newsfirstkannada.com

’ಭಾರತೀಯರು ಸೋಮಾರಿಗಳು ಎಂದಿದ್ದ ನೆಹರೂ, ಇಂದಿರಾ ಗಾಂಧಿ’- ಪ್ರಧಾನಿ ಮೋದಿ

Share :

Published February 5, 2024 at 8:01pm

    ಚೀನಾಗೆ ಹೋಲಿಸಿದರೆ ಭಾರತೀಯರು ಹೆಚ್ಚು ಶ್ರಮ ಹಾಕಲ್ಲ

    ಭಾರತೀಯರಿಗೆ ಏನು ಗೊತ್ತಿಲ್ಲ ಎಂದು ಅವಮಾನ ಮಾಡಿದ್ರು

    ನೆಹರೂ, ಇಂದಿರಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರು ಭಾರತೀಯರನ್ನು ಸೋಮಾರಿಗಳು ಎಂದು ಕರೆದಿದ್ದರು ಅನ್ನೋ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಪ್ರಸ್ತಾಪ ಮಾಡಿದ್ರು.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ 2.0 ಸರ್ಕಾರದ ಕೊನೆ ಲೋಕಸಭಾ ಅಧಿವೇಶನ ನಡೆಯಿತು. ಇಂದು ಲೋಕಸಭಾ ಅಧಿವೇಶನದಲ್ಲಿ ಕೊನೇ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತೀಯರು ಸೋಮಾರಿಗಳು. ಜಾಸ್ತಿ ಕೆಲಸ ಮಾಡೋದಿಲ್ಲ ಎಂದು ನೆಹರೂ, ಇಂದಿರಾ ಗಾಂಧಿ ಭಾವಿಸಿದ್ದರು. ಪರಿವಾರದ ಆಚೆಗೆ ಕಾಂಗ್ರೆಸ್ ಯೋಚನೆ ಮಾಡೋದೆ ಇಲ್ಲ ಎಂದರು.

ಚೀನಾಗೆ ಹೋಲಿಸಿದರೆ ಭಾರತ ಹೆಚ್ಚು ಶ್ರಮ ಹಾಕಲ್ಲ ಎಂದಿದ್ದ ಇಂದಿರಾ ಗಾಂಧಿ ದೇಶದ ಜನತೆ ಅವಮಾನ ಮಾಡಿದ್ದರು. ನಮಗೆ ಏನು ಗೊತ್ತಿಲ್ಲ ಎಂದು ಹೇಳುತ್ತಿದ್ದರು. ದೇಶದ ಜನರನ್ನು ಅವಮಾನ ಮಾಡುವುದೇ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಿದ್ರು ಮೋದಿ.

ನಾವು ಬಡವರಿಗೆ 4 ಕೋಟಿ ಮನೆ ಕಟ್ಟಿದ್ದೇವೆ. ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಉಜ್ವಲಾ ಗ್ಯಾಸ್ ಸಿಲಿಂಡರ್ ವಿತರಣೆ ಸೇರಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಈ ಯೋಜನೆಗಳು ಬರಬೇಕಾದ್ರೆ ಕಾಂಗ್ರೆಸ್ ಕಾಲದಲ್ಲಿ ಹಲವು ತಲೆಮಾರುಗಳೇ ಬೇಕಾಗುತ್ತಿದ್ದವು ಎಂದು ಕುಟುಕಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಭಾರತೀಯರು ಸೋಮಾರಿಗಳು ಎಂದಿದ್ದ ನೆಹರೂ, ಇಂದಿರಾ ಗಾಂಧಿ’- ಪ್ರಧಾನಿ ಮೋದಿ

https://newsfirstlive.com/wp-content/uploads/2024/02/Modi-Nehru.jpg

    ಚೀನಾಗೆ ಹೋಲಿಸಿದರೆ ಭಾರತೀಯರು ಹೆಚ್ಚು ಶ್ರಮ ಹಾಕಲ್ಲ

    ಭಾರತೀಯರಿಗೆ ಏನು ಗೊತ್ತಿಲ್ಲ ಎಂದು ಅವಮಾನ ಮಾಡಿದ್ರು

    ನೆಹರೂ, ಇಂದಿರಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರು ಭಾರತೀಯರನ್ನು ಸೋಮಾರಿಗಳು ಎಂದು ಕರೆದಿದ್ದರು ಅನ್ನೋ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಪ್ರಸ್ತಾಪ ಮಾಡಿದ್ರು.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ 2.0 ಸರ್ಕಾರದ ಕೊನೆ ಲೋಕಸಭಾ ಅಧಿವೇಶನ ನಡೆಯಿತು. ಇಂದು ಲೋಕಸಭಾ ಅಧಿವೇಶನದಲ್ಲಿ ಕೊನೇ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತೀಯರು ಸೋಮಾರಿಗಳು. ಜಾಸ್ತಿ ಕೆಲಸ ಮಾಡೋದಿಲ್ಲ ಎಂದು ನೆಹರೂ, ಇಂದಿರಾ ಗಾಂಧಿ ಭಾವಿಸಿದ್ದರು. ಪರಿವಾರದ ಆಚೆಗೆ ಕಾಂಗ್ರೆಸ್ ಯೋಚನೆ ಮಾಡೋದೆ ಇಲ್ಲ ಎಂದರು.

ಚೀನಾಗೆ ಹೋಲಿಸಿದರೆ ಭಾರತ ಹೆಚ್ಚು ಶ್ರಮ ಹಾಕಲ್ಲ ಎಂದಿದ್ದ ಇಂದಿರಾ ಗಾಂಧಿ ದೇಶದ ಜನತೆ ಅವಮಾನ ಮಾಡಿದ್ದರು. ನಮಗೆ ಏನು ಗೊತ್ತಿಲ್ಲ ಎಂದು ಹೇಳುತ್ತಿದ್ದರು. ದೇಶದ ಜನರನ್ನು ಅವಮಾನ ಮಾಡುವುದೇ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಿದ್ರು ಮೋದಿ.

ನಾವು ಬಡವರಿಗೆ 4 ಕೋಟಿ ಮನೆ ಕಟ್ಟಿದ್ದೇವೆ. ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಉಜ್ವಲಾ ಗ್ಯಾಸ್ ಸಿಲಿಂಡರ್ ವಿತರಣೆ ಸೇರಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಈ ಯೋಜನೆಗಳು ಬರಬೇಕಾದ್ರೆ ಕಾಂಗ್ರೆಸ್ ಕಾಲದಲ್ಲಿ ಹಲವು ತಲೆಮಾರುಗಳೇ ಬೇಕಾಗುತ್ತಿದ್ದವು ಎಂದು ಕುಟುಕಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More