/newsfirstlive-kannada/media/post_attachments/wp-content/uploads/2025/05/ART-of-leaving-ravi-shankar-gurujee.jpg)
ಮೈಸೂರು: ಕಾಲಘಟ್ಟದಲ್ಲಿ ಕಳೆದೇ ಹೋಯಿತು ಎಂದೇ ಭಾವಿಸಲಾಗಿದ್ದ, ಸಾವಿರ ವರ್ಷಗಳ ನಂತರ, ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳು ಈಗ ಮತ್ತೆ ಪ್ರತ್ಯಕ್ಷವಾಗಿವೆ. ಇದು ಐತಿಹಾಸಿಕವಾದ, ಅವಿಸ್ಮರಣೀಯವಾದ ಕ್ಷಣ. ಲಿಂಗಗಳ ರೂಪದಲ್ಲಿ ಮಾಡಲಾದ ಈ ದಿವ್ಯ ಸೋಮನಾಥ ಜ್ಯೋತಿರ್ಲಿಂಗವನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ತರಲಾಗುತ್ತಿದೆ.
ಮೇ 6, 2025, ಮಂಗಳವಾರ ಸಂಜೆ 6 ಗಂಟೆಯಿಂದ ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನ ಪಕ್ಕದಲ್ಲಿರುವ ಆರ್ಟ್ ಆಫ್ ಲಿವಿಂಗ್ನ ಆಶ್ರಮಕ್ಕೆ ಭಕ್ತರು ಬಂದು ಸೋಮನಾಥನ ದಿವ್ಯ ಜ್ಯೋತಿರ್ಲಿಂಗದ ದರ್ಶನ ಪಡೆದು, ದೈವೀ ಕಂಪನಗಳನ್ನು ಅನುಭವಿಸಬಹುದಾಗಿದೆ. ನಾಳೆ ಸಂಜೆಯಿಂದ ಸಾರ್ವಜನಿಕರಿಗೆ ಪ್ರವೇಶವಿದೆ.
ಸಾವಿರ ವರ್ಷಗಳ ನಂತರ ಪತ್ತೆಯಾಗಿದ್ದು ಹೇಗೆ?
1026 ಇಸವಿಯಲ್ಲಿ ಸೋಮನಾಥನ ದೇವಸ್ಥಾನವನ್ನು ಮಹಮ್ಮದ್ ಘಜ್ನಿಯು ನಾಶ ಮಾಡಿದ. ಆ ನಂತರ ಈ ಜ್ಯೋತಿರ್ಲಿಂಗವನ್ನು ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮೂಲಭೂತ ಸೋಮನಾಥ ಲಿಂಗದ ಅವಶೇಷಗಳನ್ನು ತಮ್ಮೊಡನೆ ಹೊತ್ತುಕೊಂಡು ತಮಿಳುನಾಡಿಗೆ ಬಂದರು. ಅದನ್ನು ಸಾವಿರ ವರ್ಷಗಳವರೆಗೆ ಗೌಪ್ಯವಾಗಿ ರಕ್ಷಿಸಿದರು.
ಇದನ್ನೂ ಓದಿ: ಮಹಾಶಿವರಾತ್ರಿ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 1000 ವರ್ಷಗಳ ನಂತರ ಸೋಮನಾಥ ಜ್ಯೋತಿರ್ಲಿಂಗದ ದರ್ಶನ
ಪೀಳಿಗೆಯಿಂದ ಪೀಳಿಗೆಯವರೆಗೆ ಅತ್ಯಂತ ಭಕ್ತಿಯಿಂದ ಪಂಡಿತ ಸೀತಾರಾಮ ಶಾಸ್ತ್ರಿಯವರ ಕುಟುಂಬವು ಸೋಮನಾಥನ ಪವಿತ್ರ ಅವಶೇಷಗಳನ್ನು ರಕ್ಷಿಸುತ್ತಾ ಬಂದರು. ಕಂಚಿ ಶಂಕರಾಚಾರ್ಯರು ಶಾಸ್ತ್ರಿಗಳಿಗೆ, ಬೆಂಗಳೂರಿನಲ್ಲಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಅದನ್ನು ತೆಗೆದುಕೊಂಡು ಹೋಗು. ಅವರು ನಿನಗೆ ಸಹಾಯ ಮಾಡುತ್ತಾರೆ ಎಂದು ನಿರ್ದೇಶನವನ್ನು ನೀಡಿದರು. ಈಗ ಮೈಸೂರಿನ ನಿವಾಸಿಗಳು ಅನಂತ ಶಕ್ತಿಯನ್ನು, ಶುದ್ಧತೆಯನ್ನು, ಆಶೀರ್ವಾದದ ಬಲವನ್ನು ಹೊತ್ತಿರುವ ಈ ದಿವ್ಯ ಲಿಂಗಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ