/newsfirstlive-kannada/media/media_files/2026/01/24/palash-muchhal-1-2026-01-24-12-11-50.jpg)
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹವನ್ನು ವಂಚಿಸಿದ ಕಾರಣ ರದ್ದುಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ಅವರಿಗೆ ಮಧ್ಯಂತರ ಪರಿಹಾರ ನೀಡಿದೆ. ನಡೆಯುತ್ತಿರುವ ವಿವಾದದ ಸಂದರ್ಭದಲ್ಲಿ ಮಾಡಲಾದ ಮಾನನಷ್ಟ ಹೇಳಿಕೆಗಳನ್ನು ಗಮನಿಸಿದ ನಂತರ, ಪಲಾಶ್ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಅಥವಾ ಪ್ರಕಟಿಸದಂತೆ ಬಾಂಬೆ ಹೈಕೋರ್ಟ್, ವಿದ್ನ್ಯಾನ್ ಮಾನೆ ಅವರನ್ನು ನಿರ್ಬಂಧಿಸಿದೆ.
ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ, ಅಂತಹ ಕಾಮೆಂಟ್ಗಳು ವ್ಯಕ್ತಿಯ ಖ್ಯಾತಿ ಮತ್ತು ಘನತೆಗೆ ಗಂಭೀರವಾಗಿ ಪರಿಣಾಮ ಬೀರಬಹುದು ಎಂದು ಗಮನಿಸಿದೆ. ಹೆಚ್ಚಿನ ಹಾನಿಯನ್ನು ತಡೆಯುವ ಅಗತ್ಯವನ್ನು ಒತ್ತಿಹೇಳುತ್ತಾ, ಮುಂದಿನ ವಿಚಾರಣೆಯವರೆಗೆ ಪಲಾಶ್ ಬಗ್ಗೆ ಹೇಳಿಕೆಗಳನ್ನು ನೀಡದಂತೆ ವಿದ್ನ್ಯಾನ್ ಮಾನೆ ಅವರಿಗೆ ತಕ್ಷಣದ ನಿರ್ಬಂಧವನ್ನು ಪೀಠ ನಿರ್ದೇಶಿಸಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಪಲಾಶ್ ಪರ ವಕೀಲ ಶ್ರೇಯಾನ್ಶ್ ಮಿಥಾರೆ, ಈ ತೀರ್ಪನ್ನು ತಮ್ಮ ಕಕ್ಷಿದಾರರಿಗೆ ಮಹತ್ವದ ಕ್ಷಣ ಮತ್ತು ದೊಡ್ಡ ಪರಿಹಾರ ಎಂದು ಬಣ್ಣಿಸಿದರು. ನ್ಯಾಯಾಲಯದ ತೀರ್ಪುನಿಂದ ಪಲಾಶ್ ಮುಚ್ಚಲ್ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡದಂತೆ ತಡೆಯುತ್ತದೆ. ನ್ಯಾಯವನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ವಕೀಲ ಶ್ರೇಯಾನ್ಷ್ ಮಿಥಾರೆ ಹೇಳಿದ್ದಾರೆ.
ಸ್ಮೃತಿ ಮಂಧಾನ ಅವರೊಂದಿಗಿನ ಪಲಾಶ್ ಮುಚ್ಚಲ್ ಅವರ ವಿವಾಹ ರದ್ದಾದ ಕೆಲವು ತಿಂಗಳ ನಂತರ, ವಿವಾಹ ಸಮಾರಂಭಗಳಲ್ಲಿ ಹಾಜರಿದ್ದಾಗಿ ಹೇಳಿಕೊಂಡ ವಿಜ್ಞಾನ್ ಮಾನೆ ಕೆಲವು ಗಂಭೀರ ಆರೋಪಗಳನ್ನು ಮಾಡಿದರು. ಮಾನೆ ಪ್ರಕಾರ, ಪಲಾಶ್ ಮುಚ್ಚಲ್, ಸ್ಮೃತಿಗೆ ಮೋಸ ಮಾಡಿದರು ಮತ್ತು ಹಾಸಿಗೆಯಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.
ನಾನು ಮದುವೆ ಸಂಭ್ರಮಾಚರಣೆಯಲ್ಲಿದ್ದಾಗ (ನವೆಂಬರ್, 23, 2025) ಅವನು ಹಾಸಿಗೆಯಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದನು. ಭಯಂಕರ ದೃಶ್ಯ ನೋಡಿದ ಬಳಿಕ, ಅವನನ್ನು ಭಾರತೀಯ ಮಹಿಳಾ ಕ್ರಿಕೆಟಿಗರು ಥಳಿಸಿದರು. ಇಡೀ ಕುಟುಂಬವು ಚಿಂಡಿ ಚೋರ್ ಆಗಿದೆ. ಅವನು ಮದುವೆಯಾಗಿ ಸಾಂಗ್ಲಿಯಲ್ಲಿ ನೆಲೆಸುತ್ತಾನೆ ಎಂದು ನಾನು ಭಾವಿಸಿದ್ದೆ, ಆದರೆ ಅದು ನನಗೆ ಸಂಪೂರ್ಣವಾಗಿ ವಿರುದ್ಧವಾಗಿದೆ" ಎಂದು ವಿದ್ಯಾನಾನ್ ಮಾನೆ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/08/Bomby-Highcourt.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us