ಮೈಸೂರಲ್ಲಿ ಒಬ್ಬ ಕ್ರೇಜಿ ರೈತ.. ಈತನ 4 ಎಕರೆ ಜಮೀನು ಕಾಯೋದೇ ಈ ಮಾಡೆಲ್​​ಗಳು..!

author-image
Ganesh
Updated On
ಮೈಸೂರಲ್ಲಿ ಒಬ್ಬ ಕ್ರೇಜಿ ರೈತ.. ಈತನ 4 ಎಕರೆ ಜಮೀನು ಕಾಯೋದೇ ಈ ಮಾಡೆಲ್​​ಗಳು..!
Advertisment
  • ಮಾಡೆಲ್​​ಗಳ ಹಸಿಬಿಸಿ ಫೋಟೋ ಅಳವಡಿಸಿ ಪ್ಲಾನ್
  • ಬೆಳೆಗಳ ಮೇಲೆ ಕೆಟ್ಟ ಕಣ್ಣುಗಳು ಬೀಳದಂತೆ ಈ ಐಡಿಯಾ
  • ರೈತ ಸೋಮೇಶ್ ಪ್ಲಾನ್​​ಗೆ ದಾರಿ ಹೋಕರು ಬೋಲ್ಡ್

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತರೊಬ್ಬರು ತಮ್ಮ ಕೃಷಿ ಜಮೀನಿಗೆ ದೃಷ್ಟಿ ಆಗಬಾರದೆಂದು ಮಾಡಲ್​ಗಳ ಫೋಟೋಗಳನ್ನು ಅಳವಡಿಸಿದ್ದಾರೆ. ಇದು ದಾರಿಹೋಕರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.

ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಜಮೀನಿನಲ್ಲಿ ಮಾಡೆಲ್​​ಗಳ ಫೋಟೋಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅರೆ ಬೆತ್ತಲೆಯಾಗಿ ಇರುವ ಮಾಡೆಲ್​ಗಳ ಫೋಟೋಗಳನ್ನ ತಮ್ಮ ನಾಲ್ಕು ಎಕರೆ ಜಮೀನಿನ ಸುತ್ತ ಅಳವಡಿಸಿದ್ದಾರೆ.

ಇದನ್ನೂ ಓದಿ: ದಿಗ್ಗಜರ ನಡುವೆ ಶಿಷ್ಯರ ಮೇಲೆ ಗಂಭೀರ್​ಗೆ ಪ್ರೀತಿ; ಪ್ಲೇಯಿಂಗ್ 11 ವಿಚಾರದಲ್ಲಿ ಭಾರೀ ಗೊಂದಲ..!

publive-image

ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್​ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದಾನೆ. ಜಮೀನಿನ ಸುತ್ತ ಸುಮಾರು 10 ಸ್ಥಳಗಳಲ್ಲಿ ಮಾಡೆಲ್​ಗಳ ಚಿತ್ರಗಳು ರಾರಾಜಿಸುತ್ತಿವೆ.

ಇದನ್ನೂ ಓದಿ: ಹುಂಜಾ ವಿರುದ್ಧ ರೊಚ್ಚಿಗೆದ್ದ ವೃದ್ಧ; ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.. ಮುಂದೆ ಆಗಿದ್ದೇನು?

publive-image

ಸಾರ್ವಜನಿಕರು ಈ ಜಮೀನು ಸುತ್ತಮುತ್ತ ಹೋಗುವಾಗ ತೋಟದ ಬೆಳೆಗಳನ್ನು ನೋಡದೇ, ಅಲ್ಲಿ ಅಳವಡಿಸಿರುವ ಮಾಡೆಲ್​​ಗಳನ್ನು ಕುಣ್ತುಂಬಿಕೊಂಡು ಹೋಗ್ತಿದ್ದಾರೆ. ಆ ಮೂಲಕ ಕೆಟ್ಟ ಕಣ್ಣುಗಳು ನನ್ನ ಬೆಳೆ ಮೇಲಿ ಬೀಳುತ್ತಿಲ್ಲ ಎನ್ನುತ್ತಿದ್ದಾರೆ ರೈತ ಸೋಮೇಶ್.

ಇದನ್ನೂ ಓದಿ: ಮುಡಾ ಕೇಸ್​ನಲ್ಲಿ ಲೋಕಾಯುಕ್ತದಿಂದ ಕ್ಲೀನ್ ಚಿಟ್; ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸ್ಟ್ರಾಂಗ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment