ಮಕ್ಕಳ ಸಲುವಾಗಿ ಹಿಂದೂ ಯುವಕನ ಮದುವೆ
ಎರಡೂ ಫ್ಯಾಮಿಲಿಯಲ್ಲೂ ಒಪ್ಪಿಗೆ ಇತ್ತು, ಆದರೆ..
ನೊಂದ ಮಹಿಳೆ ಪಾಲಿಗೆ ವಿಲನ್ ಆದ ಅಮ್ಮನ ಚಿಕ್ಕಪ್ಪ
ಜಾರ್ಖಂಡ್ನ ಕೊಡೆರ್ಮಾದ ಡೊಮ್ಚಾಂಚ್ ನಿವಾಸಿ ಸುಲ್ತಾನಳ ಪತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೂರು ವರ್ಷಗಳ ಕಾಲ ವಿಧವೆಯಾಗಿ ಜೀವನ ಸಾಗಿಸುತ್ತಿದ್ದ ಆಕೆ, 10 ತಿಂಗಳ ಹಿಂದೆ ಮಕ್ಕಳ ಸಲುವಾಗಿ ಹಿಂದೂ ಹುಡುಗನನ್ನು ಮದುವೆ ಆಗಿದ್ದಳು.
ಮಕ್ಕಳನ್ನು ಬೆಳೆಸುವ ಸಂಬಂಧ ಹಿಂದೂ ಹುಡುಗ ಘನಶ್ಯಾಮ್ ಎಂಬಾತನ ಮದುವೆ ಆಗಿದ್ದಳು. ಮದುವೆಯಾದ 10 ತಿಂಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಇದೀಗ ಆಕೆಯ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಸಂತ್ರಸ್ತ ಮಹಿಳೆಯು ಇಂದು ಪ್ರೀತಿಸಿದ ಹುಡುಗನ ಕಳೆದುಕೊಂಡು ದುಃಖದಲ್ಲಿದ್ದಾಳೆ.
ಸಂತ್ರಸ್ತ ಮಹಿಳೆ ಆರೋಪ..?
ಅಂದ್ಹಾಗೆ ಘನಶ್ಯಾಮ್ನನ್ನು ಸುಲ್ತಾನ ಪ್ರೀತಿಸಿ ಮದುವೆ ಆಗಿದ್ದಳಂತೆ. ಅದಕ್ಕೆ ಆಕೆಯ ಅಮ್ಮನಿಂದಲೂ ಒಪ್ಪಿಗೆ ಇತ್ತು, ಅಮ್ಮನೂ ಕೂಡ ಮದೆಯಲ್ಲಿ ಭಾಗಿಯಾಗಿದ್ದಳು. ಆದರೆ, ಸಂತ್ರಸ್ತ ಮಹಿಳೆಯ ಅಮ್ಮನ ಚಿಕ್ಕಪ್ಪ ಸುಲೇಮಾನ್ಗೆ ಆಕೆ ಹಿಂದೂ ಹುಡುಗನನ್ನು ಮದುವೆ ಆಗೋದು ಇಷ್ಟ ಇರಲಿಲ್ಲವಂತೆ. ಮದುವೆ ಸಂದರ್ಭದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದನಂತೆ.
10 ತಿಂಗಳ ಕಾಲ ದ್ವೇಷ ಸಾಧಿಸಿಕೊಂಡು ಬಂದಿದ್ದ ಈತ, ಡಿಸೆಂಬರ್ 13 ರಂದು ಘನಶ್ಯಾಮ್ನನ್ನು ಕೊಲೆ ಮಾಡಿದ್ದಾನಂತೆ. ಮದ್ಯದಲ್ಲಿ ವಿಷ ಬೆರಸಿ ಕೊಲೆ ಮಾಡಿದ್ದಾನೆ ಎಂದು ಸುಲ್ತಾನ ಆರೋಪಿಸಿದ್ದಾಳೆ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಆಕೆ, ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲು ಅಲೆಯುತ್ತಿದ್ದಾಳೆ. ಧೂಮ್ಚಾಂಚ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಎಸ್ಪಿ ಅನುದೀಪ್ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಕ್ಕಳ ಸಲುವಾಗಿ ಹಿಂದೂ ಯುವಕನ ಮದುವೆ
ಎರಡೂ ಫ್ಯಾಮಿಲಿಯಲ್ಲೂ ಒಪ್ಪಿಗೆ ಇತ್ತು, ಆದರೆ..
ನೊಂದ ಮಹಿಳೆ ಪಾಲಿಗೆ ವಿಲನ್ ಆದ ಅಮ್ಮನ ಚಿಕ್ಕಪ್ಪ
ಜಾರ್ಖಂಡ್ನ ಕೊಡೆರ್ಮಾದ ಡೊಮ್ಚಾಂಚ್ ನಿವಾಸಿ ಸುಲ್ತಾನಳ ಪತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮೂರು ವರ್ಷಗಳ ಕಾಲ ವಿಧವೆಯಾಗಿ ಜೀವನ ಸಾಗಿಸುತ್ತಿದ್ದ ಆಕೆ, 10 ತಿಂಗಳ ಹಿಂದೆ ಮಕ್ಕಳ ಸಲುವಾಗಿ ಹಿಂದೂ ಹುಡುಗನನ್ನು ಮದುವೆ ಆಗಿದ್ದಳು.
ಮಕ್ಕಳನ್ನು ಬೆಳೆಸುವ ಸಂಬಂಧ ಹಿಂದೂ ಹುಡುಗ ಘನಶ್ಯಾಮ್ ಎಂಬಾತನ ಮದುವೆ ಆಗಿದ್ದಳು. ಮದುವೆಯಾದ 10 ತಿಂಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಇದೀಗ ಆಕೆಯ ಬದುಕಿನಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಸಂತ್ರಸ್ತ ಮಹಿಳೆಯು ಇಂದು ಪ್ರೀತಿಸಿದ ಹುಡುಗನ ಕಳೆದುಕೊಂಡು ದುಃಖದಲ್ಲಿದ್ದಾಳೆ.
ಸಂತ್ರಸ್ತ ಮಹಿಳೆ ಆರೋಪ..?
ಅಂದ್ಹಾಗೆ ಘನಶ್ಯಾಮ್ನನ್ನು ಸುಲ್ತಾನ ಪ್ರೀತಿಸಿ ಮದುವೆ ಆಗಿದ್ದಳಂತೆ. ಅದಕ್ಕೆ ಆಕೆಯ ಅಮ್ಮನಿಂದಲೂ ಒಪ್ಪಿಗೆ ಇತ್ತು, ಅಮ್ಮನೂ ಕೂಡ ಮದೆಯಲ್ಲಿ ಭಾಗಿಯಾಗಿದ್ದಳು. ಆದರೆ, ಸಂತ್ರಸ್ತ ಮಹಿಳೆಯ ಅಮ್ಮನ ಚಿಕ್ಕಪ್ಪ ಸುಲೇಮಾನ್ಗೆ ಆಕೆ ಹಿಂದೂ ಹುಡುಗನನ್ನು ಮದುವೆ ಆಗೋದು ಇಷ್ಟ ಇರಲಿಲ್ಲವಂತೆ. ಮದುವೆ ಸಂದರ್ಭದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದನಂತೆ.
10 ತಿಂಗಳ ಕಾಲ ದ್ವೇಷ ಸಾಧಿಸಿಕೊಂಡು ಬಂದಿದ್ದ ಈತ, ಡಿಸೆಂಬರ್ 13 ರಂದು ಘನಶ್ಯಾಮ್ನನ್ನು ಕೊಲೆ ಮಾಡಿದ್ದಾನಂತೆ. ಮದ್ಯದಲ್ಲಿ ವಿಷ ಬೆರಸಿ ಕೊಲೆ ಮಾಡಿದ್ದಾನೆ ಎಂದು ಸುಲ್ತಾನ ಆರೋಪಿಸಿದ್ದಾಳೆ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಆಕೆ, ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲು ಅಲೆಯುತ್ತಿದ್ದಾಳೆ. ಧೂಮ್ಚಾಂಚ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಎಸ್ಪಿ ಅನುದೀಪ್ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ