ಪಹಲ್ಗಾಮ್​ನಲ್ಲಿ ಜೀವ ಕಳೆದುಕೊಂಡ ಲೆಫ್ಟಿನೆಂಟ್​ನ​ ಪತ್ನಿ ಟ್ರೋಲ್​.. ಅಸಲಿಗೆ ಆಗಿದ್ದೇನು..?

author-image
Veena Gangani
Updated On
ಪಹಲ್ಗಾಮ್​ನಲ್ಲಿ ಜೀವ ಕಳೆದುಕೊಂಡ ಲೆಫ್ಟಿನೆಂಟ್​ನ​ ಪತ್ನಿ ಟ್ರೋಲ್​.. ಅಸಲಿಗೆ ಆಗಿದ್ದೇನು..?
Advertisment
  • ಲೆಫ್ಟಿನೆಂಟ್ ವಿನಯ್ ನರ್ವಾಲ್ ಪತ್ನಿ ಟ್ರೋಲ್ ಆಗ್ತಾ ಇರೋದಕ್ಕೆ
  • ಪಹಲ್ಲಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಜೀವಬಿಟ್ಟಿದ್ದ ಲೆಫ್ಟಿನೆಂಟ್
  • ಅಷ್ಟಕ್ಕೂ ಲೆಫ್ಟಿನೆಂಟ್ ಪತ್ನಿ ಹಿಮಾಂಶಿ ನರ್ವಾಲ್ ಹೇಳಿದ್ದೇನು?

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಪ್ರವಾಸಿಗರಲ್ಲಿ ವಿನಯ್ ನರ್ವಾಲ್ ಕೂಡ ಒಬ್ಬರು. ಧರ್ಮ ಯಾವುದು ಎಂದು ಕೇಳಿ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಮುಂದೆಯೇ ಗುಂಡಿಕ್ಕಿ ಕೊಂದಿದ್ದರು.

ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ

publive-image

ಮದುವೆಯಾದ 6 ದಿನಕ್ಕೆ ಪತಿಯನ್ನು ಕಳೆದುಕೊಂಡಿದ್ದ ಪತ್ನಿ ಹಿಮಾಂಶಿ ನರ್ವಾಲ್ ಇದೀಗ ಟ್ರೋಲ್​ಗೆ ಒಳಗಾಗಿದ್ದಾರೆ. ಈ ಹಿಂದೆ ಹಿಮಾಂಶಿ ನರ್ವಾಲ್ ಅವರು, ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ಜನರು ದ್ವೇಷ ಸಾಧಿಸಬಾರದು ಎಂದು ಹೇಳಿದ್ದರು. ಅದೇ ಹೇಳಿಕೆಗಳನ್ನು ಇಟ್ಟುಕೊಂಡು ಟ್ರೋಲ್‌ ಮಾಡಲಾಗುತ್ತಿದೆ. ಇದೀಗ ಹಿಮಾಂಶಿ ನರ್ವಾಲ್ ಅಭಿಪ್ರಾಯವನ್ನು ಗುರಿಯಾಗಿಸಿ ಟ್ರೋಲ್ ಮಾಡುವುದು ಖಂಡನೀಯ ಮತ್ತು ದುರದೃಷ್ಟಕರ ಎಂದು ಮಹಿಳಾ ಆಯೋಗ ಹೇಳಿದೆ.


">May 4, 2025


ಯಾವುದೇ ವಿಚಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗ ಯಾವಾಗಲೂ ಸಭ್ಯ ಮತ್ತು ಸಾಂವಿಧಾನಿಕ ಮಿತಿಯೊಳಗೆ ವ್ಯಕ್ತಪಡಿಸಬೇಕು. ರಾಷ್ಟ್ರೀಯ ಮಹಿಳಾ ಆಯೋಗವು ಪ್ರತಿಯೊಬ್ಬ ಮಹಿಳೆಯ ಗೌರವ ಮತ್ತು ಘನತೆಯನ್ನು ರಕ್ಷಿಸಲು ಬದ್ಧವಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ, ದೇಶದ ಅನೇಕ ನಾಗರಿಕರು ಸಾವನ್ನಪ್ಪಿದರು. ಈ ದಾಳಿಯಲ್ಲಿ, ಲೆಫ್ಟಿನೆಂಟ್ ವಿನಯ್ ನರ್ವಾಲ್ ಜಿ ಅವರನ್ನು ಅವರ ಧರ್ಮದ ಬಗ್ಗೆ ಕೇಳಿದ ನಂತರ ಗುಂಡು ಹಾರಿಸಿ ಕೊಲ್ಲಲಾಯಿತು. ಈ ಭಯೋತ್ಪಾದಕ ದಾಳಿಯಿಂದ ಇಡೀ ರಾಷ್ಟ್ರವು ನೋಯುತ್ತಿದೆ ಮತ್ತು ಆಕ್ರೋಶಗೊಂಡಿದೆ. ಲೆಫ್ಟಿನೆಂಟ್ ವಿನಯ್ ನರ್ವಾಲ್ ಜಿ ಅವರ ಮರಣದ ನಂತರ, ಅವರ ಪತ್ನಿ ಶ್ರೀಮತಿ ಹಿಮಾಂಶಿ ನರ್ವಾಲ್ ಜಿ ಅವರ ಹೇಳಿಕೆಗಳಲ್ಲಿ ಒಂದನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಗುರಿಯಾಗಿಸಲಾಗುತ್ತಿರುವ ರೀತಿ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ. ಮಹಿಳೆಯ ಸೈದ್ಧಾಂತಿಕ ಅಭಿವ್ಯಕ್ತಿ ಅಥವಾ ವೈಯಕ್ತಿಕ ಜೀವನದ ಆಧಾರದ ಮೇಲೆ ಅವರನ್ನು ಟ್ರೋಲ್ ಮಾಡುವುದು ಯಾವುದೇ ರೂಪದಲ್ಲಿ ಸ್ವೀಕಾರಾರ್ಹವಲ್ಲ ಎಂದು ಎನ್‌ಸಿಡಬ್ಲ್ಯುಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment