ಅಣ್ಣಯ್ಯ ಸೀರಿಯಲ್​ನಲ್ಲಿ ರೋಚಕ ಟ್ವಿಸ್ಟ್​.. ಪೆದ್ದ ಮನು ಕೈಯಲ್ಲಿರೋ ರಾಜದಂಡದಲ್ಲಿ ಅಡಗಿದೆ ಮಹಾ ಗುಟ್ಟು!

author-image
Veena Gangani
Updated On
ಲೇಟಾಗಿ ಬಂದ್ರು ಲೇಟೆಸ್ಟಾಗಿ ಹವಾ ಕ್ರಿಯೇಟ್ ಮಾಡ್ತೀದೆ ಕರ್ಣ ಸೀರಿಯಲ್.. ಇಲ್ಲಿದೆ ವಿಶೇಷ..!​​
Advertisment
  • ಬಚ್ಚಿಟ್ಟ ಸತ್ಯಗಳನ್ನ ಬಯಲು ಮಾಡುತ್ತಾ ಮಾಸ್ತಿಕೊಪ್ಪಲು?
  • ಪೆದ್ದ ಮನು ಕೈಯಲ್ಲಿರೋ ರಾಜದಂಡದಲ್ಲಿ ಅಡಗಿದೆ ಗುಟ್ಟು
  • ಹೊಸ ಅವತಾರದಲ್ಲಿ ಮನು, ಅಚ್ಚರಿಗೊಂಡ ವೀಕ್ಷಕರು

ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ಈಗ ಶಿವು ಮುದ್ದಿನ ತಂಗಿ ರಾಣಿ ಮದುವೆ ಸಂಭ್ರಮ ಜೋರಾಗಿ ನಡೀತಿದೆ. ಸುಳ್ಳಿನ ಮಂಟಪದಲ್ಲಿ ರಾಜಾ-ರಾಣಿ ವಧು-ವರರಾಗಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್​​ನಲ್ಲಿ ಬಿಸಿಬಿಸಿ ಟಾಕ್..!

publive-image

ಹೌದು, ಮನು ಬಗ್ಗೆ ಸಾವಿರ ಕನಸು ಕಂಡಿರೋ ರಾಣಿಗೆ ಅವನೊಬ್ಬ ಪೆದ್ದ ಅನ್ನೋ ಅರಿವಿಲ್ಲ. ಆಸ್ತಿಗಾಗಿ ಸಂಚು ರೂಪಿಸಿರೋ ವಿಲನ್​ಗಳು ರಾಣಿ ಮುಗ್ಧ ಹುಡುಗಿ ಅನ್ಕೊಂಡಿದ್ದರೆ. ಆದ್ರೇ, ಸಿಡಿದೆದ್ರೇ ರಾಣಿ ಮಿಷನ್​ ಗನ್ನು ಅನ್ನೋ ಸತ್ಯ ಮನು ಅಮ್ಮನಿಗೆ ಮಾತ್ರ ಗೊತ್ತು. ಈ ಸತ್ಯ-ಸುಳ್ಳಿನ ಕಣ್ಣಾಮುಚ್ಚಾಲೆ ನಡುವೆ ಮತ್ತೊಂದು ರೋಚಕ ತಿರುವು ಎದುರಾಗ್ತಿದೆ.

publive-image

ಪೆದ್ದು ಮನು ಗೌಡನ ಪೂರ್ವಪಾರ ತೆರೆದುಕೊಳ್ತಿದೆ. ಮನು ಯಾಕೆ ಹೀಗಾದ? ಯಾವ ರಾಜವಂಶಸ್ಥದ ಕುಡಿ ಇವನು? ಈ ರಹಸ್ಯದ ಸಂಚಿಕೆಗಳು ರೋಮಾಂಚನ ಸೃಷ್ಟಿಸಲಿವೆ. ರಾಣಿ-ಮನು ಮದುವೆ ಆಗೋದಂತು ಫಿಕ್ಸು. ಆದ್ರೆ ಆ ತಯಾರಿ, ಅಲ್ಲಿ ಬರೋ ಪರಿಸ್ಥಿತಿ, ದೃಶ್ಯಗಳು ಮಹಾ ಮನರಂಜನೆಯ ಹಬ್ಬ ತರಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment