0

user
  • Manage Subscription
  • Bookmarks
  • My Profile
  • Log Out
  • LIVE
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ವಿದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಲೈಫ್‌ಸ್ಟೈಲ್
  • ಎಜುಕೇಶನ್
  • ಟೆಕ್
  • Sign in with Email

By clicking the button, I accept the Terms of Use of the service and its Privacy Policy, as well as consent to the processing of personal data.

Don’t have an account? Signup

ad_close_btn
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸ್ಪೋರ್ಟ್ಸ್
  • ಆರೋಗ್ಯ

Powered by :

IPL-2025 ಟಾಪ್ ನ್ಯೂಸ್

ನಂಬಿಕೆ, ವಂಚನೆ..! ಪಾಂಡ್ಯ-ನಟಾಶಾ ಡಿವೋರ್ಸ್​​ಗೆ ಟ್ವಿಸ್ಟ್.. ನಟಾಶಾ ಹೀಗ್ಯಾಕೆ ಮಾಡ್ತಿದ್ದಾರೆ?

author-image
Ganesh
14 Aug 2024 12:37 IST
Updated On 14 Aug 2024 12:39 IST
Follow Us
ನಂಬಿಕೆ, ವಂಚನೆ..! ಪಾಂಡ್ಯ-ನಟಾಶಾ ಡಿವೋರ್ಸ್​​ಗೆ ಟ್ವಿಸ್ಟ್.. ನಟಾಶಾ ಹೀಗ್ಯಾಕೆ ಮಾಡ್ತಿದ್ದಾರೆ?
Advertisment
  • ಹಾರ್ದಿಕ್​- ನಟಾಶಾ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ.?
  • ಅನ್ಯೋನ್ಯವಾಗಿದ್ದ ಇಬ್ಬರ ದಾಂಪತ್ಯ ಹಳಿ ತಪ್ಪಿದ್ದೆಲ್ಲಿ?
  • ಹಾರ್ದಿಕ್​​-ನಟಾಶಾ ಡಿವೋರ್ಸ್​​ಗೆ ಕಾರಣ ಏನು?

ಹಾರ್ದಿಕ್​ ಪಾಂಡ್ಯ- ನಟಾಶಾ ಸ್ಟಾನ್ಕೋವಿಕ್​.. ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದೇಕೆ? ಅನ್ಯೋನ್ಯವಾಗಿದ್ದ ಸಂಸಾರ ಹಳಿ ತಪ್ಪಿದ್ದೆಲ್ಲಿ? ಹಾರ್ದಿಕ್​- ನಟಾಶ ವಿಚ್ಚೇದನದ ಸುದ್ದಿಯನ್ನ ಅಧಿಕೃತವಾಗಿ ಹೇಳಿ 2 ವಾರ ಕಳೆದ್ರೂ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಇನ್ನೂ ನಿಗೂಢವಾಗಿದೆ. ಇದ್ರ ನಡುವೆ ಇದೀಗ ಹಾರ್ದಿಕ್,​ ನಟಾಶಾಗೆ ಮೋಸ ಮಾಡಿದ್ರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ.

ಹಾರ್ದಿಕ್​ ಪಾಂಡ್ಯ- ನಟಾಶಾ ಸ್ಟಾನ್ಕೋವಿಕ್. ಬಾಲಿವುಡ್​​ ಹಾಗೂ ಕ್ರಿಕೆಟ್​ಗೆ ಬೆಸುಗೆ ಬೆಸೆದಿದ್ದ ಸೆಲೆಬ್ರಿಟಿ ಜೋಡಿ. ಹಲವು ವರ್ಷಗಳ ಕಾಲ ಸ್ನೇಹ. ಆ ಬಳಿಕ ಡೇಟಿಂಗ್​. ಆ ಬಳಿಕ ಲವ್​​. ಆ ಬಳಿಕ ಮಗು. ಅದಾದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು ಈ ಜೋಡಿ. ಅದೂ ಒಂದಲ್ಲ.. ಬರೋಬ್ಬರಿ 2 ಬಾರಿ ವಿವಾಹವಾಗಿ. ಅಗ್ನಿಸಾಕ್ಷಿಯಾಗಿ ಹಿಂದೂ ಸಂಪ್ರದಾಯದಂತೆ ಒಮ್ಮೆಯಾದ್ರೆ, ಕ್ರಿಶ್ಚಿಯನ್​ ಸಂಪ್ರದಾಯದಂತೆ ಇನ್ನೊಮ್ಮೆ.

ಇದನ್ನೂ ಓದಿ:BCCIಗೆ ಬಿಗ್ ಶಾಕ್ ಕೊಟ್ಟ ಕೋಲ್ಕತ್ತ ಪೊಲೀಸ್; ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ

publive-image

ವೈವಾಹಿಕ ಜೀವನ ಆರಂಭವಾದ ಮೇಲೆ ಮಗುವಿನ ಬಗ್ಗೆ ಆಲೋಚಿಸೋದಿದೆ. ಈ ಜೋಡಿ ಮದುವೆಗೂ ಮುನ್ನವೇ ಮಗು ಮಾಡಿಕೊಂಡು ಬಳಿಕ ಹಸೆಮಣೆ ಏರಿತ್ತು. ಇವರಿಬ್ಬರ ನಡುವೆ ನಂಬಿಕೆ ಅಷ್ಟರಮಟ್ಟಿಗಿತ್ತು. ಈಗ ಮಗ ಅಗಸ್ತ್ಯನಿಗೆ 4 ವರ್ಷ ವಯಸ್ಸು. ಈ ನಾಲ್ಕು ವರ್ಷದಲ್ಲಿ ಎಲ್ಲವೂ ಬದಲಾಗಿದೆ. ಇಬ್ಬರ ಸಂಬಂಧದಲ್ಲಿ ನಂಬಿಕೆಯೇ ಸತ್ತು ಹೋಗಿದೆ. ರಿಲೇಷನ್​​ಶಿಪ್ ಡಿವೋರ್ಸ್​​ನೊಂದಿಗೆ ಅಂತ್ಯಕಂಡಿದೆ.

ಹಾರ್ದಿಕ್​-ನಟಾಶಾ ಡಿವೋರ್ಸ್​​ಗೆ ಕಾರಣ
ಹಾರ್ದಿಕ್​ -ನಟಾಶಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿ ಕಳೆದ ಐಪಿಎಲ್​ ವೇಳೆಯೇ ಹಬ್ಬಿತ್ತು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ಜೋಡಿ ಮಾತ್ರ ಮೌನಕ್ಕೆ ಜಾರಿತ್ತು. ಅಂತಿಮವಾಗಿ ಜುಲೈ 18ರಂದು ಮೌನ ಮುರಿದ ಜೋಡಿ ಅಧಿಕೃತವಾಗಿ ಡಿವೋರ್ಸ್​ ಸುದ್ದಿ ಅನೌನ್ಸ್​ ಮಾಡಿತ್ತು.

ನಟಾಶಾಗೆ ಮೋಸ ಮಾಡಿದ್ರಾ ಹಾರ್ದಿಕ್​ ಪಾಂಡ್ಯ?
ಜೋಡಿ ಬೇರಾಗಿ ವಾರಗಳೇ ಉರುಳಿವೆ. ಭಾರತ ತೊರೆದಿರೋ ನಟಾಶ ಸರ್ಬಿಯಾಗೆ ತೆರಳಿದ್ದೂ ಆಗಿದೆ. ಡಿವೋರ್ಸ್​ಗೆ ಕಾರಣ ಏನು ಅನ್ನೋದು ಮಾತ್ರ ನಿಗೂಢವಾಗೇ ಉಳಿದಿತ್ತು. ಇದೀಗ ಹಾರ್ದಿಕ್​ ಪಾಂಡ್ಯಾನೇ ನಟಾಶಾಗೆ ಮೋಸ ಮಾಡಿದ್ರಾ ಎಂಬ ಚರ್ಚೆ ನಡೀತಿದೆ. ನಟಾಶಾರ ಇನ್ಸ್​​​ಸ್ಟಾಗ್ರಾಂ ಆ್ಯಕ್ಟಿವಿಟಿ ಈ ಅನುಮಾನದ ಹುಟ್ಟಿಗೆ ಕಾರಣವಾಗಿದೆ.

ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಐವರ ಬಲಿ

publive-image

ಮೋಸ, ನಂಬಿಕೆ ದ್ರೋಹದ ಪೋಸ್ಟ್​​ಗಳಿಗೆ ನಟಾಶ ಲೈಕ್
ಭಾರತ ಬಿಟ್ಟು ಸರ್ಬಿಯಾಗೆ ಹಾರಿರುವ ನಟಾಶಾ ಸ್ಟಾನ್ಕೋವಿಕ್ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಮಗನೊಂದಿಗೆ ಸುತ್ತಾಟ ನಡೆಸ್ತೊರೋ ಫೋಟೋಗಳನ್ನ ಪೋಸ್ಟ್​ ಮಾಡ್ತಿದ್ದಾರೆ. ಇದ್ರ ನಡುವೆ ಇನ್ಸ್​​ಸ್ಟಾಗ್ರಾಂನಲ್ಲಿ ಹಲವು ರೀಲ್ಸ್​ಗಳನ್ನ ನಟಾಶಾ ಲೈಕ್​ ಮಾಡಿದ್ದಾರೆ. ಆ ಎಲ್ಲಾ ರೀಲ್ಸ್​ಗಳು ನಂಬಿಕೆ ದ್ರೋಹ, ದಾಂಪತ್ಯ ಜೀವನದ ಮೋಸದ ಕುರಿತಾದ ಪೋಸ್ಟ್​ಗಳಾಗಿವೆ. ಇದನ್ನ ನೋಡಿದ ಮೇಲೆಯೇ ಎಲ್ಲರೂ ಹಾರ್ದಿಕ್​ ಮೋಸ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

ಪ್ರಾಚಿ ಸಿಂಗ್​​ ಜೊತೆ ಪಾಂಡ್ಯ ಮಿಂಚಿಂಗ್​!
ನಟಾಶಾ ಜೊತೆ ಡಿವೋರ್ಸ್​ ರೂಮರ್ಸ್​ ನಡುವೆಯೇ ಹಾರ್ದಿಕ್​ ಪಾಂಡ್ಯ, ನಟಿ ಪ್ರಾಚಿ ಸಿಂಗ್​ ಜೊತೆ ಕಾಣಿಸಿಕೊಂಡಿದ್ದರು. ವಿಶ್ವಕಪ್​ ಗೆಲುವಿನ ಬಳಿಕ ಇಬ್ಬರೂ ಬೇಟಿಯಾಗಿದ್ದರು. ಇಬ್ಬರೂ ಮ್ಯಾಚಿಂಗ್​ ಡ್ರೆಸ್​​ ಹಾಕಿಕೊಂಡು ಮಿಂಚಿದ್ರು. ಹಾರ್ದಿಕ್​ ಜೊತೆ ಬ್ರೇಕ್​ ಸುದ್ದಿ ಹೊರ ಬಿದ್ದಾಗ ನಟಾಶ ತೀವ್ರ ನಿಂದನೆಗೆ ಒಳಗಾಗಿದ್ರು. ಯಾವಾಗ ಪ್ರಾಚಿ ಸಿಂಗ್​-ಹಾರ್ದಿಕ್​ ವಿಡಿಯೋ ವೈರಲ್​ ಆಯ್ತೋ, ಆಗ ನಟಾಶ ಪ್ರತ್ಯಕ್ಷರಾಗಿದ್ರು. ಅಂದು ನಟಾಶ ಆಡಿದ್ದ ಮಾತುಗಳೂ ಕೂಡ ಪರೋಕ್ಷವಾಗಿ ಹಾರ್ದಿಕ್​​ನಿಂದ ಮೋಸ ಆಗಿದೆ ಎಂಬ ಅರ್ಥವನ್ನೇ ಧ್ವನಿಸುತ್ತ ಇದ್ದವು.

ಯಾರಾದ್ರೂ ನಮ್ಮಿಷ್ಟದಂತೆ ನಡೆದುಕೊಳ್ಳದಿದ್ರೆ ಜನರು ಎಷ್ಟು ವೇಗವಾಗಿ ನಿರ್ಧರಿಸಿಬಿಡ್ತಾರೆ. ಅವರಿಗೆ ಏನಾಗ್ತಿದೆ ಎಂದು ಯೋಚಿಸಲ್ಲ. ಬದಲಾಗಿ ನಿರ್ಧರಿಸಿ ಬಿಡ್ತೀವಿ. ಇದ್ರಿಂದ ಅವರಿಗೆ ಏನಾಗುತ್ತೆ ಅಂತಾ ಯಾರೂ ಯೋಚಿಸಲ್ಲ. ಇದರ ಹಿಂದೆ ಏನಾಗಿದೆ? ಸಂದರ್ಭ ಹೇಗಿತ್ತು? ಎಂದು ಚಿಂತಿಸಲ್ಲ. ಇಡೀ ಘಟನೆಯ ಹಿಂದೆ ನಡೆದಿರೋದು ಯಾರಿಗೂ ಗೊತ್ತಿರಲ್ಲ. ನಿರ್ಣಯಕ್ಕೆ ಬರೋದನ್ನ ನಿಲ್ಲಿಸಿ, ತಾಳ್ಮೆ ಬೆಳೆಸಿಕೊಳ್ಳಿ-ನಟಾಶಾ, ಹಾರ್ದಿಕ್ ಮಾಜಿ ಪತ್ನಿ

ಅಂದು ಹಿಂದೆ ನಡೆದಿರೋ ಬಗ್ಗೆ ನಿಮಗೆ ಯಾರಿಗೂ ಗೊತ್ತಿಲ್ಲ ಎಂದಿದ್ದ ನಟಾಶ, ಇದೀಗ ಹತ್ತು ಹಲವು ನಂಬಿಕೆ ದ್ರೋಹದ ಪೋಸ್ಟ್​ಗಳನ್ನ ಲೈಕ್​ ಮಾಡ್ತಿದ್ದಾರೆ. ಹಾರ್ದಿಕ್​ ಮಾತ್ರ ಈ ವಿಚಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಪಾಂಡ್ಯ ಮೌನ ಮುರಿದ್ರೆ ಮಾತ್ರ ಡಿವೋರ್ಸ್​ಗೆ​​ ಕಾರಣ ಏನು ಅನ್ನೋದು ಪ್ರಶ್ನೆ ಉತ್ತರ ಸಿಗೋಕೆ ಸಾಧ್ಯ.

ಇದನ್ನೂ ಓದಿ:ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
FOLLOW NEWSFIRST FOR
LATEST UPDATES
YouTubeFacebookTwitterInstagram
Related Articles
Read the Next Article
Latest Stories


Quick Links

  • IC
  • GRIEVANCE
  • FEED
  • CONTACT US

Olecom Media Pvt Ltd. © 2025

Powered by