/newsfirstlive-kannada/media/post_attachments/wp-content/uploads/2025/02/puttakana-makkalu.jpg)
ಪುಟ್ಟಕ್ಕನ ಮಕ್ಕಳು ಸೀರಿಯಲ್ ವೀಕ್ಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಸ್ನೇಹಾ ಪಾತ್ರ ಮುಕ್ತಾಯಗೊಂಡು ಬಹಳ ದಿನಗಳು ಕಳೆದು ಹೋಗಿದೆ. ಆದ್ರೆ, ಡಿಸಿ ಸ್ನೇಹಾ ಸಾಯೋ ಮೊದಲು ಅಂಗಾಗ ದಾನ ಮಾಡಿರುತ್ತಾಳೆ. ಸ್ನೇಹಾಳ ಹೃದಯವನ್ನ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಮತ್ತೊಂದು ಜೀವಕ್ಕೆ ಕಸಿ ಮಾಡಲಾಯ್ತು. ಆ ಹೃದಯವನ್ನ ಪಡೆದುಕೊಂಡು ಪುಟ್ಟಕನ ಮನೆಯಲ್ಲೇ ವಾಸಿಸುತ್ತಿದ್ದಳು ಸ್ನೇಹ.
ಇದನ್ನೂ ಓದಿ:ರಾಮಾಚಾರಿ ಸೀರಿಯಲ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ನಟಿ ದೇವಿಕಾ ಭಟ್ ಸೀರಿಯಲ್ ಬಿಡೋದಕ್ಕೆ ಕಾರಣ ಇದೇನಾ?
ಇದೀಗ ಡಿಸಿ ಸ್ನೇಹಾಳ ಹೃದಯವನ್ನು ಪಡೆದುಕೊಂಡು ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್ ಸೀರಿಯಲ್ನಿಂದ ಆಚೆ ಬಂದಿದ್ದಾರೆ. ಹೌದು, ಜೀ ಕನ್ನಡ ರಿಲೀಸ್ ಮಾಡಿದ ಹೊರ ಪ್ರೋಮೋದಲ್ಲಿ ಅಪೂರ್ವ ನಾಗರಾಜ್ ಬದಲು ಮತ್ತೊಬ್ಬ ನಟಿಯ ಎಂಟ್ರಿಯಾಗಿದೆ.
ಈ ಹಿಂದೆ ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್ ಅಂತ ಆಚೆ ಬಂದಿದ್ದು ಏಕೆ ಅಂತ ತಿಳಿದು ಬಂದಿಲ್ಲ. ಆದ್ರೆ, ಅಪೂರ್ವ ನಾಗರಾಜ್ ಪಾತ್ರಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಮಾಚಾರಿ ಸೀರಿಯಲ್ ನಟಿ ಆಗಮನವಾಗಿದೆ. ಹೌದು, ರಾಮಾಚಾರಿ ಸೀರಿಯಲ್ನಲ್ಲಿ ಕಿಟ್ಟಿ ಹೆಂಡತಿ ರುಕ್ಮಿಣಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಇದೀಗ ರಾಮಾಚಾರಿ ಸೀರಿಯಲ್ ನಟಿ ವಿದ್ಯಾ ರಾಜ್ ಅವರು ಅಚ್ಚರಿ ಎಂಬಂತೆ ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ವಿದ್ಯಾ ರಾಜ್ ಅವರು ಕನ್ನಡ ಹಾಗೂ ತೆಲುಗಿನ ಸೀರಿಯಲ್ಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಕನ್ನಡದ 'ಕನ್ಯಾದಾನ' ಸೀರಿಯಲ್ನಲ್ಲಿ ನಟಿ ವಿದ್ಯಾ ರಾಜ್ ಅಭಿನಯಿಸಿದ್ದರು. ಕನ್ನಡದ ನಮಸ್ತೆ ಘೋಸ್ಟ್, ಬಹದ್ದೂರ್ ಗಂಡು ಚಿತ್ರಗಳಲ್ಲಿ ವಿದ್ಯಾ ರಾಜ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ