/newsfirstlive-kannada/media/post_attachments/wp-content/uploads/2025/06/Ahmedabad-plane-crash-8.jpg)
ಸಪ್ತಸಾಗರದಾಚೆಯಿದ್ದ ಗಂಡನ ಭೇಟಿಯಾಗಲು ವಿಮಾನ ಹತ್ತಿದ್ದ ನವವಧು ವಿಮಾನ ದುರಂತದಲ್ಲಿ ಕಣ್ಮುಚ್ಚಿದ್ದಾಳೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್ಪುರೋಹಿತ್ ( Khushboo Rajpurohit) ಎಂಬಾಕೆ ಇದೇ ವರ್ಷದ ಜನವರಿಯಲ್ಲಿ, ಮನ್ಫೂಲ್ ಸಿಂಗ್ ಅನ್ನೋರ ಮದುವೆ ಆಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್ನಲ್ಲಿ ವ್ಯಾಸಾಂಗ ಮಾಡುತ್ತಿದ್ದರಂತೆ. ಹೀಗಾಗಿ ಪತಿಯನ್ನ ಮೊದಲ ಬಾರಿ ಭೇಟಿಯಾಗಲು ಖುಷ್ಬು ಲಂಡನ್ ಫ್ಲೈಟ್ ಹತ್ತಿದ್ದರು..
ಇದನ್ನೂ ಓದಿ: ವಿಜಯ್ ರೂಪಾನಿ ದುರಂತ ಅಂತ್ಯ.. ಶೋಕದಲ್ಲಿ ಮುಳುಗಿದ ಗುಜರಾತ್..
ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳ ನೆಲಕ್ಕುರುಳಿ ಬೆಂಕಿ ಉಗುಳಿತ್ತು. ಈ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿ 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್ಗಳಿಗಿಂತ ಹೆಚ್ಚು ಇಂಧನ ತುಂಬಲಾಗಿತ್ತು. ವಿಮಾನ ಪತನಗೊಂಡ ಕೂಡಲೇ ಅಷ್ಟೂ ಇಂಧನಕ್ಕೆ ಬೆಂಕಿ ತಗುಲಿ ದೊಡ್ಡ ಅನಾಹುತ ಸಂಭವಿಸಿದೆ.
#BREAKING : Khushboo Rajpurohit, a resident of Araba Dudawata village in Balotra, Rajasthan, was on a journey to reunite with her husband in London after their wedding five months ago.
She was traveling to meet her husband, Dr. Vipul Singh Rajpurohit, a doctor in London.… pic.twitter.com/HrEj8IJL1V— upuknews (@upuknews1) June 12, 2025
ಖುಷ್ಬೂ ಅವರಂತೆ.. ಯುಕೆಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದವರು, ಬಿಸ್ನೆಸ್ ಮಾಡಲು ತೆರಳುತ್ತಿದ್ದವರು, ಉದ್ಯೋಗಕ್ಕಾಗಿ ಹೋಗುತ್ತಿದ್ದವರು ಅನೇಕರಿದ್ದರು. ಕನಸುಗಳ ಬುತ್ತಿ ಕಟ್ಟಿ ಲಂಡನ್ ವಿಮಾನ ಹತ್ತಿದವರು ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಮಾತ್ರ ಬದುಕುಳಿದಿದ್ದಾರೆ.
ಇದನ್ನೂ ಓದಿ: ‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..
https://twitter.com/Surajrawat097/status/1933191930097160539
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ