CBSE ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನ್​ರಿಗೆ ಕೊಕ್.. ಮಹಾಕುಂಭ ಮೇಳ ಇನ್..!

author-image
Ganesh
Updated On
CBSE ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನ್​ರಿಗೆ ಕೊಕ್.. ಮಹಾಕುಂಭ ಮೇಳ ಇನ್..!
Advertisment
  • ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸೇರ್ಪಡೆ
  • ಪ್ರಸಕ್ತ ಸಾಲಿನಿಂದಲೇ ಪಠ್ಯ ಕೈಬಿಟ್ಟಿರೋದಾಗಿ ತಿಳಿಸಲಾಗಿದೆ
  • ಮೊಘಲರು, ದಿಲ್ಲಿ ಸುಲ್ತಾನರ ಕುರಿತಾದ ಪಾಠಕ್ಕೆ ಕೊಕ್

ಸಿಬಿಎಸ್​ಇ (Central Board of Secondary Education) ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನ್​​ರಿಗೆ ಕೊಕ್ ನೀಡಲಾಗಿದೆ. 7ನೇ ತರಗತಿಯ ಭಾರತ ಸಾಮ್ರಾಜ್ಯಗಳು ಹಾಗೂ ಪವಿತ್ರ ಭೂಗೋಳ ಶಾಸ್ತ್ರ ಅಧ್ಯಯನದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಎನ್​ಸಿಇಆರ್​ಟಿ (National Council of Educational Research and Training) ತನ್ನ ಆದೇಶದಲ್ಲಿ ತಿಳಿಸಿದೆ.

ಯಾವ ವಿಷಯ ಸೇರ್ಪಡೆ..?

ಸಿಬಿಎಸ್​ಇ ನೂತನ ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನರ ಕುರಿತ ಪಾಠಗಳಿಗೆ ಬದಲಾಗಿ ಮಹಾಕುಂಭ, ಮೇಕ್​ ಇನ್ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನ ವಿಷಯ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ: ಉಗ್ರರ ವಿರುದ್ಧ ಗರುಡ ಪಡೆ ರಹಸ್ಯ ಆಪರೇಷನ್! ವಾಯುಪಡೆಯ ಈ ದೈತ್ಯ ಶಕ್ತಿಯ ವಿಶೇಷತೆ ಏನು..?

publive-image

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಸೇರ್ಪಡೆ ಮಾಡಲಾಗಿದೆ. ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಪ್ರದಾಯ, ಸಿದ್ಧಾಂತ, ಜ್ಞಾನ ವ್ಯವಸ್ಥೆ ಹಾಗೂ ಸ್ಥಳೀಯ ವಿಚಾರಗಳ ಪಠ್ಯದಲ್ಲಿ ಸೇರ್ಪಡೆ ಮಾಡುವ ನಿರ್ಧಾರವನ್ನು ಎನ್​ಸಿಇಆರ್​ಟಿ ಕೈಗೊಂಡಿದೆ. ಪ್ರಸಕ್ತ ಸಾಲಿನಿಂದಲೇ ಮೊಘಲರ ಪಠ್ಯ ಸಂಪೂರ್ಣ ‌ಕೈಬಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೊಹ್ಲಿಗೂ ಅಲ್ಲ, ಕೃನಾಲ್​ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment