ಹೊಸ ಸಂಸತ್ತು ಭವನದಲ್ಲಿ ಭಾರೀ ಭದ್ರತಾ ವೈಫಲ್ಯ.. ಮರ ಏರಿ ಗರುಡ ಗೇಟ್​ಗೆ ನುಗ್ಗಿದ ವ್ಯಕ್ತಿ

ಬೆಳಗಿನ ಜಾವ ಹೊಸ ಸಂಸತ್ತು​ ಭವನದಲ್ಲಿ ಭಾರೀ ಭದ್ರತಾ ವೈಫಲ್ಯ ಕಂಡು ಬಂದಿದ್ದು ವ್ಯಕ್ತಿಯೊಬ್ಬರು ಮರದ ಸಹಾಯದಿಂದ ರೈಲು ಭವವನದ ಗೋಡೆ ಹಾರಿ ಹೊಸ ಸಂಸತ್ತು ಭವನದ ಗರುಡ ಗೇಟ್​ ತಲುಪಿದ್ದನು.

author-image
Bhimappa
Parliament
Advertisment

ನವದೆಹಲಿ: ಬೆಳಗಿನ ಜಾವ ಹೊಸ ಸಂಸತ್ತು​ ಭವನದಲ್ಲಿ ಭಾರೀ ಭದ್ರತಾ ವೈಫಲ್ಯ ಕಂಡು ಬಂದಿದ್ದು ವ್ಯಕ್ತಿಯೊಬ್ಬರು ಮರದ ಸಹಾಯದಿಂದ ರೈಲು ಭವವನದ ಗೋಡೆ ಹಾರಿ ಹೊಸ ಸಂಸತ್ತು ಭವನದ ಗರುಡ ಗೇಟ್​ ತಲುಪಿದ್ದನು. ಈ ವೇಳೆ ಭದ್ರತಾ ಅಧಿಕಾರಿಗಳು ಅಕ್ರಮವಾಗಿ ನುಗ್ಗಿದ್ದ ವ್ಯಕ್ತಿನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.   

ಇಂದು ಬೆಳಗ್ಗೆ 6:30ರ ಸಮಯಕ್ಕೆ ವ್ಯಕ್ತಿಯು ಮರದ ಸಹಾಯದಿಂದ ಸಂಸತ್​ ಭವನದ ಗೋಡೆ ಏರಿದ್ದಾನೆ. ರೈಲು ಭವನದ ಕಟ್ಟಡದಿಂದ ಎಂಟ್ರಿ ಕೊಟ್ಟಿರುವ ವ್ಯಕ್ತಿ ಹೊಸ ಸಂಸತ್ ಭವನದ ಗರುಡ ಗೇಟ್​ ಬಳಿಗೆ ಬಂದಿದ್ದಾನೆ. ಇನ್ನು ಒಳಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಬಂಧಿಸಿರುವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಅಡಿಷನಲ್ SP ಕಾರಿಗೆ ಗುದ್ದಿದ ಮಹೇಶ್ ತಿಮರೋಡಿ ಸಹಚರರು.. ಮೂವರು ಅರೆಸ್ಟ್

Parliament_New

ನಿನ್ನೆಯೆ ಸಂಸತ್ ಅಧಿವೇಶನ ಮುಕ್ತಾಯವಾಗಿತ್ತು. ಇಂದು ಬೆಳಗ್ಗೆಯೇ ವ್ಯಕ್ತಿಯೂ ಸಂಸತ್ ಒಳ ನುಗ್ಗಲು ಪ್ರಯತ್ನಿಸಿದ್ದಾನೆ. ಕಳೆದ ವರ್ಷವೂ ಇದೇ ರೀತಿ ಭದ್ರತಾ ವೈಫಲ್ಯ ಕಂಡು ಬಂದಿತ್ತು. 20 ವರ್ಷದ ಯುವಕ ಸಂಸತ್ತು ಭವನದ ಗೋಡೆ ಹಾರಿ ಅನೆಕ್ಸ್​ ಕಟ್ಟಡದ ಆವರಣಕ್ಕೆ ಅಕ್ರಮವಾಗಿ ನುಗ್ಗಿದ್ದನು. ಬಳಿಕ ಸಿಐಎಸ್​ಎಫ್​ ಅಧಿಕಾರಿಗಳು ಯುವಕನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Parliament
Advertisment