newsfirstkannada.com

ಕಿಡ್ನಿ ಮಾರಿ ಬೆಂಗಳೂರಲ್ಲಿ ಮನೆ ಕಟ್ಟಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ನಿತ್ಯ ಕಿರುಕುಳ; ಆಗಿದ್ದೇನು?

Share :

Published May 13, 2024 at 9:16pm

Update May 13, 2024 at 9:10pm

    ಕಿಡ್ನಿ ಮಾರಾಟ ಮಾಡಿ ಸ್ವಂತ ಮನೆ ಕಟ್ಟಿದ ವ್ಯಕ್ತಿಗೆ ನೆಮ್ಮದಿ ಇಲ್ಲ

    ವ್ಯಕ್ತಿ ವಿರುದ್ಧ ಜಿದ್ದು ಹಿಡ್ಕೊಂಡು ಆಗಾಗ ಗಲಾಟೆ ಮಾಡುತ್ತಿದ್ದಾರೆ

    ಸ್ವಂತ ಮನೆ ಕಟ್ಟೋದಕ್ಕೆ ಹಣ ಕಡಿಮೆ ಬಿದ್ದಾಗ ಕಿಡ್ನಿ ಮಾರಿದ್ದನು

ಬೆಂಗಳೂರು: ತನ್ನ ಕಿಡ್ನಿ ಮಾರಾಟ ಮಾಡಿ ಮನೆ ಕಟ್ಟಿಕೊಂಡಿದ್ದ ವ್ಯಕ್ತಿಗೆ ಪಕ್ಕದ ಮನೆಯವ್ರು ನಿತ್ಯ ಒಂದಲ್ಲ, ಒಂದು ರೀತಿಯಲ್ಲಿ ಕಾಟ ಕೊಡ್ತಿದ್ದಾರೆ. ಆದ್ರೆ ಈ ಬಾರಿ ಕಸದ ವಿಚಾರಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

 

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಬೆಂಗಳೂರಿನ ಉಳ್ಳಾಲದ ವಿನಾಯಕ ಲೇಔಟ್ ನಿವಾಸಿ ಪಾರ್ಥ ಎನ್ನುವರು ತನ್ನ ಕಿಡ್ನಿಯನ್ನು ಮಾರಾಟ ಮಾಡಿ ಸ್ವಂತ ಮನೆ ಕಟ್ಟಿಕೊಂಡಿದ್ದರು. ಕಿಡ್ನಿ ಮಾರಾಟ ಮಾಡಿದ್ದ ವ್ಯಕ್ತಿಯ ಪುಣ್ಯಕ್ಕೆ ಆರೋಗ್ಯವಾಗಿದ್ದು ಫ್ಯಾಮಿಲಿ ಜೊತೆ ಖುಷಿ ಖುಷಿಯಾಗಿ ಇದ್ದರು. ಆದ್ರೆ ಪಕ್ಕದ ಮನೆಯ ತಮಿಳುಗನೊಬ್ಬ ಕಾಟ ಕೊಡುತ್ತಿದ್ದಾನೆ. ಮನೆಯ ಪಕ್ಕದಲ್ಲಿ ಕಸ ಹಾಕಬೇಡಿ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಮನೆಗೆ ಬಂದು ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಕಸ ಹಾಕಬೇಡಿ ಅಂದಿದ್ದಕ್ಕೆನೆ ಜಿದ್ದು ಹಿಡ್ಕೊಂಡು ಆಗಾಗ ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಆತನ ತಾಯಿ, ಮಗ ಮನೆ ಬಿಟ್ಟು ಹೋಗಿದ್ದಾರೆ. ಆದ್ರೆ ಈ ಬಾರಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಕಸ ವಿಚಾರಕ್ಕೆ ಶುರುವಾಗಿದ್ದ ಗಲಾಟೆ ಈಗ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಪಕ್ಕದ ಮನೆಯವರು ಗಲಾಟೆ ತೆಗೆಯುತ್ತಿದ್ದಾರೆ. ಮನೆಯ ವಾಟರ್ ಪೈಪ್​ಲೈನ್ ಕಟ್ ಮಾಡೋದು, ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಬೀಳಿಸೋದು. ಮನೆಗೆ ಸಂಪರ್ಕ ಇರುವ ರಸ್ತೆಯನ್ನು ಡ್ಯಾಮೇಜ್ ಮಾಡೋದು ಹೀಗೆ ಬೆಳಗ್ಗೆ ಎಂದ್ರೆ ಒಂದೊಂದು ಕಾಟ ಕೊಡಲು ಶುರು ಮಾಡುತ್ತಾರಂತೆ. ನಿತ್ಯದ ಕಿರಿಕ್ ಆಗಿದ್ದು ಅಕ್ಕಪಕ್ಕದ ಮನೆ ಹುಡುಗರು ಸೇರಿ ಹಲವು ಸಲ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಉಳ್ಳಾಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಅಕ್ಕ-ಪಕ್ಕದ ಮನೆಯವರಿಎಲ್ಲ ಎಚ್ಚರಿಕೆ ನೀಡಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಡ್ನಿ ಮಾರಿ ಬೆಂಗಳೂರಲ್ಲಿ ಮನೆ ಕಟ್ಟಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ನಿತ್ಯ ಕಿರುಕುಳ; ಆಗಿದ್ದೇನು?

https://newsfirstlive.com/wp-content/uploads/2024/05/bng-fight.jpg

    ಕಿಡ್ನಿ ಮಾರಾಟ ಮಾಡಿ ಸ್ವಂತ ಮನೆ ಕಟ್ಟಿದ ವ್ಯಕ್ತಿಗೆ ನೆಮ್ಮದಿ ಇಲ್ಲ

    ವ್ಯಕ್ತಿ ವಿರುದ್ಧ ಜಿದ್ದು ಹಿಡ್ಕೊಂಡು ಆಗಾಗ ಗಲಾಟೆ ಮಾಡುತ್ತಿದ್ದಾರೆ

    ಸ್ವಂತ ಮನೆ ಕಟ್ಟೋದಕ್ಕೆ ಹಣ ಕಡಿಮೆ ಬಿದ್ದಾಗ ಕಿಡ್ನಿ ಮಾರಿದ್ದನು

ಬೆಂಗಳೂರು: ತನ್ನ ಕಿಡ್ನಿ ಮಾರಾಟ ಮಾಡಿ ಮನೆ ಕಟ್ಟಿಕೊಂಡಿದ್ದ ವ್ಯಕ್ತಿಗೆ ಪಕ್ಕದ ಮನೆಯವ್ರು ನಿತ್ಯ ಒಂದಲ್ಲ, ಒಂದು ರೀತಿಯಲ್ಲಿ ಕಾಟ ಕೊಡ್ತಿದ್ದಾರೆ. ಆದ್ರೆ ಈ ಬಾರಿ ಕಸದ ವಿಚಾರಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

 

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಬೆಂಗಳೂರಿನ ಉಳ್ಳಾಲದ ವಿನಾಯಕ ಲೇಔಟ್ ನಿವಾಸಿ ಪಾರ್ಥ ಎನ್ನುವರು ತನ್ನ ಕಿಡ್ನಿಯನ್ನು ಮಾರಾಟ ಮಾಡಿ ಸ್ವಂತ ಮನೆ ಕಟ್ಟಿಕೊಂಡಿದ್ದರು. ಕಿಡ್ನಿ ಮಾರಾಟ ಮಾಡಿದ್ದ ವ್ಯಕ್ತಿಯ ಪುಣ್ಯಕ್ಕೆ ಆರೋಗ್ಯವಾಗಿದ್ದು ಫ್ಯಾಮಿಲಿ ಜೊತೆ ಖುಷಿ ಖುಷಿಯಾಗಿ ಇದ್ದರು. ಆದ್ರೆ ಪಕ್ಕದ ಮನೆಯ ತಮಿಳುಗನೊಬ್ಬ ಕಾಟ ಕೊಡುತ್ತಿದ್ದಾನೆ. ಮನೆಯ ಪಕ್ಕದಲ್ಲಿ ಕಸ ಹಾಕಬೇಡಿ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಮನೆಗೆ ಬಂದು ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಕಸ ಹಾಕಬೇಡಿ ಅಂದಿದ್ದಕ್ಕೆನೆ ಜಿದ್ದು ಹಿಡ್ಕೊಂಡು ಆಗಾಗ ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಆತನ ತಾಯಿ, ಮಗ ಮನೆ ಬಿಟ್ಟು ಹೋಗಿದ್ದಾರೆ. ಆದ್ರೆ ಈ ಬಾರಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಕಸ ವಿಚಾರಕ್ಕೆ ಶುರುವಾಗಿದ್ದ ಗಲಾಟೆ ಈಗ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಪಕ್ಕದ ಮನೆಯವರು ಗಲಾಟೆ ತೆಗೆಯುತ್ತಿದ್ದಾರೆ. ಮನೆಯ ವಾಟರ್ ಪೈಪ್​ಲೈನ್ ಕಟ್ ಮಾಡೋದು, ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಬೀಳಿಸೋದು. ಮನೆಗೆ ಸಂಪರ್ಕ ಇರುವ ರಸ್ತೆಯನ್ನು ಡ್ಯಾಮೇಜ್ ಮಾಡೋದು ಹೀಗೆ ಬೆಳಗ್ಗೆ ಎಂದ್ರೆ ಒಂದೊಂದು ಕಾಟ ಕೊಡಲು ಶುರು ಮಾಡುತ್ತಾರಂತೆ. ನಿತ್ಯದ ಕಿರಿಕ್ ಆಗಿದ್ದು ಅಕ್ಕಪಕ್ಕದ ಮನೆ ಹುಡುಗರು ಸೇರಿ ಹಲವು ಸಲ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಉಳ್ಳಾಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಅಕ್ಕ-ಪಕ್ಕದ ಮನೆಯವರಿಎಲ್ಲ ಎಚ್ಚರಿಕೆ ನೀಡಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More