ಕರ್ನಾಟಕದಲ್ಲಿ ಕಾವೇರಿದ 2024ರ ಲೋಕಸಭಾ ಚುನಾವಣಾ ಕಣ
ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರ!
ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ವೋಟ್ ಹಾಕಿ ಎಂದ ಮೋದಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ಆ ಬಳಿಕ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ನಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ತೆರಳಿದ ಬಳಿಕ ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇನ್ನು, ವೇದಿಕೆ ಮೇಲೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಮಲ್ಲೇಶ್ ಬಾಬು, ಡಾ.ಕೆ ಸುಧಾಕರ್ ಪರ ಮತಬೇಟೆ ನಡೆಸಿದ್ರು.
ಕರ್ನಾಟಕದ ಬಗ್ಗೆ ದೇವೇಗೌಡ ಅವರಿಗೆ ಬಹಳ ಕಾಳಜಿ. ನನಗೂ ದೇವೇಗೌಡ್ರ ಆಶೀರ್ವಾದ ಸಿಕ್ಕಿದೆ. ಎನ್ಐಡಿಐಎ ಒಕ್ಕೂಟ ಇದೆ, ಆದ್ರೆ ಭವಿಷ್ಯದ ಲೀಡರ್ ಇಲ್ಲ. ವಿರೋಧ ಪಕ್ಷಗಳು ಕೇವಲ ಭ್ರಷ್ಟಾಚಾರ. ಕೋಲಾ, ಚಿಕ್ಕಬಳ್ಳಾಪುರದ ಜನ ಮೊತ್ತೊಮ್ಮೆ ಮೋದಿ ಸರ್ಕಾರ ಎಂದು ಸಂದೇಶ ಕೊಡಬೇಕಿದೆ ಎಂದರು.
ನಿಮಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಗ್ಯಾರಂಟಿ ಜೊತೆಗೆ ನಿಮ್ಮ ಮುಂದೆ ಬಂದಿದ್ದೇನೆ. ಎರಡು ಜಿಲ್ಲೆಗಳಿಗೂ ಉಚಿತ ರೇಷನ್ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲೇ ಸುಮಾರು 4 ಲಕ್ಷ ಆಯುಷ್ಮಾನ್ ಫಲಾನುಭವಿಗಳು ಇದ್ದಾರೆ ಎಂದರು.
70 ವರ್ಷ ದಾಟಿದ 5 ಲಕ್ಷ ಮಂದಿಗೆ ಉಚಿತ ಚಿಕಿತ್ಸೆ, ಚಿಕ್ಕಬಳ್ಳಾಪುರದಲ್ಲಿ 14,000 ಮತ್ತು ಕೋಲಾರದಲ್ಲಿ 20,000 ಮಂದಿಗೆ ಮನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಇದುವೇ ಮೋದಿ ಗ್ಯಾರಂಟಿ ಎಂದರು.
ಇದನ್ನೂ ಓದಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಕೊಲೆ ಕೇಸ್; ಹತ್ಯೆ ಖಂಡಿಸಿದ ನಟ ರಿಷಬ್ ಶೆಟ್ಟಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕರ್ನಾಟಕದಲ್ಲಿ ಕಾವೇರಿದ 2024ರ ಲೋಕಸಭಾ ಚುನಾವಣಾ ಕಣ
ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರ!
ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ವೋಟ್ ಹಾಕಿ ಎಂದ ಮೋದಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ಆ ಬಳಿಕ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ನಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ತೆರಳಿದ ಬಳಿಕ ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇನ್ನು, ವೇದಿಕೆ ಮೇಲೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಮಲ್ಲೇಶ್ ಬಾಬು, ಡಾ.ಕೆ ಸುಧಾಕರ್ ಪರ ಮತಬೇಟೆ ನಡೆಸಿದ್ರು.
ಕರ್ನಾಟಕದ ಬಗ್ಗೆ ದೇವೇಗೌಡ ಅವರಿಗೆ ಬಹಳ ಕಾಳಜಿ. ನನಗೂ ದೇವೇಗೌಡ್ರ ಆಶೀರ್ವಾದ ಸಿಕ್ಕಿದೆ. ಎನ್ಐಡಿಐಎ ಒಕ್ಕೂಟ ಇದೆ, ಆದ್ರೆ ಭವಿಷ್ಯದ ಲೀಡರ್ ಇಲ್ಲ. ವಿರೋಧ ಪಕ್ಷಗಳು ಕೇವಲ ಭ್ರಷ್ಟಾಚಾರ. ಕೋಲಾ, ಚಿಕ್ಕಬಳ್ಳಾಪುರದ ಜನ ಮೊತ್ತೊಮ್ಮೆ ಮೋದಿ ಸರ್ಕಾರ ಎಂದು ಸಂದೇಶ ಕೊಡಬೇಕಿದೆ ಎಂದರು.
ನಿಮಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಗ್ಯಾರಂಟಿ ಜೊತೆಗೆ ನಿಮ್ಮ ಮುಂದೆ ಬಂದಿದ್ದೇನೆ. ಎರಡು ಜಿಲ್ಲೆಗಳಿಗೂ ಉಚಿತ ರೇಷನ್ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲೇ ಸುಮಾರು 4 ಲಕ್ಷ ಆಯುಷ್ಮಾನ್ ಫಲಾನುಭವಿಗಳು ಇದ್ದಾರೆ ಎಂದರು.
70 ವರ್ಷ ದಾಟಿದ 5 ಲಕ್ಷ ಮಂದಿಗೆ ಉಚಿತ ಚಿಕಿತ್ಸೆ, ಚಿಕ್ಕಬಳ್ಳಾಪುರದಲ್ಲಿ 14,000 ಮತ್ತು ಕೋಲಾರದಲ್ಲಿ 20,000 ಮಂದಿಗೆ ಮನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಇದುವೇ ಮೋದಿ ಗ್ಯಾರಂಟಿ ಎಂದರು.
ಇದನ್ನೂ ಓದಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಕೊಲೆ ಕೇಸ್; ಹತ್ಯೆ ಖಂಡಿಸಿದ ನಟ ರಿಷಬ್ ಶೆಟ್ಟಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ