ಸೋನಿಯಾ, ರಾಹುಲ್ ವಿರುದ್ಧದ ಆಕ್ರಮ ಹಣ ವರ್ಗಾವಣೆ ಕೇಸ್ ಪರಿಗಣಿಸಲು ಕೋರ್ಟ್ ನಕಾರ : E.D. ಯಿಂದ ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ

ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಇತರೆ ಕಾಂಗ್ರೆಸ್ ನಾಯಕರ ವಿರುದ್ಧದ ಆಕ್ರಮ ಹಣ ವರ್ಗಾವಣೆ ಕೇಸ್ ಪರಿಗಣಿಸಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನ ಸಿಬಿಐ ವಿಶೇಷ ಕೋರ್ಟ್ ನಿರಾಕರಿಸಿದೆ. ಖಾಸಗಿ ದೂರು ಆಧಾರದ ಮೇಲೆ ಕೇಸ್ ಪರಿಗಣನೆ ಸಾಧ್ಯವಿಲ್ಲ ಎಂದಿದೆ.

author-image
Chandramohan
ED ENFORCEMENT DIRECTORATE

ಸೋನಿಯಾ, ರಾಹುಲ್ ವಿರುದ್ಧದ ಇ.ಡಿ. ದೂರು ಪರಿಗಣಿಸಲು ಕೋರ್ಟ್ ನಕಾರ

Advertisment
  • ಸೋನಿಯಾ, ರಾಹುಲ್ ವಿರುದ್ಧದ ಇ.ಡಿ. ದೂರು ಪರಿಗಣಿಸಲು ಕೋರ್ಟ್ ನಕಾರ
  • ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಆಕ್ರಮ ಹಣ ವರ್ಗಾವಣೆ ಆರೋಪ ಮಾಡಿದ್ದ ಇ.ಡಿ.
  • ಖಾಸಗಿ ದೂರು ಆಧರಿಸಿ ಕೇಸ್ ಪರಿಗಣನೆ ಸಾಧ್ಯವಿಲ್ಲ ಎಂದ ಸಿಬಿಐ ವಿಶೇಷ ಕೋರ್ಟ್
  • ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಇ.ಡಿ. ನಿರ್ಧಾರ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಐವರ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ಪ್ರಕರಣವನ್ನು ಪರಿಗಣಿಸಲು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ.

ರೋಸ್ ಅವೆನ್ಯೂ ನ್ಯಾಯಾಲಯವು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಥವಾ ಪಿಎಂಎಲ್‌ಎ ಅಡಿಯಲ್ಲಿ ಸಲ್ಲಿಸಲಾದ ಏಜೆನ್ಸಿಯ ಪ್ರಾಸಿಕ್ಯೂಷನ್ ದೂರು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರನ್ನು ಆಧರಿಸಿದೆ .  ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಅಲ್ಲದ ಕಾರಣ ಅದು ವಿಚಾರಣೆಗೆ ಯೋಗ್ಯವಲ್ಲ  ಎಂದು ಹೇಳಿದೆ. ಇದರಿಂದಾಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ರಿಲೀಫ್ ಸಿಕ್ಕಿದೆ.  

ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಈ ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಅಂದರೆ ಈಗ ಇ.ಡಿ.ಯ  ದೂರು ಸಲ್ಲಿಕೆಯ ಮೇಲೆ ತೀರ್ಪು ನೀಡುವುದು 'ಅಕಾಲಿಕ ಮತ್ತು ಅವಿವೇಕದ' ಕೃತ್ಯವಾಗಿರುತ್ತದೆ ಎಂದು ನ್ಯಾಯಾಲಯವು ಗಮನಸೆಳೆದಿದೆ.

ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿರುವ ಇಡಿ, ತನ್ನ ತನಿಖೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

sonia gandhi and rahul gandhi




ಎಕನಾಮಿಕ್ ಅಫೇನ್ಸ್ ವಿಂಗ್  ಕಳೆದ ತಿಂಗಳು ತನ್ನ ಅರ್ಜಿಯನ್ನು ಸಲ್ಲಿಸಿತು.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಸೇರಿದಂತೆ ಇತರ ಐವರು, ಈಗ ನಿಷ್ಕ್ರಿಯವಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪೋಷಕ ಕಂಪನಿಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು 'ಮೋಸದಿಂದ ಸ್ವಾಧೀನಪಡಿಸಿಕೊಳ್ಳಲು' ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ರಿಮಿನಲ್ ಪಿತೂರಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಭಾರತೀಯ ಜನತಾ ಪಕ್ಷವು 'ತನ್ನದೇ ಆದ ತಿರುಚಿದ ಮನಸ್ಸಿನಿಂದ ಪ್ರಕರಣವನ್ನು ಸೃಷ್ಟಿಸುತ್ತಿದೆ' ಎಂದು ಅಪಹಾಸ್ಯ ಮಾಡಿದರು . ಆರೋಪಗಳು 'ಬಿಜೆಪಿಯ ಮರುಕಳಿಸಿದ ಗೀಳು' ಎಂದು ಹೇಳಿದರು. ಬಿಜೆಪಿ ತನ್ನದೇ ಆದ ಲೇವಡಿಗಳೊಂದಿಗೆ ಪ್ರತಿಕ್ರಿಯಿಸಿತು.  ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್  ಅವರು ಕಾಂಗ್ರೆಸ್ 'ಭೀತಿ, ಹತಾಶೆ ಮತ್ತು ಆಕ್ರೋಶದ ಸ್ಥಿತಿಯಲ್ಲಿದೆ' ಎಂದು ಹೇಳಿದರು.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Court refuse to Accept ED Complaiant aginst SONIA GANDHI AND RAHUL GANDHI
Advertisment