಸ್ಪರ್ಧೆಯನ್ನ ಗೆಲ್ಲಲು ನಮಾಜ್ ಮಾಡಿದೆ. ನಮಾಜ್ ಮಾಡಿ ಬಿರಿಯಾನಿ ಮಾಡಿದ್ದರಿಂದ ಬಿರಿಯಾನಿ ಚೆನ್ನಾಗಿದೆ ಎಂದು ಹೇಳಿದ್ದಾರೆ.

ನಯನ ತಾರಾ ಜೊತೆಗೆ ಭಗವಾನ ಶ್ರೀರಾಮ, ಮಾಂಸಹಾರಿ ಎಂದು ನಟ ಜೈ ಸಿನಿಮಾದಲ್ಲಿ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ ಎಂದು ದೂರಲಾಗಿದೆ. ಈ ಸಿನಿಮಾದಲ್ಲಿ ನಿಲೇಶ್ ಕೃಷ್ಣ ನಿರ್ದೇಶಿದ್ದಾರೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆ ಎಂದು ಹಿಂದೂ ಮುಖಂಡ, ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಗಂಭೀರವಾಗಿ ಆರೋಪಿಸಿದ್ದಾರೆ. ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಅನ್ನಪೂರ್ಣಿ ಸಿನಿಮಾ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ. ಹಿಂದೂ ಧರ್ಮ ವಿರೋಧಿ ನಿಲುವು ಚಿತ್ರದಲ್ಲಿರುವುದರಿಂದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಅವರು ಒತ್ತಾಯಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಟಾಟಾ ಬೈ ಬೈ.. ಬರೋಬ್ಬರಿ 10 ಸಾವಿರ ರೂಮ್‌, 5,520 ವಿಮಾನ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್‌


ಈ ಬಗ್ಗೆ ತಮ್ಮ X ಖಾತೆಯಲ್ಲಿ ಪೋಸ್ಟ್​ವೊಂದನನ್ನು ಹಂಚಿಕೊಂಡಿದ್ದಾರೆ. ಶೇರ್​​ ಮಾಡಿಕೊಂಡ ಫೋಟೋದಲ್ಲಿ ರಾಮನ ವಿರುದ್ಧ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲದೇ, ಚಿತ್ರವು ಲವ್ ಜಿಹಾದ್ ಅನ್ನು ಕೂಡ ಉತ್ತೇಜಿಸುತ್ತದೆ. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ. ನಟ ಫರ್ಹಾನ್ ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ನಟಿಯನ್ನು ಮಾಂಸ ತಿನ್ನಲು ಮನವೊಲಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More