Advertisment

Election Result: ಮಹಾಘಟಬಂಧನ್ ಸೋಲಿಗೆ ಕಾರಣಗಳು ಏನೇನು..?

ಚುನಾವಣಾ ಆಯೋಗವು ಬಿಹಾರದ 18ನೇ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಮೊದಲ ಮತ್ತು ಎರಡನೇ ಹಂತದ ಮತದಾನವನ್ನು ನಡೆಸಿತು. 243 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ನಡೆಯುತ್ತಿದೆ. 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಸರ್ಕಾರ ರಚನೆಗೆ 122 ಮ್ಯಾಜಿಕ್ ನಂಬರ್ ಆಗಿದೆ.

author-image
Ganesh Kerekuli
Rahul Gandhi and Tejaswi Yadav
Advertisment

ಬಿಹಾರ ವಿಧಾನಸಭೆ ಚುನಾವಣೆಯ ಸ್ಪಷ್ಟ ಫಲಿತಾಂಶ ಬಹುತೇಕ ಪ್ರಕಟವಾದಂತಿದೆ. ಎನ್​ಡಿಎ ಒಕ್ಕೂಟ ಬರೋಬ್ಬರಿ 199 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ನೇತೃತ್ವದ  ಮಹಾಘಟಬಂಧನ್​ಗೆ ಭಾರೀ ಮುಖಭಂಗ ಆಗಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿಯಲ್ಲಿ ಎಂಜಿಬಿ ಕೇವಲ 38 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 122. ಈಗಾಗಲೇ ಎನ್​ಡಿಎಗೆ ಅಭೂತಪೂರ್ವ ಗೆಲುವು ಸಿಕ್ಕಿರೋದ್ರಿಂದ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. 

Advertisment

ಮಹಾಘಟಬಂಧನ್ ಸೋಲಿಗೆ ಕಾರಣಗಳೇನು..? 

  1. ಬಿಹಾರದಲ್ಲಿ ದುರ್ಬಲವಾಗಿದ್ದ ಕಾಂಗ್ರೆಸ್​ಗೆ 61 ಕ್ಷೇತ್ರ ನೀಡಿದ್ದು ಮಹಾಘಟಬಂಧನ್ ಸೋಲಿಗೆ ಕಾರಣ
  2. ಪ್ರತಿ ಮನೆಗೊಂದು ಸರ್ಕಾರಿ ನೌಕರಿ ನೀಡುವ ಭರವಸೆ ಜನರನ್ನು ಸೆಳೆಯಲು ವಿಫಲವಾಯಿತು
  3. 87 ಕ್ಷೇತ್ರಗಳಲ್ಲಿ ಶೇ.25 ರಷ್ಟು ಮುಸ್ಲಿಂ ಮತದಾರರಿದ್ದರೂ, ಹೆಚ್ಚಿನ ಟಿಕೆಟ್ ಮುಸ್ಲಿಂರಿಗೆ ಆರ್‌ಜೆಡಿ ನೀಡಿರಲಿಲ್ಲ. ಮುಸ್ಲಿಂ ಸಮುದಾಯ ಪೂರ್ತಿಯಾಗಿ ಆರ್‌ಜೆಡಿ , ಕಾಂಗ್ರೆಸ್ ಮೈತ್ರಿಯನ್ನು  ಬೆಂಬಲಿಸಲಿಲ್ಲ.
  4. ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲೇ ಅಪ್ಪ- ಮಗನ ಕಿತ್ತಾಟವೂ ಪಕ್ಷದ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ. ತೇಜ್ ಪ್ರತಾಪ್ ಯಾದವ್ ಪಕ್ಷ, ಕುಟುಂಬದಿಂದ ದೂರ ಸರಿದು ಜನಶಕ್ತಿ ಜನತಾದಳ ಮೂಲಕ ಸ್ಪರ್ಧಿಸಿ ಆರ್‌ಜೆಡಿ ಮತಗಳನ್ನೇ ನುಂಗಿ ಹಾಕಿದ್ದಾರೆ.
  5. ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿಯು ವಿಪಕ್ಷಗಳ ಮತ ಬ್ಯಾಂಕ ಅನ್ನೇ ಇಬ್ಬಾಗಿಸಿದೆಯೇ ಹೊರತು ಆಡಳಿತ ಪಕ್ಷದ ಮತಬುಟ್ಟಿಗೆ ಕೈ ಹಾಕಿಲ್ಲ.
  6. ಅಸಾದುದ್ದೀನ್ ಓವೈಸಿ ಕಳೆದ ಚುನಾವಣೆಯಲ್ಲೂ ಆರ್‌ಜೆಡಿ, ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದರು. ಈ ಭಾರಿಯೂ ಆ ಕೆಲಸವನ್ನೇ ಓವೈಸಿ ಮುಂದುವರಿಸಿದ್ದಾರೆ.
  7. ಬಿಹಾರದಲ್ಲಿ ತೇಜಸ್ವಿ ಯಾದವ್ ಹೊರತುಪಡಿಸಿ, ಬೇರೆ ಪ್ರಬಲ ನಾಯಕರು ಆರ್‌ಜೆಡಿಯಲ್ಲಿ ಇಲ್ಲ. ಕಾಂಗ್ರೆಸ್ ಗೂ ತಳ
  8. ಸಮುದಾಯಗಳ ಬೆಂಬಲ ಗಳಿಸುವ ನಾಯಕರಿಲ್ಲ. ದಲಿತ ಸಮುದಾಯದ ಪ್ರಮುಖ ನಾಯಕರಿಲ್ಲ. ಇದರಿಂದಾಗಿ ಓಬಿಸಿ, ಇಬಿಸಿ ಬೆಂಬಲ ಗಳಿಸಲು ವಿಫಲ
  9. ನಿತೀಶ್ ಕುಮಾರ್ ಮಹಿಳೆಯರಿಗೆ 10 ಸಾವಿರ ನೀಡುವ ಭರವಸೆ ಕೊಟ್ಟು ಜಾರಿಗೊಳಿಸಿದ್ದರು. ಇದರಿಂದಾಗಿ ಮಹಾಘಟಬಂಧನ್​ಗೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವ ಭರವಸೆಯತ್ತ ಮಹಿಳೆಯರು ಒಲವು ತೋರಲಿಲ್ಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Bihar News Bihar election Bihar Election Result
Advertisment
Advertisment
Advertisment