newsfirstkannada.com

ಮೊದಲ ಪತಿ ಸಾವು.. 3 ವರ್ಷದ ಬಳಿಕ ಹಿಂದೂ ಯುವಕನ ಪ್ರೀತಿಸಿ ಮದ್ವೆ.. ಇದೀಗ ಆತನನ್ನೂ ಕೊಲೆ ಮಾಡಿಬಿಟ್ರು..

Share :

Published January 15, 2024 at 9:06am

    ಮಕ್ಕಳ ಸಲುವಾಗಿ ಹಿಂದೂ ಯುವಕನ ಮದುವೆ

    ಎರಡೂ ಫ್ಯಾಮಿಲಿಯಲ್ಲೂ ಒಪ್ಪಿಗೆ ಇತ್ತು, ಆದರೆ..

    ನೊಂದ ಮಹಿಳೆ ಪಾಲಿಗೆ ವಿಲನ್ ಆದ ಅಮ್ಮನ ಚಿಕ್ಕಪ್ಪ

ಜಾರ್ಖಂಡ್​​ನ ಕೊಡೆರ್ಮಾದ ಡೊಮ್​ಚಾಂಚ್​ ನಿವಾಸಿ ಸುಲ್ತಾನಳ ಪತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೂರು ವರ್ಷಗಳ ಕಾಲ ವಿಧವೆಯಾಗಿ ಜೀವನ ಸಾಗಿಸುತ್ತಿದ್ದ ಆಕೆ, 10 ತಿಂಗಳ ಹಿಂದೆ ಮಕ್ಕಳ ಸಲುವಾಗಿ ಹಿಂದೂ ಹುಡುಗನನ್ನು ಮದುವೆ ಆಗಿದ್ದಳು.

ಮಕ್ಕಳನ್ನು ಬೆಳೆಸುವ ಸಂಬಂಧ ಹಿಂದೂ ಹುಡುಗ ಘನಶ್ಯಾಮ್​​ ಎಂಬಾತನ ಮದುವೆ ಆಗಿದ್ದಳು. ಮದುವೆಯಾದ 10 ತಿಂಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಇದೀಗ ಆಕೆಯ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಸಂತ್ರಸ್ತ ಮಹಿಳೆಯು ಇಂದು ಪ್ರೀತಿಸಿದ ಹುಡುಗನ ಕಳೆದುಕೊಂಡು ದುಃಖದಲ್ಲಿದ್ದಾಳೆ.

ಸಂತ್ರಸ್ತ ಮಹಿಳೆ ಆರೋಪ..?

ಅಂದ್ಹಾಗೆ ಘನಶ್ಯಾಮ್​​ನನ್ನು ಸುಲ್ತಾನ ಪ್ರೀತಿಸಿ ಮದುವೆ ಆಗಿದ್ದಳಂತೆ. ಅದಕ್ಕೆ ಆಕೆಯ ಅಮ್ಮನಿಂದಲೂ ಒಪ್ಪಿಗೆ ಇತ್ತು, ಅಮ್ಮನೂ ಕೂಡ ಮದೆಯಲ್ಲಿ ಭಾಗಿಯಾಗಿದ್ದಳು. ಆದರೆ, ಸಂತ್ರಸ್ತ ಮಹಿಳೆಯ ಅಮ್ಮನ ಚಿಕ್ಕಪ್ಪ ಸುಲೇಮಾನ್​ಗೆ ಆಕೆ ಹಿಂದೂ ಹುಡುಗನನ್ನು ಮದುವೆ ಆಗೋದು ಇಷ್ಟ ಇರಲಿಲ್ಲವಂತೆ. ಮದುವೆ ಸಂದರ್ಭದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದನಂತೆ.

10 ತಿಂಗಳ ಕಾಲ ದ್ವೇಷ ಸಾಧಿಸಿಕೊಂಡು ಬಂದಿದ್ದ ಈತ, ಡಿಸೆಂಬರ್ 13 ರಂದು ಘನಶ್ಯಾಮ್​​ನನ್ನು ಕೊಲೆ ಮಾಡಿದ್ದಾನಂತೆ. ಮದ್ಯದಲ್ಲಿ ವಿಷ ಬೆರಸಿ ಕೊಲೆ ಮಾಡಿದ್ದಾನೆ ಎಂದು ಸುಲ್ತಾನ ಆರೋಪಿಸಿದ್ದಾಳೆ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಆಕೆ, ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲು ಅಲೆಯುತ್ತಿದ್ದಾಳೆ. ಧೂಮ್​ಚಾಂಚ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಎಸ್​ಪಿ ಅನುದೀಪ್ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಪತಿ ಸಾವು.. 3 ವರ್ಷದ ಬಳಿಕ ಹಿಂದೂ ಯುವಕನ ಪ್ರೀತಿಸಿ ಮದ್ವೆ.. ಇದೀಗ ಆತನನ್ನೂ ಕೊಲೆ ಮಾಡಿಬಿಟ್ರು..

https://newsfirstlive.com/wp-content/uploads/2024/01/JHARKHAND.jpg

    ಮಕ್ಕಳ ಸಲುವಾಗಿ ಹಿಂದೂ ಯುವಕನ ಮದುವೆ

    ಎರಡೂ ಫ್ಯಾಮಿಲಿಯಲ್ಲೂ ಒಪ್ಪಿಗೆ ಇತ್ತು, ಆದರೆ..

    ನೊಂದ ಮಹಿಳೆ ಪಾಲಿಗೆ ವಿಲನ್ ಆದ ಅಮ್ಮನ ಚಿಕ್ಕಪ್ಪ

ಜಾರ್ಖಂಡ್​​ನ ಕೊಡೆರ್ಮಾದ ಡೊಮ್​ಚಾಂಚ್​ ನಿವಾಸಿ ಸುಲ್ತಾನಳ ಪತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೂರು ವರ್ಷಗಳ ಕಾಲ ವಿಧವೆಯಾಗಿ ಜೀವನ ಸಾಗಿಸುತ್ತಿದ್ದ ಆಕೆ, 10 ತಿಂಗಳ ಹಿಂದೆ ಮಕ್ಕಳ ಸಲುವಾಗಿ ಹಿಂದೂ ಹುಡುಗನನ್ನು ಮದುವೆ ಆಗಿದ್ದಳು.

ಮಕ್ಕಳನ್ನು ಬೆಳೆಸುವ ಸಂಬಂಧ ಹಿಂದೂ ಹುಡುಗ ಘನಶ್ಯಾಮ್​​ ಎಂಬಾತನ ಮದುವೆ ಆಗಿದ್ದಳು. ಮದುವೆಯಾದ 10 ತಿಂಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಇದೀಗ ಆಕೆಯ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಸಂತ್ರಸ್ತ ಮಹಿಳೆಯು ಇಂದು ಪ್ರೀತಿಸಿದ ಹುಡುಗನ ಕಳೆದುಕೊಂಡು ದುಃಖದಲ್ಲಿದ್ದಾಳೆ.

ಸಂತ್ರಸ್ತ ಮಹಿಳೆ ಆರೋಪ..?

ಅಂದ್ಹಾಗೆ ಘನಶ್ಯಾಮ್​​ನನ್ನು ಸುಲ್ತಾನ ಪ್ರೀತಿಸಿ ಮದುವೆ ಆಗಿದ್ದಳಂತೆ. ಅದಕ್ಕೆ ಆಕೆಯ ಅಮ್ಮನಿಂದಲೂ ಒಪ್ಪಿಗೆ ಇತ್ತು, ಅಮ್ಮನೂ ಕೂಡ ಮದೆಯಲ್ಲಿ ಭಾಗಿಯಾಗಿದ್ದಳು. ಆದರೆ, ಸಂತ್ರಸ್ತ ಮಹಿಳೆಯ ಅಮ್ಮನ ಚಿಕ್ಕಪ್ಪ ಸುಲೇಮಾನ್​ಗೆ ಆಕೆ ಹಿಂದೂ ಹುಡುಗನನ್ನು ಮದುವೆ ಆಗೋದು ಇಷ್ಟ ಇರಲಿಲ್ಲವಂತೆ. ಮದುವೆ ಸಂದರ್ಭದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದನಂತೆ.

10 ತಿಂಗಳ ಕಾಲ ದ್ವೇಷ ಸಾಧಿಸಿಕೊಂಡು ಬಂದಿದ್ದ ಈತ, ಡಿಸೆಂಬರ್ 13 ರಂದು ಘನಶ್ಯಾಮ್​​ನನ್ನು ಕೊಲೆ ಮಾಡಿದ್ದಾನಂತೆ. ಮದ್ಯದಲ್ಲಿ ವಿಷ ಬೆರಸಿ ಕೊಲೆ ಮಾಡಿದ್ದಾನೆ ಎಂದು ಸುಲ್ತಾನ ಆರೋಪಿಸಿದ್ದಾಳೆ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಆಕೆ, ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲು ಅಲೆಯುತ್ತಿದ್ದಾಳೆ. ಧೂಮ್​ಚಾಂಚ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಎಸ್​ಪಿ ಅನುದೀಪ್ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More