Advertisment

ಜನರಿಗೆ ಗುಡ್ ನ್ಯೂಸ್ : ದೇಶದಲ್ಲಿ ಶೇ.5, ಶೇ.18ರ ಜಿಎಸ್‌ಟಿ ದರ ಜಾರಿಗೆ ಸಚಿವರ ತಂಡದ ಒಪ್ಪಿಗೆ

ದೆಹಲಿಯಲ್ಲಿ ಇಂದು ನಡೆದ ಸಚಿವರ ತಂಡದ ಸಭೆ(GOM) ಯಲ್ಲಿ ಜಿಎಸ್‌ಟಿ ಸ್ಲ್ಯಾಬ್ ಗನ್ನು ನಾಲ್ಕರಿಂದ ಎರಡಕ್ಕೆ ಇಳಿಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಶೇ.5 ಮತ್ತು ಶೇ.18ರ ಜಿಎಸ್‌ಟಿ ದರಗಳನ್ನು ಮಾತ್ರ ಉಳಿಸಿಕೊಳ್ಳುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಸಚಿವರ ತಂಡದ ಸಭೆ ಒಪ್ಪಿಗೆ ನೀಡಿದೆ.

author-image
Chandramohan
ಜನ ಸಾಮಾನ್ಯರಿಗೆ ರಿಲೀಫ್.. GST ದರ ಇಳಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ ಸಾಧ್ಯತೆ!

ಎರಡೇ ಜಿಎಸ್‌ಟಿ ದರ ಜಾರಿಗೆ ಸಚಿವರ ತಂಡದ ಸಭೆ ಒಪ್ಪಿಗೆ

Advertisment
  • ದೇಶದಲ್ಲಿ ಜಿಎಸ್‌ಟಿ ದರ ಪರಿಷ್ಕರಣೆಗೆ ಸಚಿವರ ತಂಡದ ಸಭೆ ಒಪ್ಪಿಗೆ
  • ದೇಶದಲ್ಲಿ ಶೇ.5, ಶೇ.18ರ ಜಿಎಸ್‌ಟಿ ದರ ಮಾತ್ರ ಉಳಿಸಿಕೊಳ್ಳಲು ಒಪ್ಪಿಗೆ
  • ಸೆಪ್ಟೆಂಬರ್ ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅಂತಿಮ ಒಪ್ಪಿಗೆ ಬಾಕಿ


ದೇಶದಲ್ಲಿ ಕಳೆದ 8 ವರ್ಷಗಳಿಂದ ಜಾರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆ ಅಂದರೇ, ಜಿಎಸ್‌ಟಿ ಯನ್ನು ಪರಿಷ್ಕರಣೆಗೊಳಿಸುವ ಸಚಿವರ ತಂಡದ ಸಭೆಯಲ್ಲಿ ಪರಿಷ್ಕರಣೆಗೆ ಇಂದು(ಆಗಸ್ಟ್ 21) ಇಂದು ಒಪ್ಪಿಗೆ ನೀಡಲಾಗಿದೆ. ದೇಶದಲ್ಲಿ ಸದ್ಯ ಇರುವ ನಾಲ್ಕು ಸ್ಲ್ಯಾಬ್ ಗಳ ಜಿಎಸ್‌ಟಿ ದರಗಳನ್ನು ಎರಡು ಸ್ಲ್ಯಾಬ್‌ಗೆ  ಇಳಿಸುವುದಕ್ಕೆ ಸಚಿವರ ತಂಡದ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ದೇಶದಲ್ಲಿ ಶೇ.5 ಮತ್ತು ಶೇ.18ರ ಎರಡು ಜಿಎಸ್‌ಟಿ ದರಗಳನ್ನು ಮಾತ್ರ ಉಳಿಸಿಕೊಳ್ಳುವುದಕ್ಕೆ ಸಚಿವರ ತಂಡದ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರಾಜ್ಯ ಸರ್ಕಾರಗಳು ಅನುಮೋದಿಸಿವೆ. 
ಇನ್ನೂ ದೇಶದಲ್ಲಿ ಶೇ.5 ಮತ್ತು ಶೇ.18ರ ಜಿಎಸ್‌ಟಿ ದರಗಳು ಜಾರಿಯಾಗಲು ಇನ್ನೊಂದೇ ಮೆಟ್ಟಿಲು. ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಇಂದು ಸಚಿವರ ತಂಡ ಅನುಮೋದಿಸಿರುವುದಕ್ಕೆ ಒಪ್ಪಿಗೆ ಮುದ್ರೆ ಒತ್ತುವುದು ಮಾತ್ರ ಬಾಕಿ ಇದೆ.  ಅಲ್ಲೂ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಲಿವೆ. ಆದಾದ ಬಳಿಕ ದೇಶದಲ್ಲಿ ಶೇ.5 ಮತ್ತು ಶೇ.18ರ ಎರಡು ಸ್ಲ್ಯಾಬ್ ಜಿಎಸ್‌ಟಿ ದರಗಳು ಮಾತ್ರ ಜಾರಿಯಲ್ಲಿರಲಿವೆ. ಇದು ದೇಶದ ಮಧ್ಯಮ ವರ್ಗ, ಕೆಳವರ್ಗಕ್ಕೆ ಭಾರಿ ರಿಲೀಫ್. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗ, ಕೆಳ ವರ್ಗಕ್ಕೆ ಅಗತ್ಯ ಸರಕು, ಉತ್ಪನ್ನಗಳ ಬೆಲೆ ಇಳಿಕೆಯ ರಿಲೀಫ್ ಸಿಗಲಿದೆ.  ಜನ ಸಾಮಾನ್ಯರು ಬಳಸುವ ಉತ್ಪನ್ನಗಳು ಶೇ.12 ರ ಸ್ಲ್ಯಾಬ್ ನಲ್ಲಿದ್ದವು. ಅವುಗಳೆಲ್ಲಾ ಮುಂದಿನ ತಿಂಗಳಿನಿಂದಲೇ ಶೇ.5 ರ ಸ್ಲ್ಯಾಬ್ ಗೆ ಬರಲಿವೆ. ಹೀಗಾಗಿ ಇವುಗಳ ಮೇಲೆ ವಿಧಿಸಿದ್ದ ಶೇ.12ರ ಜಿಎಸ್‌ಟಿ ಬದಲು ಶೇ.5 ರಷ್ಟು ಜಿಎಸ್‌ಟಿ ವಿಧಿಸಬೇಕಾಗುತ್ತೆ. ಹೀಗಾಗಿ ಅವುಗಳ ಬೆಲೆ ಕೂಡ ಕಡಿಮೆಯಾಗುತ್ತೆ.
ಶೇ. 28 ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದ ಉತ್ಪನ್ನಗಳು ಶೇ.18 ರ ಸ್ಲ್ಯಾಬ್ ಗೆ ಬರಲಿವೆ. ಇದರಿಂದಲೂ ಆ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತೆ. 
ಇದರಿಂದ ಕೇಂದ್ರ ಸರ್ಕಾರಕ್ಕೆ ಸಂಗ್ರಹವಾಗುವ ಜಿಎಸ್‌ಟಿ ಆದಾಯ ಕಡಿಮೆಯಾಗುತ್ತೆ. ಆದರೆ, ಹೆಚ್ಚಿನ ಖರೀದಿ ನಡೆಯುವುದರಿಂದ  ಹೆಚ್ಚಿನ ನಷ್ಟವಾಗಲ್ಲ, ಆರ್ಥಿಕತೆ ಬೆಳವಣಿಗೆಗೆ ಅನುಕೂಲವಾಗುತ್ತೆ ಎಂಬ ಲೆಕ್ಕಾಚಾರ ಇದೆ. 
ದೇಶದಲ್ಲಿ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ.99 ರಷ್ಟು ಉತ್ಪನ್ನಗಳು ಮುಂದಿನ ತಿಂಗಳಿನಿಂದ ಶೇ.5ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದರಿಂದಾಗಿ ಜನಸಾಮಾನ್ಯರು ಬಳಸುವ ಎಲ್ಲ ಉತ್ಪನ್ನಗಳ ಬೆಲೆಗಳೂ ಕಡಿಮೆಯಾಗಲಿವೆ. 
ಇನ್ನೂ ಶೇ.18ರ ತೆರಿಗೆ ವ್ಯಾಪ್ತಿಯಲ್ಲಿದ್ದ ಶೇ.90 ರಷ್ಟು ಉತ್ಪನ್ನಗಳು ಮುಂದಿನ ತಿಂಗಳಿನಿಂದ ಶೇ.12 ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದರಿಂದ ಆ ಉತ್ಪನ್ನಗಳ ಬೆಲೆಗಳು ಕೂಡ ಕಡಿಮೆಯಾಗಲಿವೆ. 

Advertisment

GST REFORMS BY MODI 01


ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಆರು ಸದಸ್ಯರ ಸಚಿವರ ಗುಂಪು, ಅಸ್ತಿತ್ವದಲ್ಲಿರುವ ನಾಲ್ಕು ಹಂತದ ರಚನೆಯಾದ 5%, 12%, 18% ಮತ್ತು 28% ಅನ್ನು ಸರಳೀಕೃತ ಚೌಕಟ್ಟಿನೊಂದಿಗೆ ಬದಲಾಯಿಸಲು ಒಪ್ಪಿಕೊಂಡಿದೆ.  ಅರ್ಹ ಸರಕುಗಳು ಮತ್ತು ಸೇವೆಗಳಿಗೆ 5% ಮತ್ತು ಪ್ರಮಾಣಿತ ವಸ್ತುಗಳಿಗೆ 18%  ಜಿಎಸ್‌ಟಿ ಅನ್ನು ವಿಧಿಸಲಾಗುತ್ತೆ. 
ಇನ್ನೂ ಐಷಾರಾಮಿ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಸರಕುಗಳ ಸೀಮಿತ ಪಟ್ಟಿಗೆ 40% ಹೆಚ್ಚಿನ ಲೆವಿ ಅನ್ವಯಿಸುವುದನ್ನು ಮುಂದುವರಿಸುತ್ತದೆ.
ಆರು ಸದಸ್ಯರ ರಾಜ್ಯ ಸಚಿವರ ಸಮಿತಿಯು  ಶೇ.12 ಮತ್ತು  ಶೇ. 28  ಸ್ಲ್ಯಾಬ್‌ಗಳನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸಹ ಒಪ್ಪಿಕೊಂಡಿದೆ ಎಂದು ಸಾಮ್ರಾಟ್  ಚೌಧರಿ ಹೇಳಿದರು.
"ಕೇಂದ್ರದ ಎರಡೂ ಪ್ರಸ್ತಾವನೆಗಳನ್ನು ದರ ತರ್ಕಬದ್ಧಗೊಳಿಸುವಿಕೆಯ ಕುರಿತು GoM ಅಂಗೀಕರಿಸಿದೆ" ಎಂದು ಸಾಮ್ರಾಟ್  ಚೌಧರಿ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಹೆಚ್ಚುವರಿಯಾಗಿ, ಐಷಾರಾಮಿ ಕಾರುಗಳನ್ನು 40% ಸ್ಲ್ಯಾಬ್ ಅಡಿಯಲ್ಲಿ ತರಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಜಿಎಸ್‌ಟಿ ಪರಿಷ್ಕರಿಸುವ  ಕುರಿತ ಸಚಿವರ ಗುಂಪಿನಲ್ಲಿ (GoM) ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇದ್ದರು. 
ಈ ಸುಧಾರಣೆಗಳು "ಸರಳೀಕೃತ, ಪಾರದರ್ಶಕ ಮತ್ತು ಬೆಳವಣಿಗೆ-ಆಧಾರಿತ ತೆರಿಗೆ ಆಡಳಿತವನ್ನು ಖಚಿತಪಡಿಸಿಕೊಳ್ಳುವಾಗ ಸಾಮಾನ್ಯ ಜನರು, ರೈತರು, ಮಧ್ಯಮ ವರ್ಗ ಮತ್ತು MSME ಗಳಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಸಮಿತಿಯನ್ನು ಉದ್ದೇಶಿಸಿ ಹೇಳಿದರು.
ಈ ಯೋಜನೆಯಡಿಯಲ್ಲಿ, ಪ್ರಸ್ತುತ 12% ನಲ್ಲಿ ತೆರಿಗೆ ವಿಧಿಸಲಾಗುವ ಸುಮಾರು 99% ವಸ್ತುಗಳು 5% ವರ್ಗಕ್ಕೆ ಬದಲಾಗುತ್ತವೆ.  ಆದರೆ 28% ವರ್ಗದಲ್ಲಿರುವ ಸುಮಾರು 90% ಸರಕು ಮತ್ತು ಸೇವೆಗಳು 18% ಗೆ ಬದಲಾಗುತ್ತವೆ. ಈ ಪುನರ್ ರಚನೆಯ ಜಿಎಸ್‌ಟಿ ರಚನೆಯನ್ನು ಸರಳಗೊಳಿಸುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. 
ಇನ್ನೂ ಜೀವ ವಿಮೆ, ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ತೆಗೆದು ಹಾಕುವ ಬಗ್ಗೆಯೂ ಚರ್ಚೆಯಾಗಿದೆ.  ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 9,700 ಕೋಟಿ ರೂಪಾಯಿ ತೆರಿಗೆ ಸಂಗ್ರಹ ನಷ್ಟವಾಗಲಿದೆ. ವಿಮಾ ಕಂಪನಿಗಳು ಜಿಎಸ್‌ಟಿ ವಿನಾಯ್ತಿ ನೀಡಿದರೇ, ಆ ಲಾಭವನ್ನು ವಿಮೆ  ಪಡೆದ ಜನರಿಗೆ ವರ್ಗಾಯಿಸಬೇಕು ಎಂಬ ಚರ್ಚೆಯಾಗಿದೆ. ಈ ಬಗ್ಗೆ ಗ್ಯಾರಂಟಿ ಪಡೆದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ. 

GST REFORMS BY MODI 02

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

GST REFORMS
Advertisment
Advertisment
Advertisment