Advertisment

ಮೈಸೂರಲ್ಲಿ ನಟಿಯ ಕೊಲೆ.. ಆ ಕಾರಣಕ್ಕೆ ಪತಿಯ ಕೈಯಾರೆ ಬರ್ಬರ ಹತ್ಯೆ

author-image
AS Harshith
Updated On
ಮೈಸೂರಲ್ಲಿ ನಟಿಯ ಕೊಲೆ.. ಆ ಕಾರಣಕ್ಕೆ ಪತಿಯ ಕೈಯಾರೆ ಬರ್ಬರ ಹತ್ಯೆ
Advertisment
  • ಅಜಿತ್, ವೇದ, ಭಜರಂಗಿ ಸಿನಿಮಾದಲ್ಲಿ ನಟಿಸಿದ್ದ ನಟಿ
  • ಚಿರಂಜೀವಿ ಸರ್ಜಾ, ಶಿವಣ್ಣನ ಸಿನಿಮಾದಲ್ಲಿ ನಟಿಸಿದ್ದರು
  • ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ನಟಿ

ಮೈಸೂರು: ನಟಿಯೊಬ್ಬಳು ಕೊಲೆಯಾದ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕು ತುರಗನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತಿಯಿಂದಲೇ ಆಕೆ ಕೊಲೆಯಾಗಿದ್ದಾಳೆ.

Advertisment

ವಿದ್ಯಾ ಕೊಲೆಯಾದ ನಟಿ. ಕೌಟುಂಬಿಕ ಕಲಹ ಹಿನ್ನೆಲೆ ವಿದ್ಯಾ ತನ್ನ ಪತಿಯ ಕೈಯಾರೆ ಸಾವನ್ನಪ್ಪಿದ್ದಾಳೆ. ಪತಿ ನಂದೀಶ್ ಎಂಬಾತ ಆಕೆಯನ್ನು ಕೊಲೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಕೊನೆಗೆ ವಿದ್ಯಾ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

publive-image

ಇದನ್ನೂ ಓದಿ: VIDEO: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ.. 19 ವರ್ಷದ ಯುವಕ ಸಾವು

ವಿದ್ಯಾ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿರಂಜೀವಿ ಸರ್ಜಾ ಜೊತೆ ಅಜಿತ್, ಶಿವಣ್ಣನ ಜೊತೆ ವೇದಾ , ಭಜರಂಗಿ ಚಿತ್ರದಲ್ಲಿ ವಿದ್ಯಾ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಮಿಂಚಿದ್ದ ನಾಯಕ ನಟಿಯಾಗಿ ಮಿಂಚಿದ್ದಾರೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment