/newsfirstlive-kannada/media/post_attachments/wp-content/uploads/2025/07/ninadena.jpg)
ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳಲ್ಲಿ ಹಲವು ಮೇಜರ್ ಬದಲಾವಣೆಗಳು ಆಗುತ್ತಿವೆ. ಜೊತೆಗೆ ಹೊಸ ಸೀರಿಯಲ್ ಲಾಂಚ್ ಆಗ್ತಿದ್ದು, ಎರಡ ಅಧ್ಯಾಯದ ಪ್ರೇಮ ಕಥೆ ಮುಕ್ತಾಯವಾಗ್ತಿದೆ. ಹೌದು, ದಿಲೀಪ್ ಶೆಟ್ಟಿ ಹಾಗೂ ಖುಷಿ ಶಿವು ಮುಖ್ಯ ಭೂಮಿಕೆಯಲ್ಲಿರೋ ಧಾರಾವಾಹಿ ನೀನಾದೆ ನಾ ಮುಕ್ತಾಯವಾಗಿದೆ.
ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?
ಈ ಸ್ಟೋರಿ ಎರಡು ಅಧ್ಯಾಯದಲ್ಲಿ ಪ್ರಸಾರಕಂಡಿತು. ಮೊದಲ ಅಧ್ಯಾಯ ಜನಪ್ರಿಯತೆ ಪಡೆದಿತ್ತು. ರೌಡಿ ಅಂತಿದ್ದ ತುಂಬು ಕುಟುಂಬದ ವಿಕ್ರಮ್ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದಳು ವೇದಾ. ವೇದ್ಯಾ, ದಿಲ್ಖುಷ್ ಅಂತಲೇ ಈ ಜೋಡಿ ಅಪಾರ ಜನಮಣ್ಣನೆ ಪಡೆದಿತ್ತು.
ಈ ಯಶಸ್ಸಿನ ಬೆನ್ನಲ್ಲೆ ಎರಡನೇ ಅಧ್ಯಾಯಕ್ಕೆ ಮುಂದಾಯ್ತು ತಂಡ. ಕಥೆ ಒಂದೋಳ್ಳೆ ವೈಂಡಪ್ ಕೊಟ್ಟು ಕರಾವಳಿಯಲ್ಲಿ ಹೊಸ ಪ್ರೇಮ ಕಥೆ ಶುರುಮಾಡ್ತು. ಆದ್ರೆ ಎರಡನೇ ಅಧ್ಯಾಯ ಅಷ್ಟಾಗಿ ಗೆಲುವು ಕಾಣಲಿಲ್ಲ. ಹೀಗಾಗಿ ಸ್ಟೋರಿನ ಲ್ಯಾಗ್ ಮಾಡ್ದೇ ಮುಕ್ತಾಯ ಮಾಡಿದೆ ವಾಹಿನಿ. ನೀನಾದೆ ನಾ ಮುಕ್ತಾಯದ ಬೆನ್ನಲ್ಲೆ ಹೊಸ ಧಾರಾವಾಹಿ ಎಂಟ್ರಿ ಕೊಡ್ತಿದೆ. ವಾಸುದೇವ ಕುಟಂಬ.
ತಮಿಳು ಧಾರಾವಾಹಿಯ ರಿಮೇಕ್ ಸ್ಟೋರಿ ಆಗಿದ್ದು, ನಾಲ್ವರು ಹೆಣ್ಣುಮಕ್ಕಳನ್ನ ಹೆತ್ತ ತಂದೆ ತಾಯಿ ಏನೆಲ್ಲಾ ಕಷ್ಟ ಅನುಭವಿಸ್ತಾರೆ ಎಂಬುದರ ಕುರಿತು ಕಥೆ ಸಾಗಲಿದೆ. ಅಮ್ಮನ ಪಾತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ಸುಧಾ ನರಸಿಂಹ ಮೂರ್ತಿ, ತಂದೆ ವಾಸುದೇವ ಪಾತ್ರದಲ್ಲಿ ನಟ ಅವಿನಾಶ್ ಕಾಣಿಸಿಕೊಳ್ತಿದ್ದಾರೆ. ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳ್ತಿದ್ದಾರೆ. ಇವ್ರ ಪಾತ್ರವೇ ಕಥೆಗೆ ಜೀವಾಳ.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ಇನ್ನೂ ರಾಮಾಚಾರಿ ಖ್ಯಾತಿಯ ಅಂಜಲಿ ಅವ್ರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡ್ತಿದ್ದಾರೆ. ನಾಯಕಿ ಪಾತ್ರಕ್ಕೆ ಭಾವನಾ ಪಟೀಲ್ ಬಣ್ಣ ಹಚ್ತಿದ್ದಾರೆ. ನಾಯಕ ಯಾರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಹೊಸ ಧಾರಾವಾಹಿ ಅನೌನ್ಸ್ ಆದ ಬೆನ್ನಲ್ಲೆ, ಮತ್ತೊಂದು ವಿಶೇಷತೆ ಅಂದ್ರೇ ಆಸೆ ಧಾರಾವಾಹಿ ಪ್ರತಿ ದಿನ 7 ರಿಂದ 8 ಗಂಟೆಯವರೆಗೂ 1 ಗಂಟೆ ಪ್ರಸಾರವಾಗಲಿದ್ದು, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಶ್ರೀ ದೇವಿ ಮಾಹತ್ಮೆ ರಾತ್ರಿ 9 ಗಂಟೆಗೆ ಬ್ಯಾಕ್ ಟು ಬ್ಯಾಕ್ ಪ್ರಸಾರವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ