Advertisment

ಟಿಟಿಡಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆ ಕೇಸ್‌: ಟಿಟಿಡಿ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ಆಪ್ತ ಸಹಾಯಕ ಚಿನ್ನಅಪ್ಪಣ್ಣ ಬಂಧನ

ತಿರುಮಲ ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆಯಾದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ನಡೆಸುತ್ತಿದೆ. ಈ ಕೇಸ್ ನಲ್ಲಿ ಟಿಟಿಡಿ ಹಿಂದಿನ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಆಪ್ತ ಸಹಾಯಕ ಚಿನ್ನ ಅಪ್ಪಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

author-image
Chandramohan
tirupati laddu: ತುಪ್ಪದಲ್ಲಿ ದನದ ಕೊಬ್ಬಿನ ತಪ್ಪು ಒಪ್ಪಿಕೊಂಡ TTD; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ
Advertisment

ತಿರುಮಲ ತಿರುಪತಿ ದೇವಸ್ಥಾನದಲ್ಲಾದ(TTD) ‘ಲಡ್ಡು ಕಲಬೆರಕೆ ಪ್ರಕರಣ’ದ ತನಿಖೆ ನಡೆಸುತ್ತಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ, ಟಿಟಿಡಿ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಹಾಲಿ ರಾಜ್ಯಸಭಾ ಸಂಸದ ವೈ.ವಿ. ಸುಬ್ಬಾ ರೆಡ್ಡಿ ಅವರ ಆಪ್ತ ಸಹಾಯಕ ಚಿನ್ನ ಅಪ್ಪಣ್ಣನನ್ನು ಬಂಧಿಸಿದ್ದು, ನವೆಂಬರ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisment

ಅಪ್ಪಣ್ಣ TTDಯ ಖರೀದಿ ವಿಭಾಗದ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ದೇವಸ್ಥಾನಕ್ಕೆ ತುಪ್ಪ ಪೂರೈಸುವ ಎಲ್ಲಾ ಪೂರೈಕೆದಾರರ ವಿವರವನ್ನು 2022 ರಲ್ಲಿ ಪಡೆದುಕೊಂಡಿದ್ದಾನೆ. ನಂತರ ಅವನು ಭೋಲೆ ಬಾಬಾ ಡೈರಿಯ ಶ್ರೀನಿವಾಸ್ ಅವರಿಗೆ ಕರೆ ಮಾಡಿ TTDಗೆ ಪೂರೈಕೆ ಮಾಡುವ ಪ್ರತಿ ಕೆಜಿ ತುಪ್ಪಕ್ಕೆ 25 ರೂ. ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. 
ಭೋಲೆ ಬಾಬಾ ಡೈರಿಯ ಆಡಳಿತ ಮಂಡಳಿ ನಿರಾಕರಿಸಿದಾಗ, ಅಪ್ಪಣ್ಣ ದೇವಾಲಯದ ನಿಯಮಗಳಿಗೆ ವಿರುದ್ಧವಾಗಿ ಡೈರಿಯನ್ನು ಎರಡನೇ ಬಾರಿಗೆ ತಪಾಸಣೆ ನಡೆಸುವಂತೆ ಟಿಟಿಡಿಯ ಮ್ಯಾನೇಜರ್ ಮೇಲೆ ಒತ್ತಡ ಹೇರಿದ್ದಾನೆ.  ಭೋಲೆ ಬಾಬಾ ಡೈರಿ 329 ರುಪಾಯಿಗೆ ಒಂದು ಕೇಜಿ ತುಪ್ಪ ಪೂರೈಸುತ್ತಿತ್ತು.
ನಂತರ ಪ್ರೀಮಿಯರ್ ಅಗ್ರಿ ಫುಡ್ಸ್ ಕಂಪನಿಯೊಂದಿಗೆ ಪ್ರತಿ ಕೆಜಿಗೆ 467 ರುಪಾಯಿಯಂತೆ  ಒಪ್ಪಂದ ಮಾಡಿಸಿದ ಅಪ್ಪಣ್ಣ, ಸುಮಾರು 50 ಲಕ್ಷ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾನೆ. 
ತಿರುಪತಿ ಲಡ್ಡುವನ್ನು ಪ್ರಾಣಿಗಳ ಕೊಬ್ಬನ್ನು ಬಳಸಿ ತಯಾರಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ, ತಿರುಪತಿ ಲಡ್ಡುವಿನ ವಿವಾದ ಭುಗಿಲೆದ್ದಿತು.

LADDU CASE CHINNA APPANNA ARRESTED

ಬಂಧನಕ್ಕೊಳಗಾದ ಚಿನ್ನಅಪ್ಪಣ್ಣ ಹಾಗೂ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯ ವರದಿ ನೀಡಿದ್ದು, ಪ್ರಾಣಿಗಳ ಕೊಬ್ಬು ಇರೋದನ್ನು ಖಾತರಿ ಪಡಿಸಿದೆ. ನಂತರ ಅಧಿಕಾರಿಗಳು ಇವುಗಳನ್ನು ತಮಿಳುನಾಡಿನ ಡೈರಿಯೊಂದರಿಂದ ತಂದದ್ದು ಎಂದು ಪತ್ತೆ ಹಚ್ಚಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

TTD LADDU ADULTERED ROW
Advertisment
Advertisment
Advertisment