/newsfirstlive-kannada/media/post_attachments/wp-content/uploads/2024/04/Fruit-Salad.jpg)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾಯಿದೆ. ಇದರಿಂದ ಬೇಸತ್ತ ಸಿಟಿ ಮಂದಿ ಹಣ್ಣು, ಜ್ಯೂಸ್ ಮೊರೆ ಹೊಗ್ತಿದ್ದಾರೆ. ಆದ್ರೆ, ಇನ್ಮುಂದೆ ಬಿದಿ ಬದಿಯಲ್ಲಿ ನೀವು ಗಂಟೆಗಟ್ಟಲೇ ತೆರೆದಿಟ್ಟ ಹಣ್ಣು ತಿನ್ನೋ ಹಾಗ್ ಇಲ್ಲ. ಇದು ವ್ಯಾಪಾರಿಗಳಿಗೆ ತಲೆನೋವಾಗೋದಂತು ಪಕ್ಕಾ.
ಬನಾನಾ.. ಪಪ್ಪಾಯ.. ಆ್ಯಪಲ್.. ಪೈನಾಪಲ್.. ಈ ಮಿಕ್ಸಡ್ ಫ್ರೂಟ್ಸ್ ಅಂದ್ರೆ ಬಹುತೇಕರಿಗೆ ಅಚ್ಚುಮೆಚ್ಚು. ಬಾಯಿ ಚಪ್ಪರಿಸಿ ತಿನ್ತಾರೆ. ಆದ್ರೆ ಇನ್ಮುಂದೆ ಕಟ್ ಮಾಡಿರೋ ಹಣ್ಣು ತಿನ್ನೋ ಹಾಗಿಲ್ಲ. ವೈಟ್ ಮಾಡ್ಬೇಕಂತೆ. ಹೀಗಂತಾ ಹೇಳ್ತಿರೋದು ಬಿಬಿಎಂಪಿ..!
ಕಾಲರಾ ಅನ್ನೋ ವಿಚಿತ್ರ ರೋಗ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳು ಹಣ್ಣುಗಳನ್ನ ಮೊದ್ಲೇ ಕಟ್ ಮಾಡಿ ಮಾರಾಟ ಮಾಡೋದನ್ನ ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಹೀಗೆ ಸಿಕ್ಕ ಸಿಕ್ಕಲ್ಲಿ ಮೊದ್ಲೇ ಕಟ್ ಮಾಡಿರೋ ಇಂತಹ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ್ರ ಬದಲು ಗ್ರಾಹಕರು ಬಂದಾಗ ಕಟ್ ಮಾಡಿ ಕೊಡ್ಬೇಕು. ಜನರ ಡಿಮ್ಯಾಂಡ್ಗೆ ತಕ್ಕನಾಗಿ ಸಪ್ಲೈ ಮಾಡ್ಬೇಕು ಅಂತ ಬಿಬಿಎಂಪಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಒಟ್ಟಾರೆ, ಕಲುಷಿತ ನೀರು, ಕಟ್ ಮಾಡಿದ ಹಣ್ಣುಗಳನ್ನ ತಿನ್ನೋದ್ರಿಂದ ಕಾಲಾರ ಬರುತ್ತೆ. ಇದ್ರಿಂದ ತಪ್ಪಿಸಿಕೊಳ್ಳಲು, ಕಾಲಾರದ ಕರಾಳ ಓಟಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಪ್ಲಾನ್ ಮಾಡ್ಕೊಂಡಿದೆ. ಆದ್ರೆ ಈ ನಿಯಮ ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಷ್ಟೇ.
ಇದನ್ನೂ ಓದಿ:ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು; ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತ ಜಿದ್ದಾಜಿದ್ದಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ