/newsfirstlive-kannada/media/post_attachments/wp-content/uploads/2024/11/DELHI_POLLUTION_1-2.jpg)
ಚಳಿಗಾಲದಲ್ಲಿ ದೆಹಲಿ-ಎನ್ಸಿಆರ್ನಲ್ಲಿ ಮಾಲಿನ್ಯದ ಮಟ್ಟವು ನಿರಂತರವಾಗಿ ಹೆಚ್ಚುತ್ತಿದ್ದು, ಹಾನಿಕಾರಕ ಗಾಳಿಯ ವಿರುದ್ಧ ಹೋರಾಡಲು ಹಲವಾರು ಆದೇಶಗಳು ಮತ್ತು ಶಿಷ್ಟಾಚಾರಗಳು ಪ್ರಯೋಜನಕಾರಿಯಾಗದೇ ಇರಲು ಪ್ರಮುಖ ಕಾರಣ ಶ್ರೀಮಂತರು ಮತ್ತು ಶ್ರೀಮಂತರು ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಹಿಂಜರಿಯುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮಾಲಿನ್ಯ ವಿರೋಧಿ ನಿಯಮಗಳನ್ನು ಜಾರಿಗೆ ತಂದಿರುವ ಸುಪ್ರೀಂ ಕೋರ್ಟ್ನ ಹಲವಾರು ಆದೇಶಗಳ ಹೊರತಾಗಿಯೂ, ವಾಯುಮಾಲಿನ್ಯವು ತೀವ್ರ ಮಟ್ಟದಲ್ಲಿಯೇ ಮುಂದುವರೆದಿದ್ದು, ದೆಹಲಿ-ಎನ್ಸಿಆರ್ ನಿವಾಸಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲೆ ಅಪರಾಜಿತಾ ಸಿಂಗ್ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ನಂತರ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠವು ಈ ಹೇಳಿಕೆ ನೀಡಿದೆ.
ಸುಪ್ರೀಂಕೋರ್ಟ್ ನ ಆದೇಶಗಳು ಹಾಗೂ ನಿಯಮಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಸುಪ್ರೀಂಕೋರ್ಟ್ ಇದುವರೆಗೂ ಸಾಕಷ್ಟು ಆದೇಶಗಳನ್ನು ನೀಡಿದೆ. ಆದರೇ, ಯಾವುದೇ ನಿಯಮ, ಆದೇಶಗಳು ಸರಿಯಾಗಿ ಜಾರಿಯಾಗಿಲ್ಲ. ಪರಿಸ್ಥಿತಿ ಬದಲಾವಣೆಯಾಗಿಲ್ಲ. ಹೀಗಾಗಿ ಜಾರಿಗೊಳಿಸಲು ಸಾಧ್ಯವಾಗುವ ಪ್ರಾಕ್ಟೀಕಲ್ ಆದ ಆದೇಶಗಳನ್ನು ನೀಡುತ್ತೇವೆ. ಇಲ್ಲದಿದ್ದರೇ, ಜನರು ಆದೇಶಗಳು, ನಿಯಮಗಳನ್ನು ಉಲಂಘನೆ ಮಾಡುತ್ತಲೇ ಇರುತ್ತಾರೆ.
ಜನರು ಈಗಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಮ್ಮ ಲೈಫ್ ಸ್ಟೈಲ್ ಅನ್ನು ಬದಲಾವಣೆ ಮಾಡಿಕೊಳ್ಳಬೇಕು. ಶ್ರೀಮಂತ ವರ್ಗವು ನಿಯಮಗಳನ್ನು ಪಾಲಿಸುತ್ತಿಲ್ಲ. ಶ್ರೀಮಂತರು ಈಗಲೂ ದೊಡ್ಡ ಡೀಸೆಲ್ ಕಾರ್ ಗಳು, ಜನರೇಟರ್ ಗಳು, ಮಾಲಿನ್ಯ ಮಾಡುವ ಗೆಜೆಟ್ ಗಳನ್ನು ಬಳಕೆ ಮಾಡುತ್ತಿದ್ದಾರೆ.
ಬುಧವಾರ ಸುಪ್ರೀಂಕೋರ್ಟ್ ನ ಸಿಜೆಐ ಪೀಠ ಮತ್ತೆ ದೆಹಲಿ ಮಾಲಿನ್ಯದ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.
ದೆಹಲಿ ಮಾಲಿನ್ಯದ ಬಗ್ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೆಲ್ಲರೂ ತಮ್ಮ ಅರ್ಜಿ, ಸಲಹೆಗಳನ್ನು ಲಿಖಿತವಾಗಿ ಅಮಿಕಸ್ ಕ್ಯೂರಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಅವರಿಗೆ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದೆ.
/filters:format(webp)/newsfirstlive-kannada/media/media_files/2025/08/04/supreme-court-2025-08-04-13-18-14.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us