ಮೈಸೂರಲ್ಲಿ ತಾಯಿ, ಪತ್ನಿ, ಮಗನಿಗೆ ವಿಷ ಉಣಿಸಿ ತಾನೂ ಜೀವ ಬಿಟ್ಟ ವ್ಯಕ್ತಿ.. ಅಸಲಿಗೆ ಆಗಿದ್ದೇನು?

author-image
Bheemappa
Updated On
ಮೈಸೂರಲ್ಲಿ ತಾಯಿ, ಪತ್ನಿ, ಮಗನಿಗೆ ವಿಷ ಉಣಿಸಿ ತಾನೂ ಜೀವ ಬಿಟ್ಟ ವ್ಯಕ್ತಿ.. ಅಸಲಿಗೆ ಆಗಿದ್ದೇನು?
Advertisment
  • ಪ್ರಾಣ ತೆಗೆದುಕೊಂಡ ನಗರದಲ್ಲಿನ ಒಂದೇ ಕುಟುಂಬದ ನಾಲ್ವರು
  • ಕುಟುಂಬವನ್ನೇ ಅಂತ್ಯ ಕಾಣಿಸಿ, ತಾನೂ ಜೀವ ತೆಗೆದುಕೊಂಡ
  • ನಗರದ ಅಪಾರ್ಟ್​​ಮೆಂಟ್​ನಲ್ಲಿ ಅಸಲಿಗೆ ಆಗಿದ್ದು ಆದ್ರೂ ಏನು?

ಮೈಸೂರು: ಒಂದೇ ಕುಟುಂಬದ ನಾಲ್ವರು ಕೊನೆಯುಸಿರೆಳೆದಿರುವ ಘಟನೆ ನಗರದ ವಿಶ್ವೇಶ್ವರಯ್ಯ ನಗರದ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ವಿಶ್ವೇಶ್ವರಯ್ಯ ನಗರದ ಅಪಾರ್ಟ್​ಮೆಂಟ್ ನಿವಾಸಿಗಳಾದ ಚೇತನ್( 45), ರೂಪಾಲಿ (43), ಪ್ರಿಯಂವದ (65) ಹಾಗೂ ಕುಶಾಲ್ (15) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಚೇತನ್ ಮೊದಲು ತನ್ನ ತಾಯಿ, ಪತ್ನಿ ಹಾಗೂ 15 ವರ್ಷದ ಮಗನಿಗೆ ವಿಷ ಉಣಿಸಿ ಜೀವ ತೆಗೆದಿರುವ ಅನುಮಾನ ವ್ಯಕ್ತಪಡಿಸಲಾಗಿದೆ.

ಮೂವರಿಗೆ ವಿಷ ಉಣಿಸಿದ ಮೇಲೆ ಚೇತನ್ ತಾನು ಕೂಡ ನೇಣು ಬಿಗಿದುಕೊಂಡಿದ್ದಾನೆ. ಆದರೆ ಈ ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇನ್​ಸ್ಪೆಕ್ಟರ್ ಮೋಹಿತ್, ಡಿಸಿಪಿ ಜಾಹ್ನನಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸ್ಥಳದಲ್ಲೇ ಇದ್ದಾರೆ. ಘಟನೆ ಸಂಬಂಧ ತನಿಖೆ ಆರಂಭಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment