/newsfirstlive-kannada/media/post_attachments/wp-content/uploads/2025/04/amruthadhaare.jpg)
ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್​ನಲ್ಲಿ ಗೌತಮ್​ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಪ್ರೆಗ್ನೆಂಟ್​ ಆಗಿರೋ ಪತ್ನಿ ಕನಸನ್ನ ಒಂದೊಂದಾಗಿಯೇ ಈಡೇರಿಸುತ್ತಿದ್ದಾರೆ ಡುಮ್ಮು ಸರ್​.
ಇದನ್ನೂ ಓದಿ:ರೀಲ್ಸ್ ಗೆಳೆಯನಿಗಾಗಿ ರಿಯಲ್ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!
/newsfirstlive-kannada/media/post_attachments/wp-content/uploads/2025/04/amruthadhaare3.jpg)
ಪ್ರತಿ ಹುಡುಗಿಗೂ ಮದುವೆ ಆಗೋ ಹುಡುಗನ ಬಗ್ಗೆ ಬೆಟ್ಟದಷ್ಟು ಕನಸು ಇರುತ್ತೆ. ವಿವಾಹ ನಂತರ ಹಾಗಿರ್ಬೇಕು. ಹೀಗ್​ ಇರ್ಬೇಕು ಅನ್ನೋ ಆಸೆ ಇರುತ್ತೆ. ಭೂಮಿ ಕೂಡ ಅಷ್ಟೇ ಪ್ರಿಯತಮನ ಬಗ್ಗೆ ಕಟ್ಟಿದ್ದ ಕನಸುಗಳನ್ನ ಡೈರಿಯಲ್ಲಿ ಬರೆದಿಟ್ಟಿರ್ತಾಳೆ. ಡೈರಿ ಓದಿದ್ದ ಡುಮ್ಮು ಸರ್​ ಪ್ರೀತಿಯ ಮಡದಿ ಕನಸನ್ನ ನನಸು ಮಾಡ್ತಿದ್ದಾರೆ. ಫಾರ್ಮಲ್ಸ್​ ಬಿಟ್ಟು ಕಾಲೇಜ್​ ಹುಡುಗನಂತೆ ಸಜ್ಜಾಗಿ ಭೂಮಿ ಜೊತೆ ರೋಮ್ಯಾಂಟಿಕ್​ ರೈಡ್​ ಹೊರಟಿದ್ದಾರೆ.
/newsfirstlive-kannada/media/post_attachments/wp-content/uploads/2025/04/amruthadhaare1.jpg)
ರಾಜೇಶ್​ ನಟರಂಗ ಹಾಗೂ ಛಾಯಾ ಸಿಂಗ್​ ಅಭಿನಯ ಸೂಪರ್​. ಜೋಡಿಯಾಗಿ ವೀಕ್ಷಕರಿಗೆ ಕಚಗುಳಿ ಇಡ್ತಿದ್ದಾರೆ. ಇನ್ನೂ, ಸೀರಿಯಲ್​ ಸ್ಟೋರಿಗೆ ಬರೋದಾದ್ರೇ, ಗೌತಮ್​ ತಾಯಿಗೆ ಹಳೆ ನೆನಪುಗಳು ಮರುಕಳಿಸಿವೆ. ಆದ್ರೆ ಶಕುಂತಲಾ ಕುತಂತ್ರಕ್ಕೆ ಕುಟುಂಬ ಸರ್ವನಾಶ ಆಗ್ಬಿಡುತ್ತೋ ಎಂಬ ಭಯದಲ್ಲೇ ಕಣ್ಮುಂದೆ ಇರೋ ಮಗ-ಮಗಳನ್ನ ಮುದ್ದಾಡೋಕೆ ಆಗ್ದೇ ಒದ್ದಾಡುತ್ತಿದೆ ತಾಯಿ ಜೀವ.
/newsfirstlive-kannada/media/post_attachments/wp-content/uploads/2025/04/amruthadhaare2.jpg)
ಮತ್ತೊಂದು ಕಡೆ ಭೂಮಿ ಧರಸಿದ್ದ ಸರಕ್ಕೆ ಮೈಕ್​ ಫಿಕ್ಸ್ ಮಾಡಿದ್ದಳು ಶಕುಂತಲಾ. ಈ ಸತ್ಯ ಬಯಲಾಗೋ ಸೂಚನೆ ಸಿಕ್ಕಿದೆ. ರಹಸ್ಯ ಕಾರ್ಯಾಚರಣೆ ಮಾಡ್ತಿದ್ದಾಳೆ ಭೂಮಿ. ಒಟ್ಟಾರೆ ಪ್ರಾರಂಭದಿಂದಲೂ ಅಮೃತಧಾರೆ ವೀಕ್ಷಕರ ನಂಬಿಕೆ, ಪ್ರೀತಿ ಉಳಿಸಿಕೊಂಡು ಸಾಗ್ತಿದೆ. ಮತ್ತಷ್ಟು ರೋಚಕ ಸಂಚಿಕೆಗಳೂ ನಿಮಗಾಗಿ ರೆಡಿಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us